ಸಹಾಯ ಹಸ್ತ* ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು #avintvcom
1 min read
*ಮುಂದುವರಿದ ಸಹಾಯ ಹಸ್ತ*
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು
ಇಂದು ಜಿಲ್ಲಾ ಸಂಸ್ಥೆ ವತಿಯಿಂದ 21.05.2021 ರಂದು ಜಿಲ್ಲಾ ಲಸಿಕಾ ಕೇಂದ್ರದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರುಪೂರೈಕೆ, ಲಸಿಕಾ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಪಾಡುವುದು, ಲಸಿಕೆ ಪಡೆಯಲು ಬರುವವರಿಗೆ ಅದರ ಮಾಹಿತಿ ನೀಡಿ ಸರತಿಸಾಲಿನಲ್ಲಿ ನಿಲ್ಲಿಸುವುದು ಮುಂತಾದ ಸೇವೆಯು ಮುಂದುವರೆದಿದ್ದು, ಇಂದು ಲಸಿಕಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ನರ್ಸ್ ಆಶಾ ಕಾರ್ಯಕರ್ತರಿಗೆ ಪೊಲೀಸ್ ಸಿಬ್ಬಂದಿಗಳಿಗೆ ಉತ್ತಮ ಗುಣಮಟ್ಟದ ಆಹಾರದ ಪ್ಯಾಕೆಟ್ ಗಳನ್ನು ವಿತರಿಸಲಾಯಿತು
ಹಿರಿಯ ನಾಗರಿಕರಿಗೆ ಅಂಗವಿಕಲರಿಗೆ, ವೃದ್ಧರಿಗೆ, ಜಿಲ್ಲಾ ಲಸಿಕಾ ಕೇಂದ್ರದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ಹೆಚ್ಚಿನ ಪ್ರಾಮುಖ್ಯತೆ ನೀಡಿ ಅವರಿಗೆ ಲಸಿಕೆಯನ್ನು ಹಾಕಿಸಲಾಯಿತು,
ಬ್ರಾಹ್ಮಣ ಮಹಾಸಭಾ ಚಿಕ್ಕಮಗಳೂರು ಇವರಿಂದ ಈ ದಿನದ ಆಹಾರ ವ್ಯವಸ್ಥೆಯನ್ನು ಮಾಡಲಾಯಿತು.
ಈ ಕಾರ್ಯದಲ್ಲಿ ಜಿಲ್ಲಾ ಕಾರ್ಯದರ್ಶಿ ಶ್ರೀ ಪಣಿರಾಜ್ ಮತ್ತು ಜಿಲ್ಲಾ ಸಹಾಯಕ ಆಯುಕ್ತರು ಡಾಕ್ಟರ್ ಶ್ರೀನಿವಾಸ್ ರವರು, ಶ್ರೀಮತಿ ಮಮತಾ ಜಿಲ್ಲಾ ಆಯುಕ್ತರು ಗೈಡ್ ಹಾಗೂ ಜಿಲ್ಲಾ ಸಂಘಟಕರುಗಳಾದ ಕಿರಣ್, ನವೀನ್ ಮತ್ತು ಗೈಡ್ ಕ್ಯಾಪ್ಟನ್ ಸುಪ್ರಿಯಾ ರವರು ಹಾಜರಿದ್ದರು..
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.