AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕವಿ ಡಾ. ಸಿದ್ದಲಿಂಗಯ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಅವರ **ನುಡಿ ನಮನ**#avintvcom

1 min read
Featured Video Play Icon

*ನುಡಿ ನಮನ*

ಚಿಕ್ಕಮಗಳೂರು ಜಿಲ್ಲೆ.
ಕಡೂರು ತಾಲೂಕ್.

ಜೂನ್ 16,
ಕಡೂರು:
ಸಮ ಸಮಾಜದ ನಿರ್ಮಾಣಕ್ಕೆ ಬರಹದ ಮೂಲಕ ತಮ್ಮ ಸಮಾಜದತ್ತ ಬೆಳಕು ಮೂಡಿಸುವಲ್ಲಿ ಯಶಸ್ವಿಯಾದ ಡಾ. ಸಿದ್ದಲಿಂಗಯ್ಯ ಅವರು ಕೇವಲ ಸಾಹಿತಿ ಎನಿಸಿಕೊಳ್ಳದೆ ರಾಜಕೀಯ ಮತ್ತು ಸಂಘಟನಾ ವಲಯದಲ್ಲಿ ಸಾಕಷ್ಟು ಛಾಪು ಮೂಡಿಸಿದ್ದಾರೆ ಎಂದು ರೋಟರಿ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ಇತ್ತೀಚೆಗೆ ಕಡೂರಿನ ರೋಟರಿ ಕ್ಲಬ್ ನಲ್ಲಿ ನಾಡಿನ ದಿಗ್ಗಜರಾದ ಡಾ ಸಿದ್ದಲಿಂಗಯ್ಯ ಮತ್ತು ಯುವ ನಟ ಸಂಚಾರಿ ವಿಜಯ್ ಅವರ ಭಾವಚಿತ್ರಕ್ಕೆ ಭಾವಪೂರ್ಣ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಸಂಚಾರಿ ವಿಜಯ್ ನಮ್ಮೂರಿನ ಹೆಮ್ಮೆಯ ನಟ. ಬಾಲ್ಯದಿಂದಲೇ ಕಲೆ, ಸಾಹಿತ್ಯದತ್ತ ಒಲವಿದ್ದ ಅವರಿಗೆ, ಬೆಂಗಳೂರು ಅವರ ಕೆಲೆಗೆ ಒಂದು ನೆಲೆಯಾಯಿತು ಎಂದರು.

ಈ ನಾಡಿನ ಶ್ರೇಷ್ಠ ಕವಿ ಡಾ. ಸಿದ್ದಲಿಂಗಯ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಅವರ ನಿಧನ ಈ ನಾಡಿಗೆ ತುಂಬಲಾರದ ನಷ್ಟ ಎಂಬುದಾಗಿ ರೋಟರಿ ಮಾಜಿ ಅಧ್ಯಕ್ಷ ಟಿ. ಡಿ. ಸತ್ಯನ್ ತಿಳಿಸಿದರು.

ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ಸೃಷ್ಟಿಸುವುದರ ಜತೆಗೆ ತಮ್ಮ ಬದುಕಿನ ವೈಯಕ್ತಿಕ ನೋವುಗಳನ್ನೇ ತಮ್ಮ ಕವನಗಳ ಮೂಲಕ ಹೊರಮ್ಮಿಸಿ ಶೋಷಿತರ ಧ್ವನಿಯಾಗಿ ಪ್ರತಿಭಟಿಸಿದವರು ಡಾ. ಸಿದ್ದಲಿಂಗಯ್ಯನವರು, ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ನಮ್ಮೊಂದಿಗೆ ಮತ್ತಷ್ಟು ಕಾಲ ಇದ್ದು ಕಲೆಯ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕಿತ್ತು ಎಂದು ಮಾಜಿ ಅಧ್ಯಕ್ಷ ಕೆ ಹೆಚ್ ಎ ಪ್ರಸನ್ನ ತಿಳಿಸಿದರು.

ಹಿರಿಯ ಸದಸ್ಯ ಎಸ್ ಕೃಷ್ಣಮೂರ್ತಿ, ಕೆ. ಬಿ. ದ್ವಾರಕನಾಥ ಬಾಬು, ಕಾರ್ಯದರ್ಶಿ ಕೆ. ಹೆಚ್. ಮಂಜುನಾಥ್, ಖಜಾಂಚಿ ಆರ್. ಜಿ. ಕೃಷ್ಣಸ್ವಾಮಿ, ಕೆ. ಹೆಚ್. ಶ್ರೀನಿವಾಸ್, ಹೆಚ್. ಕೆ. ಮಂಜುನಾಥ್, ಹೆಚ್. ಸಿ. ರೇವಣ ಸಿದ್ದಪ್ಪ, ಲಕ್ಷ್ಮೀಶ ಪಿ ಶಿರಹಟ್ಟಿ, ಎಂ. ಜಿ. ಮಂಜುನಾಥ್, ಗೋಪಿನಾಥ್, ಕೆ. ಪಿ. ರಾಘವೇಂದ್ರ ಮತ್ತಿತರು ಇದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author