AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಶ್ರದ್ದಾಂಜಲಿ ಸಭೆ*ಎಚ್. ಎಸ್. ದೊರೆಸ್ವಾಮಿ ಅವರಿಗೆ ಶ್ರದ್ಧಾಂಜಲಿ #avintvcom

1 min read
Featured Video Play Icon

*ಶ್ರದ್ದಾಂಜಲಿ ಸಭೆ*

ಎಚ್. ಎಸ್. ದೊರೆಸ್ವಾಮಿ ಅವರಿಗೆ ಶ್ರದ್ಧಾಂಜಲಿ

ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಪ್ರಗತಿಪರ ಚಿಂತಕರು, ಪತ್ರಕರ್ತರೂ ಆಗಿದ್ದ ಎಚ್. ಎಸ್. ದೊರೆಸ್ವಾಮಿ ವಿಧಿವಶರಾದ ಪ್ರಯುಕ್ತ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಕಡೂರು ತಾಲ್ಲೂಕು ಘಟಕದ ವತಿಯಿಂದ ಇಂದು ಪತ್ರಿಕಾ ಕಚೇರಿ ಆವರಣದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಟಿ.ಎನ್.ಎ. ಮೊದಲಿಯಾರ್ ಮಾತನಾಡಿ ಶ್ರೀಯುತ ದೊರೆಸ್ವಾಮಿ ಅವರು ಶತಾಯುಷಿಗಳಷ್ಟೇ ಅಲ್ಲ ಎಡಪಂಥೀಯ ಧೋರಣೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು ಎಂದು ಹೇಳಿದರು.

ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಎಸ್. ಸುಬ್ರಹ್ಮಣ್ಯ ಮಾತನಾಡಿ ಶ್ರೀಯುತ ದೊರೆಸ್ವಾಮಿ ಅವರ ಬದುಕು ಹೋರಾಟ ಮಾರ್ಗದರ್ಶನ ಸರ್ವರಿಗೂ ದಾರಿದೀಪವಾಗಬೇಕು, ಅಲ್ಲದೆ ಕೆಲವರು ಬದುಕಿ ಸತ್ತಂತಿರುತ್ತಾರೆ ದೊರೆಸ್ವಾಮಿಯವರು ಮೃತ ರಾಗಿ ಸದಾ ಸರ್ವರ ನೆನಪಿನಲ್ಲಿ ಉಳಿಯುತ್ತಾರೆ ಎಂದು ಅಭಿಪ್ರಾಯಪಟ್ಟರು.

ಹೋರಾಟದ ಬದುಕು ನಡೆಸಿದ ದೊರೆಸ್ವಾಮಿಯವರು ನಾಡು ಕಂಡ ಒಬ್ಬ ದಾರ್ಶನಿಕ, ನಡೆ ನುಡಿಯಲ್ಲಿ ವಿನಯ ಶುದ್ಧಚಾರಿತ್ರ್ಯ ಹೊಂದಿದ್ದವರು ಎಂದು ಸಂಘದ ತಾಲ್ಲೂಕು ಅಧ್ಯಕ್ಷ ಎಸ್. ಶಶಿಧರ್ ಹೇಳಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಟಿ.ಲಕ್ಷ್ಮಣ್, ಕೆ .ಎಲ್. ಮಂಜುನಾಥ್, ಶ್ರೀಕಾಂತ್. ಎನ್, ಬೈರೇಶ್ ಟಿ. ಆರ್, ಎಚ್. ಜಗದೀಶ್ , ಭಾನುಮೂರ್ತಿ, ಜಿ.ಸುಬ್ರಹ್ಮಣ್ಯ, ಕೃಷ್ಣ ರಾಮಪ್ಪ, ಎನ್. ಗಿರೀಶ್, ಹುಲ್ಲೇಹಳ್ಳಿ ಲಕ್ಷ್ಮಣ್ ಮತ್ತು ಜಾವಿದ್ ಇನ್ನಿತರರು ಇದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author