ಕೋವಿಡ್ 19 ಸಂಕಷ್ಟದಲ್ಲಿದ್ದ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಆಹಾರದ ಕಿಟ್ಟು ಜಾಕೀರ್ ವಿತರಿಸಲಾಯಿತು.#avintvcom
1 min read
*ಯುವಕನಿಂದ ಸಹಾಯ ಹಸ್ತ*
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನಲ್ಲಿ
ಕೋವಿಡ್ 19 ಸಂಕಷ್ಟ ಎದುರಿಸುತ್ತಿರುವ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಆಹಾರದ ಕಿಟ್ ವಿತರಣಾ ಕಾರ್ಯಕ್ರಮವನ್ನು ಜೆ ಡಿ ಎಸ್ ನ ಅಲ್ಪಸಂಖ್ಯಾತರ ತಾಲ್ಲೂಕು ಅಧ್ಯಕ್ಷರು ಆಗಿರುವಂಥ ಝಕರಿಯ ಜಾಕೀರ್ ಇವರು ಅಡ್ಯಂತಾಯ ರಂಗ ಮಂದಿರದಲ್ಲಿ ನೆರೆವೆರಿಸಿದರು.
…. ಈ ಸಂಧರ್ಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮೂಡಿಗೆರೆಯ ಆರಕ್ಷಕ ವೃತ್ತ ನೀರಿಕ್ಷಕರಾದ ಶ್ರೀಯುತ ಜಗನ್ನಾಥ್ ಇವರು ಉಪಸ್ಥಿತರಿದ್ದರು.
ಇವರ ಉಪಸ್ಥಿತಿಯಲ್ಲಿ ಸಂಕಷ್ಟದಲ್ಲಿದ್ದ ಆಟೋ ಚಾಲಕರು ಮತ್ತು ಕಾರು ಚಾಲಕರಿಗೆ ಸುಮಾರು 150 ಆಹಾರದ ಕಿಟ್ಟುಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಆಹಾರ ಕಿಟ್ಟುಗಳ ದಾನಿಯಾದ ಝಕೀರಿಯ ಜಾಕೀರ್ ಹಾಗೂ ಝುಬೈರ್ ಹಳೇಮೂಡಿಗೆರೆ ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಈ ಕಾರ್ಯಕ್ರಮಕ್ಕೆ ಸಹಕರಿಸಿದ ಬಷೀರ್, ಇಕ್ಬಾಲ್, ಸಾಹುಲ್, ಅಕ್ಬರ್ ಅಲಿ, ಅಶ್ರಫ್ ಖಾದರ್, ಹಾಗೂ ಹಬೀಬ್, ಮಜೀದ್ ಮತ್ತು ನದೀಮ್,ಆಸೀಫ್ ಬಾಪುನಗರ ಇವರು ಸಹಕರಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.