*ಹೂವು ಮುದುಡಿತು*ಮಲೆನಾಡಿಗರ ಹೃದಯದಲ್ಲಿ ಹೂವಪ್ಪ ಅಮರ*#avintvcom
1 min read
*ಹೂವು ಮುದುಡಿತು*
*ಮಲೆನಾಡಿಗರ ಹೃದಯದಲ್ಲಿ ಹೂವಪ್ಪ ಅಮರ*
ಚಿಕ್ಕಮಗಳೂರು ಜಿಲ್ಲೆ.
ಚಿಕ್ಕಮಗಳೂರು ತಾಲ್ಲೂಕಿನ.
ಆಲ್ದೂರ್ ಹೋಬಳಿ,
ಕೂದುವಳ್ಳಿ ಗ್ರಾಮದ
ಹೋರಾಟದ ಒಡನಾಡಿ, ಸಂಗಾತಿ ಹೂವಪ್ಪ ರನ್ನು ಕೋವಿಡ್ ಬಲಿತೆಗೆದುಕೊಂಡಿದೆ.
ಮೃತರಿಗೆ 48.ವರ್ಷ ವಯಸಾಗಿತ್ತು.
ಕಳೆದ 10 ದಿನಗಳಿಂದ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಇವರಿಗೆ ಕೆಮ್ಮು ಕಫ ಕಟ್ಟುವುದು ಬಿಟ್ಟರೆ, ಆರಾಮವಾಗಿಯೇ ಇದ್ದರು ಹೂವಪ್ಪ.
ದಿನ ಬೆಳಿಗ್ಗೆ ದೂರವಾಣಿಯ ಮುಖಾಂತರ ಮಾತನಾಡುತ್ತಿದ್ದರು. ಇಂದು ಬೆಳಿಗ್ಗೆ ಕಾಲ್ ಮಾಡ್ಲಿಲ್ಲ. ಬೆಳಿಗ್ಗೆ 10 ಗಂಟೆಗೆ ವಿಚಾರಿಸಿದರೆ ನ್ಯೂಮೊನಿಯಾ ಆಗಿದೆಯಂತೆ, ಮೂಗಲ್ಲಿ ರಕ್ತ ಬಿಳ್ತಿದೆ ಎಂದು ಹೂವಪ್ಪರ ಪತ್ನಿ ಸುಷ್ಮ ಹೇಳಿ ದು:ಖಿತರಾದರು. ಮೂಡಿಗೆರೆಯ ಸ್ನೇಹಿತರು ಸೇರಿ ಕೆಲವೇ ಗಂಟೆಯಲ್ಲಿ ಮಂಗಳೂರು ಆಸ್ಪತ್ರೆಗೆ ಸೇರಿಸುವ ತಯಾರಿ ನಡೆಸಿದರು.
ಇನ್ನೇನು ಮಂಗಳೂರು ಆಸ್ಪತ್ರೆಗೆ ದಾಖಲಾಗುವಷ್ಟರಲ್ಲಿ ಹೂವಪ್ಪರವರು ನಮ್ಮನ್ನೆಲ್ಲರನ್ನು ಅಗಲಿದ್ದಾರೆ ಎಂಬ ನೋವಿನ ಮಾತು ಬಂಧು ಮಿತ್ರರದು.
ಇವರ ಪತ್ನಿ, ಮಗಳು ಅಪಾರ ಜನಾನುರಾಗದ ಸ್ನೇಹಕ್ಕೆ ಇವರ ಅಕಾಲಿಕ ಅಗಲಿಕೆಯು ತುಂಬಲಾರದ ನಷ್ಟವೇ ಸರಿ.
ಕಳೆದ 25 ವರ್ಷಗಳಿಂದ ಜನಪರವಾದ, ಕ್ರಾಂತಿಕಾರಿ ಚಳುವಳಿಯಲ್ಲಿ ಗುರುತಿಸಿಕೊಂಡು,ಚುನಾವಣೆ ರಾಜಕೀಯ, ಯಾವುದೇ ರೀತಿಯ ರಾಜಕಾರಣಕ್ಕೂ ಮಾರು ಹೋಗದೆ ಕಡಾ ಖಂಡಿತವಾಗಿ ಟೀಕಿಸುತ್ತ, ಭ್ರಷ್ಟಾಚಾರವನ್ನು ವಿರೋಧಿಸಿ,
ಬಡ ವಕೀಲನಾಗಿಯೇ ಬಡವರ ಪರ ದುಡಿಯುವ ಜನರ ಪರ ಹೋರಾಟ ನಡೆಸುತ್ತ ಬಂದಿದ್ದರು ಹೂವಪ್ಪ.
ನಕ್ಸಲ್ ಚಳುವಳಿಯ ಕಾರ್ಯಕರ್ತರು ಪೋಲಿಸ್ ಏನ್ಕೌಂಟರ್ ಗಳಿಗೆ ಒಳಗಾದಾಗ ತನ್ನ ಸಹ ಸಂಗಾತಿಗಳನ್ನು ಕರೆದುಕೊಂಡು ಹೋಗಿ ಸುಳ್ಳು ಏನ್ಕೌಂಟರ್ ಗೆ ಸಂಬಂಧಿಸಿ ಸತ್ಯ ಶೋಧನೆ ಬಯಲಿಗೆಳೆಯಲು ಪ್ರಯತ್ನಿಸಿದ್ದರು.
ನಕ್ಸಲೀಯ ಕಾರ್ಯಕರ್ತರು ಬಂಧನಕ್ಕೊಳಗಾದಾಗ ಅವರನ್ನು ನ್ಯಾಯಾಲಯದಲ್ಲಿ ಹೋರಾಟ ನಡೆಸುವುದರಿಂದಿಡಿದು,
ಜೈಲು ನ್ಯಾಯಾಲಯಗಳಿಗೆ, ಕುಟುಂಬದವರೊಂದಿಗೆ ಭೇಟಿ ನೀಡಿ ಧೈರ್ಯ ತುಂಬಿದ್ದರು.
ಜೈಲಿನ ಸಂಗಾತಿಗಳು ಬಿಡುಗಡೆಯಾದಾಗ ಅವರನ್ನು ಪೋಲಿಸರು ಮತ್ತೊಂದು ಕೇಸಲ್ಲಿ ಬಂಧಿಸಿಯಾರು? ಎಂದು ಕುಟುಂಬದವರ ಬೆಂಗಾವಲು ಮಾಡಿಕೊಂಡು ಸಂಗಾತಿಗಳು ಅವರ ಕುಟುಂಬ ಸೇರುವವರೆಗೂ ಎಡಬಿಡದೆ ದುಡಿದ ಹೂವಪ್ಪರವರ ಶ್ರಮ ಶ್ಲಾಘನೀಯವಾದುದು.
ಕೇವಲ ಚಿಕ್ಕಮಗಳೂರು ಮಲನಾಡು, ಮಾತ್ರವಲ್ಲದೆ ಈಡೀ ಕರ್ನಾಟಕದಲ್ಲಿ ನಕ್ಸಲೀಯ ಚಳುವಳಿ ಬೆಳೆಯುವ ಹಂತದಲ್ಲು ನಂತರ ಚಳುವಳಿ ಸಮಸ್ಯೆಗಳನ್ನು ಎದುರಿಸುತ್ತಿದ್ದ ಕಾಲದಲ್ಲೂ ಪ್ರಭುತ್ವ ದಮನಕಾಂಡಕ್ಕೆ ಹೆದರದೆ ಧೈರ್ಯವಾಗಿ ನಿಂತಿದ್ದರು.
ನಕ್ಸಲೀಯ ಚಳುವಳಿಗೆ ವಿಮುಖರಾದವರ ವಿರುದ್ದ ಕೂಡ ಸಿಕ್ಕ ಸಂದರ್ಭಗಳಲ್ಲಿ ಸರಿಯಾಗಿಯೇ ಜಾಡಿಸಿದ್ದರು.
ಚಿಕ್ಕಮಗಳೂರಿನ ನಮ್ಮ ಲಾಯರ್, ಜನಪರ ಕ್ರಾಂತಿಕಾರಿ ಹೋರಾಟಗಾರ, ದುಡಿಯುವ ಜನರ ಧ್ವನಿ ನಕ್ಸಲೀಯ ಲಾಯರ್ ಎಂದೇ ಅಷ್ಟರ ಮಟ್ಟಿನ ಖ್ಯಾತಿ ಹೊಂದಿದ್ದ ಹೂವಪ್ಪ ನಮ್ಮೆಲ್ಲರನ್ನು ಬಿಟ್ಟು ಅಗಲಿರುವ ವಿಷಯ ಅತ್ಯಂತ ದುಂಖದ ಸಂಗತಿ.
ಇವರ ದುರಂತ ಮರಣ ಬಡಜನರಿಗೆ ಮಲೆನಾಡ ಹೋರಾಟ ನಿರತ ಜನರಿಗೆ ತುಂಬಲಾರದ ನಷ್ಷ.
ಅತ್ಯಂತ ಪ್ರೀತಿ ಪಾತ್ರ ಒಡನಾಡಿಗಳ ಸಾವು ತರುವ ನೋವು,
ಅಪರಿಮಿತವಾದುದು.
ಇನ್ನೂ ಹೂವಪ್ಪ ನೆನಪು ಮಾತ್ರ. ಅವರ ಅಗಣಿತವಾದ ಚಿಂತನೆಗಳು ಹೋರಾಟ ಹಾದಿಯಲ್ಲಿ ಹೂವಪ್ಪರವರು ಕೈಗೊಂಡ ಕಾರ್ಯಗಳು ಯುವ ಪೀಳಿಗೆಗೆ ದಾರಿ ದೀಪವಾಗಲಿ.
ಮಲೆನಾಡಿಗರ ಹೃದಯ ನೀವೆಂದಿಗೂ ಅಮರ.ನಿಮಗೆ ಭಾವ ಪೂರ್ಣ ಶ್ರದ್ದಾಂಜಲಿ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.