AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೋವಿಡ್ 19 ಸಂಕಷ್ಟದಲ್ಲಿದ್ದ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಆಹಾರದ ಕಿಟ್ಟು ಜಾಕೀರ್ ವಿತರಿಸಲಾಯಿತು.#avintvcom

1 min read
Featured Video Play Icon

*ಯುವಕನಿಂದ ಸಹಾಯ ಹಸ್ತ*

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನಲ್ಲಿ
ಕೋವಿಡ್ 19 ಸಂಕಷ್ಟ ಎದುರಿಸುತ್ತಿರುವ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಆಹಾರದ ಕಿಟ್ ವಿತರಣಾ ಕಾರ್ಯಕ್ರಮವನ್ನು ಜೆ ಡಿ ಎಸ್ ನ ಅಲ್ಪಸಂಖ್ಯಾತರ ತಾಲ್ಲೂಕು ಅಧ್ಯಕ್ಷರು ಆಗಿರುವಂಥ ಝಕರಿಯ ಜಾಕೀರ್ ಇವರು ಅಡ್ಯಂತಾಯ ರಂಗ ಮಂದಿರದಲ್ಲಿ ನೆರೆವೆರಿಸಿದರು.
…. ಈ ಸಂಧರ್ಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮೂಡಿಗೆರೆಯ ಆರಕ್ಷಕ ವೃತ್ತ ನೀರಿಕ್ಷಕರಾದ ಶ್ರೀಯುತ ಜಗನ್ನಾಥ್ ಇವರು ಉಪಸ್ಥಿತರಿದ್ದರು.
ಇವರ ಉಪಸ್ಥಿತಿಯಲ್ಲಿ ಸಂಕಷ್ಟದಲ್ಲಿದ್ದ ಆಟೋ ಚಾಲಕರು ಮತ್ತು ಕಾರು ಚಾಲಕರಿಗೆ ಸುಮಾರು 150 ಆಹಾರದ ಕಿಟ್ಟುಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಆಹಾರ ಕಿಟ್ಟುಗಳ ದಾನಿಯಾದ ಝಕೀರಿಯ ಜಾಕೀರ್ ಹಾಗೂ ಝುಬೈರ್ ಹಳೇಮೂಡಿಗೆರೆ ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಈ ಕಾರ್ಯಕ್ರಮಕ್ಕೆ ಸಹಕರಿಸಿದ ಬಷೀರ್, ಇಕ್ಬಾಲ್, ಸಾಹುಲ್, ಅಕ್ಬರ್ ಅಲಿ, ಅಶ್ರಫ್ ಖಾದರ್, ಹಾಗೂ ಹಬೀಬ್, ಮಜೀದ್ ಮತ್ತು ನದೀಮ್,ಆಸೀಫ್ ಬಾಪುನಗರ ಇವರು ಸಹಕರಿಸಿದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author