*ಕಡೂರು ತಾಲ್ಲೂಕು ಪತ್ರಕರ್ತರಿಂದ ಡಾ.ಸಿದ್ದಲಿಂಗಯ್ಯ ಮತ್ತು ಸಂಚಾರಿ ವಿಜಯ್ ಅವರಿಗೆ ಶ್ರದ್ಧಾಂಜಲಿ*#avintvcom
1 min read
*ಕಡೂರು ತಾಲ್ಲೂಕು ಪತ್ರಕರ್ತರಿಂದ ಡಾ.ಸಿದ್ದಲಿಂಗಯ್ಯ ಮತ್ತು ಸಂಚಾರಿ ವಿಜಯ್ ಅವರಿಗೆ ಶ್ರದ್ಧಾಂಜಲಿ*
ಕಡೂರು:
ಕರ್ನಾಟಕ ರಾಜ್ಯ ಕಾರ್ಯನಿರತ ಪರ್ತಕರ್ತರ ಸಂಘ(ರಿ.) ಕಡೂರು ತಾಲೂಕು ಘಟಕದ ವತಿಯಿಂದ ಇತ್ತೀಚೆಗೆ ನಮ್ಮನ್ನು ಅಗಲಿದ ಕವಿ ಡಾ:ಸಿದ್ಧಲಿಂಗಯ್ಯನವರು ಹಾಗೂ ತಾಲೂಕಿನ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಜಿಲ್ಲಾಅಧ್ಯಕ್ಷ ಟಿ.ಎನ್.ಎ.ಮೊದಲಿಯಾರ್ ಮಾತನಾಡಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳದೆ ಸಮಾಜದ ಕಷ್ಟಕ್ಕೆ ಸ್ಪಂದಿಸುತ್ತಿದ್ದ ಸಿದ್ಧಲಿಂಗಯ್ಯನವರು ಕನ್ನಡಿಗ ಜನ ಮಾನಸದಲ್ಲಿ ಎಂದಿಗೂ ಚಿರಸ್ಥಾಯಿಯಾಗಿ ಉಳಿದು , ತುಳಿತಕ್ಕೊಳಗಾದ ಸಮುದಾಯವನ್ನು ಮುನ್ನೆಲೆಗೆ ತಂದ ಕವಿ ಎಂದೆದಿಗೂ ಚಿರಾಯು ಎಂದರು.
ಸಿದ್ಧಲಿಂಗಯ್ಯನವರು ದಲಿತರ ಧ್ವನಿಯಾಗಿ ಮಾತನಾಡುತ್ತಾ ಚಳುವಳಿಗಲ್ಲಿ ಭಾಗವಹಿಸುವುದರ ಮೂಲಕ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಲು ಶ್ರಮಿಸಿದವರು, ಅವರನ್ನು ಕಳೆದುಕೊಂಡ ನಾಡು ಒಂದು ತಲೆಮಾರಿನ ಕೊಂಡಿಯನ್ನು ಕಳೆದುಕೊಂಡಂತಾಗಿದೆ ಹಾಗೆಯೇ
ಪ್ರತಿಭಾನ್ವಿತ ಸಂಚಾರಿ ವಿಜಯ್ ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು, ಅವರ ಅದ್ಭುತ ನಟನೆಗೆ ರಾಷ್ಟ್ರ ಪ್ರಶಸ್ತಿ ನೀಡಲಾಗಿತ್ತು.
ಕವಿ ಡಾ:ಸಿದ್ಧಲಿಂಗಯ್ಯ ಮತ್ತು ಸಂಚಾರಿ ವಿಜಯ್ ಅವರು ಕರ್ನಾಟಕದ ಹೆಮ್ಮೆ ಎಂದು
ತಾಲೂಕು ಅಧ್ಯಕ್ಷ ಸೂರಿ ಶಶಿದರ್ ಹೇಳಿದರು.
ತಾಲ್ಲೂಕು ಉಪಾಧ್ಯಕ್ಷ ಲಕ್ಷ್ಮಣ್ ಮಾತನಾಡಿ ದಲಿತ ಚರಿತ್ರೆಯನ್ನು ಬಲಿತವರಿಗೆ ತಮ್ಮ ಸಾಹಿತ್ಯ ಮತ್ತು ಕವಿತೆಗಳ ಮೂಲಕ ಸಿದ್ಧಲಿಂಗಯ್ಯನವರು ತಿಳಿಸಿದ್ದರು ಎಂದು ಹೇಳಿದರು.
ಸಂಚಾರಿ ವಿಜಯ್ ಅವರು ನಮ್ಮ ನಾಡಿನ ಮರೆಯಲಾಗದ ಚೇತನ ಎಂದು ಭೈರೇಶ್ ಹೇಳಿದರು.
ಪತ್ರಕರ್ತರಾದ ಸಂಘದ ಹುಲ್ಲೇಹಳ್ಳಿ ಲಕ್ಷ್ಮಣ್, ಎಸ್. ಎಲ್. ಶ್ರೀಕಾಂತ್, ಕೆ.ವಿ. ಮಂಜುನಾಥ್, ಎಚ್ ಜಗದೀಶ್ ,ಪ್ರಸಾದ್, ಜಿ. ಸುಬ್ರಹ್ಮಣ್ಯ, ಚಿಕ್ಕಂಗಳ ಬಾಲು, ಭಾನುಮೂರ್ತಿ, ರಾಘವೇಂದ್ರ, ಬಂಜೇನಹಳ್ಳಿ ನಾಗರಾಜ್ ಮತ್ತು ಇನ್ನಿತರೆ ಪದೀಧಿಕಾರಿಗಳು ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.