AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

**ಪತ್ರಕರ್ತರಿಂದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ #avintvcom

1 min read
Featured Video Play Icon

*ಪತ್ರಕರ್ತರಿಂದ ವಿಶ್ವ ಪರಿಸರ ದಿನಾಚರಣೆ*

ಚಿಕ್ಕಮಗಳೂರು ಜಿಲ್ಲೆ.
ಕಡೂರು:
ಅರಣ್ಯ ಸಂರಕ್ಷಣೆ ಮಾಡದೇ ಇದ್ದರೆ ಮುಂದಿನ ದಿನಗಳಲ್ಲಿ ಆತಂಕ ಎದುರಿಸಬೇಕಾಗುತ್ತದೆ ಆದ್ದರಿಂದ ಪರಿಸರವನ್ನು ಸಂರಕ್ಷಿಸುವ ಮೂಲಕ ಗಿಡ-ಮರಗಳನ್ನು ಬೆಳೆಸಬೇಕಾಗಿರುವ ಅನಿವಾರ್ಯತೆ ಇದೆಯೆಂದು ತಾಲ್ಲೂಕು ಪಂಚಾಯಿತಿ ಇಓ ದೇವರಾಜ್ ನಾಯ್ಕ್ ತಿಳಿಸಿದರು.

ಅವರು ಇಂದು ಕಡೂರು ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಕಡೂರು ತಾಲ್ಲೂಕು ಘಟಕ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಗಿಡ ನೆಡುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು.

ಸ್ವಾಭಾವಿಕವಾಗಿ ಅರಣ್ಯವನ್ನು ಬೆಳೆಸುವುದು ಸರ್ಕಾರ ಹಾಗೂ ನಮ್ಮೆಲ್ಲರ ಕರ್ತವ್ಯವಾಗಬೇಕು. ಮನೆಗೊಂದು ಮರಬೆಳೆಸಲು ಪ್ರತಿಯೊಬ್ಬರು ಕೈ ಜೋಡಿಸಬೇಕು, ಇಲ್ಲದಿದ್ದರೆ ಈಗ ಉದ್ಭವವಾಗಿರುವ ಆಕ್ಸಿಜನ್ ಕೊರತೆ ಮಾಯವಾಗುವುದನ್ನು ಕಾಣಬಹುದು ಎಂದರು.
ಪರಿಸರ ಸಂರಕ್ಷಣೆ ಹೊಣೆ ಎಂಬುದಾಗಿ ಪ್ರತಿಯೊಬ್ಬ ವ್ಯಕ್ತಿಯು ಭಾವಿಸಬೇಕು. ಜಲಮಾಲಿನ್ಯ, ಜಾಗತೀಕ ತಾಪಮಾನದಿಂದಾಗಿ ಮರ-ಗಿಡಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಇದರಿಂದಾಗಿ ಪರಿಸರ ನಾಶವಾಗುವುದರ ಜತೆಗೆ ಮನುಕುಲ ಅವಸಾನದತ್ತ ಸಾಗುತ್ತದೆ ಇದರಿಂದ ಪ್ರತಿಯೊಬ್ಬರು ಗಿಡನೆಟ್ಟು ಪೋಷಿಸಬೇಕು. 1972ರಿಂದ ವಿಶ್ವ ಸಂಸ್ಥೆ ಜೂನ್ 5ರಂದು ಪರಿಸರ ದಿನಾಚರಣೆ ಆಚರಿಸುತ್ತಿದೆ ಎಂದು ಕಡೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸೂರಿ ಶಶಿಧರ್ ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಖಜಾಂಚಿ ಕೆ.ವಿ. ಮಂಜುನಾಥ್, ಉಪಾಧ್ಯಕ್ಷ ಟಿ. ಲಕ್ಷ್ಮಣ,
ಕಾರ್ಯದರ್ಶಿ ಕೃಷ್ಣ ರಾಮಪ್ಪ,
ಎನ್. ಶ್ರೀಕಾಂತ್, ಬಾನುಮೂರ್ತಿ, ಜಿ. ಸುಬ್ರಹ್ಮಣ್ಯ, ಹೆಚ್ ಜಗದೀಶ್, ಎನ್. ಗೀರೀಶ್,

ಟಿ. ಆರ್. ಭೈರೇಶ್, ಹುಲ್ಲೇಹಳ್ಳಿ ಲಕ್ಷಣ್, ಯಗಟಿ ಶಂಕರ್,
ಜಾವಿದ್,
ತಾ.ಪಂ. ವ್ಯವಸ್ಥಾಪಕ ಮೊಹಿದ್ದೀನ್, ದೀಪಿಕಾ, ಶಹನವಾಜ಼್ ಮತ್ತು ಭಾಷ ಮತ್ತಿತರರು ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

http://nisargacare.com/career/

Navachaitanya Old Age Home

About Author