ಸ್ವಾತಂತ್ರ್ಯ ಸೇನಾನಿ ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿಗಳು#avintvcom
1 min read
ಮಗ್ಗಲಮಕ್ಕಿ ಗಣೇಶ್: ಎಲ್ಲವನ್ನು ಸಂದಾಯಮಾಡಿ ಮುಗಿಸಿದ, ನಾಡಿನ ದೊರೆಯನ್ನು ಸಮಾಧಾನದಿಂದ -ಸಕಲ ಗೌರವಗಳೊಂದಿಗೆ ಕಳುಹಿಸಿ ಕೊಡೋಣ,,,,,,,, ——————————————– ಸ್ವಾತಂತ್ರ್ಯ ಸೇನಾನಿ ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿಗಳು 🌹🙏🌹 —————–,,,,, , ಎಲ್ಲವನ್ನು ಕಳಚಿಟ್ಟು ಬೆಳಕನ್ನು ತೊಟ್ಟುಕೊಂಡು ಶತಮಾನಗಳ ಕಾಲ ಹಿಗ್ಗದೆ ಕುಗ್ಗದೆ ಎದೆಯ ದನಿಯನ್ನು ಏಕತಾರಿಯಂತೆ ಮನ -ಮನೆ ಮಿಡಿಯುವ ಹಾಗೆ ವಿವಿಧ ನೆಲೆಗಟ್ಟಿನಲ್ಲಿ, ಈ ನೆಲದ ಧನಿಯನು ಬದುಕಿನುದ್ದಕ್ಕೂ ಹಸನಾಗಿ ಬಿತ್ತಿ ಬೆಳೆದು ಅಜರಾಮರರಾಗಿ, ಕನ್ನಡ ನಾಡಿನ ಇತಿಹಾಸದಲ್ಲಿ ಶಾಶ್ವತವಾಗಿ ತನ್ನದೇ ಆದ ಸಾಕ್ಷಿ ಪ್ರಜ್ಞೆಯೊಂದನ್ನು ಅಚ್ಹೊತ್ತಿ, ತಾನು ಬಂದ ಕೆಲಸವನ್ನು ಇಂದಿಗೆ ಮುಗಿಸಿ ಹೊರಟು ನಿಂತಿರುವ ಸ್ವಾತಂತ್ರ್ಯ ಸೇನಾನಿ, ದಿಟ್ಟ ಪತ್ರಕರ್ತ, ಕೆಚ್ಚೆದೆಯ ಹೋರಾಟಗಾರ 104 ವಯೋಮಾನದ ಅಪ್ರತಿಮ ಚಿಂತನ ರತ್ನ ಎಚ್, ಎಸ್, ದೊರೆಸ್ವಾಮಿ ಅವರ ಅಗಲಿಕೆಗೆ ಈ ನಾಡು ತತ್ತರಿಸಿ ಕಂಬನಿಗೆರೆಯುತಿದೆ, ಅವರ ಸಾವು ಈ ನೆಲದ ಸಹಸ್ರಾರು ಜನರರನ್ನು ಕಾಡುತಿದೆ, ಅ ಮಹಾ ಚೇತನಕ್ಕೆ ಮನ ಮಿಡಿಯುತಿದೆ,,,,,,,,,,,,, ನಿಮ್ಮ ತುತ್ತಿಗೆ ಬಾಯ್ದೆರೆದು ಬದುಕಿದವರು ನಾವು, ಕೈ ಮುಗಿದು ನಮಿಸುತ್ತಿದ್ದೇವೆ, ಹೋಗಿ ಬನ್ನಿ, ಅಂತಿಮ ವಿದಾಯ, ನಮನಗಳೊಂದಿಗೆ,,,ಬರಹ ಕೃಪೆ…🌹 ಡಿ, ಎಂ, ಮಂಜುನಾಥಸ್ವಾಮಿ..
[8:29 pm, 26/05/2021] ಮಗ್ಗಲಮಕ್ಕಿ ಗಣೇಶ್: 👆.ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್