*ಬಡವರ ನೆರವಿಗೆ ಧಾವಿಸಿದ “ಅಮ್ಮ”* ಕೊರೋನಾ ರೋಗದಿಂದ ಬಳಲುತ್ತಿರುವ ಕುಟುಂಬಗಳಿಗೆ ಆರ್ಥಿಕ ನೆರವು#avintvcom
1 min read
ಬಡವರ ನೆರವಿಗೆ ಧಾವಿಸಿದ “ಅಮ್ಮ”
ಕೊರೋನಾ ಎಂಬ
ಅಗೋಚರ ಹೆಮ್ಮಾರಿಯಿಂದ ಪ್ರತಿನಿತ್ಯ ಸಾವಿರ ಸಾವಿರ ಸಂಖ್ಯೆಯಲ್ಲಿ ಹೆಣಗಳು ಧರೆಗುರುಳುತ್ತಿವೆ. ಕೊರೋನಾ ಎರಡನೇ ಅಲೆ ಜೀವವನ್ನೇ ಕಿತ್ತು ಕೊಳ್ಳುತ್ತಿದ್ದು ಜನಸಾಮಾನ್ಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಹೊರ ಹೋಗಲು ಭಯ, ಯಾರೊಂದಿಗೂ ವ್ಯವಹಾರ ನಡೆಸಲು ಭಯ, ಮಾತನಾಡಲು ಭಯ, ಆದರೂ ಜೀವನ ಸಾಗಿಸುವ, ಹಸಿವು ನೀಗಿಸುವ ಬಯಕೆ ಆದರೆ ”ಅತ್ತ ದರಿ ಇತ್ತ ಹುಲಿ”ಇಂತಹ ಈ ಸಂದರ್ಭದಲ್ಲಿ ದಿಕ್ಕೇ ತೋಚದೆ ಕಂಗಾಲಾಗಿ ಕುಳಿತ ಶಾನುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಗೂ ತಾಲ್ಲೂಕಿನ ಸುಮಾರು 1500 ಕುಟುಂಬಗಳಿಗೆ ”ಅಮ್ಮ” ಆಹಾರ ಕಿಟ್ ವಿತರಿಸಲಿದ್ದಾರೆ.
ಮೈಸೂರಿನ ಖ್ಯಾತ ಉದ್ಯಮಿ FKCCI ನ ಮಾಜಿ ಅಧ್ಯಕ್ಷ ತುಮಕಾನೆ ಸುಧಾಕರ್ ಶೆಟ್ಟಿಯವರು ಸ್ಥಾಪಿಸಿದ ”ಅಮ್ಮ”ಫೌಂಡೇಶನ್ ನಿಂದ ಶಾನುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಕೊಪ್ಪ ತಾಲ್ಲೂಕಿನ ಸುಮಾರು ಕುಟುಂಬಗಳಿಗೆ ದಿನಬಳಕೆ ಆಹಾರ ವಸ್ತುಗಳನ್ನು ವಿತರಿಸುವ ಮೂಲಕ ಸುಧಾಕರ್ ಶೆಟ್ಟಿಯವರು ಮಾನವೀಯತೆ ಮೆರೆದಿದ್ದಾರೆ.
ಕೊಡುಗೈ ದಾನಿಯಾಗಿರುವ ಇವರು ಕೊರೋನಾ ರೋಗದಿಂದ ಬಳಲುತ್ತಿರುವ ಹಲವು ಕುಟುಂಬಗಳಿಗೆ ಆರ್ಥಿಕ ನೆರವು ನೀಡುತ್ತಿದ್ದು ಇವರು ಪತ್ರಿಕೆಯೊಂದಿಗೆ ಮಾತನಾಡಿ ಇದು ಸಂಕಷ್ಟದ ದಿನ ನನಗೆ ಬಡತನ, ಹಸಿವು,ಕಷ್ಟದ ಅರಿವಿದೆ ನಾನು ಮುಳ್ಳಿನ ಹಾದಿಯನ್ನು ಹೂವಿನ ಹಾಸಿಗೆ ಮಾಡಿಕೊಂಡವನು.
ನಾನು ಪ್ರತಿಯೊಂದನ್ನೂ ಅನುಭವಿಸಿ ಈ ಹಂತಕ್ಕೆ ಬಂದಿದ್ದೇನೆ .
ದೇವರು ನನ್ನನ್ನು ಈ ಸ್ಥಿತಿಯಲ್ಲಿ ಇಡಲು ಹಲವಾರು ಗುರುಹಿರಿಯರ ಆಶೀರ್ವಾದವಿದೆ.
ಇಂದು ದೇವರು ನನಗೆ ಹತ್ತಾರು ಜನರಿಗೆ ಸಹಾಯ ಮಾಡುವ ಶಕ್ತಿ ನೀಡಿದ್ದಾನೆ ಆದ್ದರಿಂದ ”ಅಮ್ಮ” ಫೌಂಡೇಶನ್ ಹೆಸರಿನಲ್ಲಿ ಸಹಾಯ ಮಾಡುತ್ತಿದ್ದೇನೆ ಇದರಲ್ಲಿ ನನಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವುದು ನನಗೆ ನೆಮ್ಮದಿ ನೀಡುತ್ತದೆ.
ನಾನು ಈ ಕಾರ್ಯವನ್ನು ಈ ಹಿಂದೆಯೂ ಮಾಡಿದ್ದೇನೆ ಮುಂದೆಯೂ ಮಾಡುತ್ತೇನೆ ಎಂದರು.
ಇವರು ಈ ಭಾಗದಲ್ಲಿ ನಡೆಯುವ ಹಲವಾರು ಕ್ರೀಡಾಕೂಟ ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ನೆರವಿನ ಹಸ್ತವನ್ನು ಹಲವು ವರ್ಷಗಳಿಂದ ನೀಡುತ್ತಾ ಬಂದಿದ್ದು ಇವರ ಎಲೆಮರೆ ಕಾಯಿ ಸೇವೆ ಯನ್ನು ತಾಲ್ಲೂಕಿನ ಜನತೆ
ಪ್ರಶಂಸಿಸಿದ್ದಾರೆ. ಇವರು ಶಾನುವಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಶಿವಕರ ಶೆಟ್ಟಿಯವರ ಅಣ್ಣ ಆಗಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.