ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮ ಆಹಾರ ವ್ಯವಸ್ಥೆಯನ್ನು ಕೊರೋನಾ ಸೋಂಕಿತರಿಗೆ ವ್ಯವಸ್ಥೆ #avintvcom
1 min read
ಧನ್ಯವಾದ ಕಾರ್ಯಕ್ರಮ*
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು.
*ಜಿಲ್ಲಾ ಕರೋನಾ ಸೋಂಕಿತ ಕೇಂದ್ರಕ್ಕೆ ಒಂದು ವಾರದ ವರೆಗೂ ಸತತವಾಗಿ ಜಿಲ್ಲಾ ಸಂಸ್ಥೆ ವತಿಯಿಂದ ಉತ್ತಮ ಗುಣಮಟ್ಟದ ಆಹಾರ ವ್ಯವಸ್ಥೆಯನ್ನು ಕೊರೋನಾ ಸೋಂಕಿತರಿಗೆ ವ್ಯವಸ್ಥೆ ಮಾಡಲಾಗಿರುತ್ತದೆ.
ಮೊದಲ ದಿನದ ಆಹಾರ ವ್ಯವಸ್ಥೆಯನ್ನು ಕರ್ನಾಟಕ ಕ್ಯಾಥೋಲಿಕ್ಸ್ ಕ್ರೈಸ್ತರ ರಕ್ಷಣಾ ಸಂಘ, ಪ್ರಾಂತ್ಯ ಅಧ್ಯಕ್ಷರಾದ ಅನಿಲ್ ಬಿ ಎನ್.( ಅಪ್ಪು) ಪ್ರಧಾನ ಕಾರ್ಯದರ್ಶಿ ಅಜಯ್ ಜೋ, ಖಜಾಂಚಿ ನವೀನ್ ಮುಂತಾದವರು ಮಾಡಿಕೊಟ್ಟಿರುತ್ತಾರೆ, ಇವರಿಗೆ ಜಿಲ್ಲಾ ಸಂಸ್ಥೆ ವತಿಯಿಂದ ಧನ್ಯವಾದಗಳು.
ಈ ಕಾರ್ಯದಲ್ಲಿ ಜಿಲ್ಲಾ ಕಾರ್ಯದರ್ಶಿ ಶ್ರೀ ಪಣಿರಾಜ್ , ಜಿಲ್ಲಾ ಸಹಾಯಕ ಆಯುಕ್ತರಾದ ಡಾಕ್ಟರ್ ಶ್ರೀನಿವಾಸ್, ಜಿಲ್ಲಾ ಸ್ಥಾನಿಕ ಆಯುಕ್ತರು ಶ್ರೀ ಪ್ರಕಾಶ್, ರಾಘವೇಂದ್ರ, ಜಿಲ್ಲಾ ಸಂಘಟಕರುಗಳಾದ ಕಿರಣ್, ನವೀನ್, ಸೋಂಕಿತ ಕೇಂದ್ರದ ವ್ಯವಸ್ಥಾಪಕರಾದ ಕಿರಣ್, ವೈದ್ಯ ಸಿಬ್ಬಂದಿಗಳು, ನರ್ಸ್ ಗಳು ಉಪಸ್ಥಿತರಿದ್ದರು .
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.