ಪೆಟ್ರೋಲ್, ಡೀಜಿಲ್,ಗ್ಯಾಸ್ ಬೆಲೆಯನ್ನು ಹೆಚ್ಚಿಸಿರುವ ಕುರಿತು*ಸರ್ಕಾರಗಳ ವಿರುದ್ದ ಮುಷ್ಕರ*#avintvcom
1 min read
*ಸರ್ಕಾರಗಳ ವಿರುದ್ದ ಮುಷ್ಕರ*
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ
ಬಸ್ ಸ್ಟಾಂಡ್ ಹತ್ತಿರವಿರುವ ಲಿಂಗೆಗೌಡ ಪೆಟ್ರೋಲ್ ಬಂಕಿನಲ್ಲಿ ಮುಷ್ಕರ ಪ್ರಾರಂಬಿಸಿದರು.
ಮುಷ್ಕರದಲ್ಲಿ ಪೆಟ್ರೋಲ್, ಡೀಜಿಲ್,ಗ್ಯಾಸ್ ಬೆಲೆಯನ್ನು ಹೆಚ್ಚಿಸಿರುವ ಕುರಿತು ಮಾತನಾಡಿ
ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ನಂತರ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಮಂತ್ರಿಗಳಾದ ಬಿ.ಬಿ.ನಿಂಗಯ್ಯ.
ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ರಂಜನ್ ಅಜಿತ್ ಕುಮಾರ್.
ರೈತ ಸಂಘದ ಜಿಲ್ಲಾದ್ಯಕ್ಷ ಡಿ.ಅರ್.ದುಗ್ಗಪ್ಪಗೌಡ..
ಸಿಪಿಐಎಂಎಲ್ ನ ರಾಜ್ಯ ಕಾರ್ಯದರ್ಶಿ ರುದ್ರಯ್ಯ.
ಸಿಪಿಐಎಮ್ ನ ತಾಲೂಕು ಕಾರ್ಯದರ್ಶಿ ಹೆಚ್.ಟಿ.ರವಿ.
ಬಿಎಸ್ ಪಿಯ ಮರಗುಂದ ಪ್ರಸನ್ನ.
ಇನ್ನು ಮುಂತಾದವರು ಹಾಜರಿದ್ದರು.
ಬೇಡಿಕೆ ಇಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಕೊವಿಡ್ 19.ಮಹಾಮಾರಿ ಇರುವುದರಿಂದ ಕಡಿಮೆ ಕಾರ್ಯ ಕರ್ತರು ಬಂದಿದ್ದೆವೆ.
ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟಕ್ಕೆ ಬರಲಿದ್ದಾರೆ ಎಂದರು.
ಕೊನೆಯಲ್ಲಿ ನಿನ್ನೆ ನಿಧನರಾದ ಸಿದ್ದಾರ್ಥ ರೆಡ್ಡಿ (ಡಿ.ಕೆ ತಾರಾದೇವಿಯವರ ಪತಿ.)ಯವರಿಗೆ ಸಂತಾಪ ಸೂಚಿಸಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.