day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj #ವ್ಯವಸ್ಥೆಯದೂರುವಬದಲುನೀವೆಷ್ಟುಸಾಚಾಗಳೆಂದು_ವಿಮರ್ಶಿಸಿಕೊಳ್ಳಿ #avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

#ವ್ಯವಸ್ಥೆಯದೂರುವಬದಲುನೀವೆಷ್ಟುಸಾಚಾಗಳೆಂದು_ವಿಮರ್ಶಿಸಿಕೊಳ್ಳಿ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

#ವ್ಯವಸ್ಥೆಯದೂರುವಬದಲುನೀವೆಷ್ಟುಸಾಚಾಗಳೆಂದು_ವಿಮರ್ಶಿಸಿಕೊಳ್ಳಿ

ಹೌದು
ಮನುಷ್ಯ ಉಸಿರುಗಟ್ಟಿ ಸಾಯುತ್ತಿದ್ದಾನೆ.
ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆಗಳಿಲ್ಲ.
ವೆಂಟಿಲೇಟರ್ರು ಇರೋವೆ ಮೂರು ಮತ್ತೊಂದು.
ಮೆಡಿಕಲ್ ಆಕ್ಸಿಜನ್ನು‌ ಸಿಗುತ್ತಿಲ್ಲ.
ಬೆಡ್ಡುಗಳು ಖಾಲಿ‌ ಇಲ್ಲ,
ಇದ್ದರೂ ಲಾಭಿಯೊಳಗೆ ಕಳೆದು ಹೋಗಿವೆಯಂತೆ.
ಆ್ಯಂಬುಲೆನ್ಸಿಗೆ ಮೂರುಪಟ್ಟು ದರವಂತೆ.
ರೆಮಿಡೆಸಿವರ್ ಬ್ಲಾಕು ವ್ಯಾಪಾರವಂತೆ.
ಹೆಣ ಸುಡಲು ಜಾಗ ಇಲ್ಲವಂತೆ
ಅಂತಿಮ ದರ್ಶನವೂ ವೀಡಿಯೋ ಕಾಲಿನಲ್ಲಂತೆ!

ಆಯ್ತು.
ಒಪ್ಪಿಕೊಳ್ಳೋಣ. ಆಳುವವರು,ವಿರೋಧಿಸುವವರು ಎಲ್ಲರೂ ವಿಫಲರಾಗಿದ್ದಾರೆಂದು.
ಅವರಿಗೆ ಅಧಿಕಾರ,ಚುನಾವಣೆ,ಕಾಸು ಮಾಡೋದೇ ಆದ್ಯತೆಯೆಂದು.

ಆದರೆ ನೀವು ಕಡಿದು ಕಟ್ಟೆ ಹಾಕಿದ್ದೇನು?
ನಿನ್ನೆ‌ ಮೊನ್ನೆಯವರೆಗೆ ನಿಮಗೆ
ಇಂಪಾರ್ಟೆಂಟು ಇದ್ದಿದ್ದು
ಐ ಪಿ ಎಲ್ಲು,
ಅದ್ಯಾವ್ದೋ ಕಿತ್ತೋಗಿರೋ ಧಾರವಾಹಿಗಳು,
ಯಾವುದೋ ಸೆಲೆಬ್ರಿಟಿಯ ಮದುವೆ ಶೂಟಿಂಗು,
ಬೈ ಎಲೆಕ್ಸನ್ನು ,
ಪಂಚರಾಜ್ಯ ಚುನಾವಣಾ ಫಲಿತಾಂಶ,
ಅದ್ಯಾವನ್ದೋ ಸೀಡಿ,
ಬಿಗ್ಗು ಬಾಸು.
ಮಾಧ್ಯಮಗಳೂ‌ ಸೇರಿ ನೀವಿಲ್ಲಿ ಸೀಡಿ ನೋಡೋ ಬ್ಯುಸೀಲಿ ಇದ್ದಾಗ್ಲೇ ಕೊರೋನಾ‌ ಈ‌ ಸಲ ಕಪ್ ನಮ್ದೆ ಅಂತ ಎತ್ಕೊಂಡೋಗಾಗಿತ್ತು.

ಹೇಳಿ ಇವಾಗ?
ನೀವು ಇಷ್ಟು ದಿನ,ಇಷ್ಟು ವರ್ಷ,ನಿರ್ವಹಿಸಿದ ನಾಗರೀಕ ಜವಾಬ್ಧಾರಿಗಳೇನು?
ಇವತ್ತಿನ ಈ ಪರಿಸ್ಥಿತಿಗೆ ಸರ್ಕಾರಗಳಿಗಿಂತ ನೀವು ತಾನೇ ಹೆಚ್ಚು ಕಾರಣಕರ್ತರು?
ಮಾಡುವುದೆಲ್ಲ ಮಾಡಿ ಇವಾಗ ವ್ಯವಸ್ಥೆಯನ್ನೇ ದೂರುತ್ತಾ ಕೂರುತ್ತಿರೋದು ನಿಮ್ಮ ಭೌದ್ಧಿಕ ದಿವಾಳಿತನವಲ್ಲವೇ?
ನೀವು ಮೈ ಮರೆತು ಕೂತದ್ದಕ್ಕಲ್ಲವೇ
ಕೋವಿಡ್ ಎಂಬ ಕಣ್ಣಿಗೆ ಕಾಣದ ದುಷ್ಮನ್ ಎರಡನೇ ಬಾರಿಗೆ ಬಂದು ಪ್ರಜ್ಞಾವಂತ ನಾಗರೀಕೆಂದುಕೊಂಡು ಬೀಗುತ್ತಿರುವ ನಿಮ್ಮನ್ನು ಹಡಾಲೆದ್ದು ಹೋಗುವವರೆಗೆ ಬಡಿದು ಹಾಕಿದ್ದು?

ದೇಶ ನಿಮಗಾಗಿ ಏನು ಮಾಡಿದೆ, ಅನ್ನುವುದಕ್ಕಿಂತ ನೀವು ಈ ದೇಶಕ್ಕಾಗಿ ಏನು ಮಾಡಿದ್ದೀರಿ‌? ಎಂದು ಒಮ್ಮೆ ಕೇಳಿಕೊಳ್ಳಿ.
ಇವಾಗ ಆಸ್ಪತ್ರೆಯಲ್ಲಿ ಅದಿಲ್ಲ ಇದಿಲ್ಲ ಎನ್ನುವ ನಿಮಗೆ
ಊರಿಗೊಂದು ಬೀದಿಗೊಂದು ಮಂದಿರ,ಮಸೀದಿ ಕಟ್ಟುವಾಗ ಇವೆಲ್ಲ ನೆನಪಾಗಲಿಲ್ಲವೇ?

ಜಾತಿಗೊಂದು,ಧರ್ಮಕ್ಕೊಂದು ಸಮುದಾಯ ಭವನ ಕಟ್ಟಿ ಅವನ್ನು ಕಂಡೋರ ಮನೆಯ ಬೇಡದ ವಿಷ್ಯ ಮಾತಾಡೋ ಸೋಮಾರಿ ತಾಣಗಳಾಗೋ,ಇಸ್ಪೀಟು ಅಡ್ಡೆಗಳಾಗೋ ಮಾಡಿದಾಗ ಇವೆಲ್ಲ ನೆನಪಾಗಲಿಲ್ಲವೇ?

ನಂದು ಆ‌ ಪಕ್ಷ, ನಂದು ಈ‌ ಪಕ್ಷ ಅಂತ ನಿಮ್ಮ ಬೇಳೆ ಬೇಯಿಸಿಕೊಳ್ಳೋಕೆ ಮನೆ‌ ಮನೆ ಸುತ್ತಿ ಓಟಾಕ್ಸಿಕೊಂಡ್ರಲ ಅವಾಗ ನೆನಪಾಗಲಿಲ್ಲವೇ?

ಹಣಕ್ಕೋ‌ ,ಹೆಂಡಕ್ಕೋ ,ಧರ್ಮಕ್ಕೋ,ಜಾತಿಗೋ ನಿಮನ್ನು ನೀವು ಮಾರ್ಕೊಂಡ್ರಲ ಅವಾಗ ನೆನಪಾಗಲಿಲ್ಲವೇ?

ಇದೊಂದು ಬಯೋಲಾಜಿಕಲ್ಲು ವಾರು,
ದೇಶದ ಆರ್ಥಿಕತೆಯನ್ನು ಹೊಡೆದುಹಾಕುವ ಹುನ್ನಾರ,ಮೆಡಿಸಿನ್ನು ಕಂಪೆನಿಗಳು ತಾವು ಉತ್ಪಾದಿಸಿಟ್ಟಿರುವ ವಸ್ತುಗಳನ್ನು ಮಾರಿ ಬಿಲಿಯನ್ನುಗಟ್ಟಲೇ ದುಡ್ಡುಮಾಡಿಕೊಳ್ಳುವ ಲಾಭಿಯೆಂದು ದೇಶ ತೆಗೆದುಕೊಂಡ ನಿರ್ಧಾರಗಳಿಗೆ ನೀವೆಷ್ಟು ಸ್ಪಂದಿಸಿದಿರಿ?
ಚೈನಾ ಐಟಮ್ಮುಗಳನ್ನು ನೀವೆಷ್ಟು ದೂರವಿಟ್ಟಿರಿ ಹೇಳಿ?
ದೇಶದೊಂದಿಗೆ ನೀವೆಷ್ಟು ನಿಂತಿರಿ?
ನಿಮಗೆ ನಿಮ್ಮದೇ ಚಿಂತೆ.
ಹಣ ಕೊಟ್ಟರೆ ಈ ದೇಶದೊಳಗೆ ಏನು ಬೇಕಾದರೂ ಮಾಡಿ ಭಿತ್ತಿ ಹೋಗುವವರೂ ಇಲ್ಲವೇ ನಿಮ್ಮಲ್ಲೊಂದಷ್ಟು ಮಂದಿ?

ನಮ್ ದೇಶಕ್ಕಿಂತ ಚೈನಾ ಮೂರು ಪಟ್ಟು ದೊಡ್ಡದಿದೆ.
ಜನಸಂಖ್ಯೆ ಹೆಚ್ಚೂ ಕಮ್ಮಿ‌ ನಮ್ಮಷ್ಟೇ ಇದೆ.
ಅವ್ರೆ ಒಂದೇ ಮಗು ಅಂತ ಕಾನೂನು‌ ಮಾಡಿದ್ದೋರು‌ ಇತ್ತೀಚ್ಗೆ ಎರಡು ಮಕ್ಳಿಗೆ ಲಿಮಿಟ್ ಮಾಡಿದಾರೆ.
ಮೂರ್ ಪಟ್ ದೊಡ್ ದೇಶನೇ ಜನಸಂಖ್ಯೆ ಕಂಟ್ರೋಲ್ ಮಾಡ್ತಾ ಇದೆ ಅಂದ್ಮೇಲೆ ಅದಕ್ಕಿಂತ ಕಡಿಮೆ‌ ಸಂಪನ್ಮೂಲ‌ ಇರೋ ನಾವೂ ಮಾಡ್ಕೋಬೇಕು ತಾನೆ.
ನೂರೈವತ್ತು ಕೋಟಿ ಜನುಕ್ಕೆ ಎಲ್ಲ ಕೊಟ್ಟು ಸಾಕಿ ಸಲಹೋದು ಫೇಸ್ಬುಕ್ಕಲ್ಲಿ,ಮೈಕಲ್ಲಿ ಹೇಳ್ದಷ್ಟು ಸುಲಭ ಅಲ್ರಪ್ಪ.
ಅದ್ಕೂ ಧರ್ಮನ ಎಳೆದ್ ತರ್ತಿವಿ ಅಂದ್ರೆ ಅನುಭವಿಸಿ ಅಷ್ಟೆ.

ದಿನಕ್ಕೆ‌ ಐದತ್ತು ಫೋಟೋ ತೆಗೆದು ಅದನ್ನೇ ಎಡಿಟ್ಟು ಮಾಡಿ ಇನ್ಸ್ಟಾಗ್ರಾಮು,ಫೇಸ್ ಬುಕ್ಕಿನೊಳಗೆ ಬಿದ್ದು ಒದ್ದಾಡುವಾಗ ಆಸ್ಪತ್ರೆಗಳು ಔಷಧಗಳು‌ ನಿಮಗೆ ನೆನಪಾಗಲಿಲ್ಲವೇ?
ಯುವ ಮಹಿಳಾಮಣಿಗಳು ನಿಮ್ಮ‌ ಕೊಡುಗೆ ಇದರಲ್ಲಿ ಬಹುದೊಡ್ಡದಲ್ಲವೇ?

ಯಾವ್ದೋ ಕಿತ್ತೋಗಿರೋ ಸಿನಿಮಾ ನಟ,ನಟಿಯರನ್ನು,ಕೆಲಸಕ್ಕೆ‌ಬಾರದ ಧಾರಾವಾಹಿಗಳನ್ನು,ರಿಯಾಲಿಟಿ ಶೋಗಳನ್ನು ಫಾಲೋ ಮಾಡಿಕೊಂಡು,
ಹಚ್ಚೆ ಹಾಕಿಸಿಕೊಂಡು,
ಫ್ಯಾನ್ ಫಾಲೋಯಿಸಮ್ ಮಾಡಿಕೊಂಡು ಕೂತ ನಿಮಗೆ ಆಗ ಡಾಕ್ಟರುಗಳು,ದಾದಿಯರು,ಮೆಡಿಕಲ್ಲು‌ ಎಮರ್ಜೆನ್ಸಿ ನೆನಪಾಗಲಿಲ್ಲವೇ.
ನಿಮಗವಾಗ ಮನೋರಂಜನೆಯೇ ಆದ್ಯತೆ ತಾನೆ? ಅನುಭವಿಸಿ.

ಆಕ್ಸಿಜನ್ನು ಕೊಡುವ ಸಾಲು ಸಾಲು ಮರಗಳನ್ನು ಅಭಿವೃದ್ಧಿಯ ಹೆಸರಲ್ಲಿ ಕೊಚ್ಚಿ ಹಾಕಿ ಯಾರೋ ನಾಕು ಜನ ವಿರೋಧ ಮಾಡುತ್ತಿದ್ದಾಗ ಮೂಕಪ್ರೇಕ್ಷಕರಂತೆ ಕೂತಿದ್ದಿರಲ್ಲ?
ಅದೇ ಶಾಪವೇ ಇರಬೇಕು ಇಂದು ಮೆಡಿಕಲ್ಲು ಆಕ್ಸಿಜನ್ನು ರೂಪದಲ್ಲಿ ಬಂದಿರೋದು.
ಈಗಲೂ ಸುಮ್ಮನಿದ್ದುಬಿಡಿ ಅಷ್ಟೆ.

ಸೆಮಿ‌ಲಾಕ್ ಡೌನ್ ಮಾಡಿದ್ರಲ.
ಎಸ್ಟ್ ಜನ ನಿಜ್ವಾಗ್ಲೂ ಬೇಸಿಕ್ ಅವಶ್ಯಕತೆ ಇಲ್ದೆ ಹೊರ್ಗಡೆ ಹೋಗಿಲ್ಲ ಹೇಳಿ.
ನಿಮ್ ಎದೆ ಮುಟ್ಕೊಂಡ್ ನೀವೆ ಹೇಳ್ಕೊಳ್ರೋ ಸಾಕು.
ಎಲ್ರು ನಿಮ್ ತರಾನೆ ಅವ್ರುದ್ ಮಾತ್ರ ಅವ್ರಿಗೆ.
ಅನುಭವಿಸಿ ಅಷ್ಟೆ.

ಸರಕಾರ ಹಂಗೋ‌ ಹಿಂಗೋ ಏನೋ‌ ಒಂದು ವ್ಯಾಕ್ಸಿನ್ನು ಅಂತ ಕಂಡು‌ ಹಿಡಿದು ಇಮ್ಯೂನಿಟಿ‌ ಬೂಸ್ಟ್ ಮಾಡ್ಕೊಳ್ಳಿ 45‌ಪ್ಲಸ್ ನೋರು, ಅದೂ ಉಚಿತವಾಗಿ ಅಂತೇಳಿ ನಾಲ್ಕು ತಿಂಗಳಾಯ್ತು ತಾನೆ?
ಎಲ್ಲೋಗಿದ್ರಿ? ಇವಾಗ್ ಬಂದ್ ಕುರಿ ತರ ಕ್ಯೂ ನಿಂತಿದಿರಲ.
ನಿಮ್ಮುನ್ನ ಎಲೆಕ್ಸನ್ ದಿನ‌ ಕಾರು ಜೀಪು ವ್ಯಾನಲ್ಲಿ ತುಂಬ್ಕಂಡೋಗಿ ಓಟಾಕ್ಸಕಂಡ್ ಬರ್ತಿದ್ರಲ‌ ಆ ತರ ಸರ್ಕಾರನೇ ಏನಾದ್ರು ಸ್ಕೀಮ್ ತರ್ಬೇಕ?
ಅದ್ಕೂ ಏನಾದ್ರು ಕ್ವೋಟ ಗೀಟ ಬೇಕೇನ್ರೋ?
ನಿಮ್ ಜನ್ಮಕ್ಕಿಷ್ಟು.
ಅಂತಹವರು ನೀವು ಬೀದಿಲಿ ಬಿದ್ದು ಸಾಯೋಕೆ ವೀಡಿಯೋ ಕಾಲಲ್ಲಿ ಅಂತಿಮ‌ದರ್ಶನ ಕೊಡೋಕೆ ಅರ್ಹರಿದ್ದೀರಿ ಯು ಡಿಸರ್ವ್ ದಿಸ್ ಕಣ್ರೋ?
ವ್ಯಾಕ್ಸಿನ್ ತಗಂಡ್ರೆ ಅದಾಗುತ್ತೆ, ಇದಾಗಕ್ಕಿಲ್ಲ ಅಂತೇಳಿದ್ ನಿಮ್ ಅಣ್ತಮ್ಮುಗಳ್ನ ಎಂತದ್ರಲ್ ಹೊಡಿತಿರೋ‌ ಬಿಡ್ತಿರೋ‌ ನಿಮಿಗ್ ಬಿಟ್ಟಿದ್.

ಎಲ್ಲವನ್ನೂ ಆಸ್ಪತ್ರೇರು ಮಾಡ್ಲಿ,
ಡಿ.ಸಿ ಮಾಡ್ಲಿ,ಎಮ್ಮೆಲ್ಲೆ ಮಾಡ್ಲಿ,ಸಿ‌ಎಮ್ಮು ಪಿ‌ಎಮ್ಮು‌ಗಳೇ ಮಾಡ್ಲಿ‌ ಅಂತ್ ಜೋತ್ ಬಿದ್ದಿರೋ‌ ನೀವೇನ್ ಎಲ್ಲಾವ್ನೂ ಪ್ರಾಮಾಣಿಕವಾಗೆ ಮಾಡ್ಕೊಂಡಿವ್ರ?
ಎಲ್ರೂ‌ ಸರ್ಯಾಗಿ ಈ ದೇಶುದ್ ಕಾನೂನಂತೆ ನಡ್ಕೊಂಡಿವ್ರ?
ಸರಿಯಾಗಿ ಟ್ಯಾಕ್ಸ್ ಕಟ್ಟೀದಿರ?
ಬಡ್ಡಿ ಕೊಡೋರು ಗವರ್ಮೆಂಟು ಹೇಳಿದ್ ರೇಟಿಗೆ ಬಡ್ಡಿ ಕೊಟ್ಟಿದೀರ?
ಕಳ್ ಬಿಪಿ‌ಎಲ್ ಕಾರ್ಡು ಎಸ್ಟ್ ಜನ್ರು ಕೈಲಿ ಇದಾವೆ?
ಎಸ್ಟ್ ಜಾಗ ಒತ್ತುವರಿ ಮಾಡ್ಕೊಂಡಿವ್ರಿ?
ಜಾತಿ,ಧರ್ಮದ್ ಹೆಸ್ರಲ್ಲಿ ಎಷ್ಟೊಂದ್ ಸರ್ಕಾರಿ‌ ಸ್ಕೀಮಿನ್ ಬೆನೆಫಿಷಿಯರಿಗಳಾಗಿಲ್ಲ?
ಕೃಷಿ ಸಾಲ ಮಾಡಿ ಸಾಲ ಮನ್ನಾ ಮಾಡಿಸ್ಕೊಂಡ್ರಲ ಎಲ್ಲ‌ ದುಡ್ನ ಕೃಷೀಗೆ ಬಳ್ಸಿದೀರ?
ಬೆಳೆ ಕೊಳ್ಳುವಾಗ ವ್ಯಾಪಾರಿಗಳು ಎಸ್ಟ್ ಮೋಸ ಮಾಡಿಲ್ಲ?
ಹಣ್ಣು ತರಕಾರಿ ವ್ಯಾಪಾರದಲ್ಲಿ ರೈತನಿಗಿಂತ ನಿಮ್ದೇ ಹೆಚ್ಚು ಪಾಲು ತಾನೇ?
ಇವೆಲ್ಲ ಮೋಸ ಅಲ್ಬ?
ನೀವ್ ಬೇಕಾದ್ರೆ ಏನ್ ಬೇಕಾದ್ರು ಮಾಡ್ಬೋದು?
ಕಷ್ಟ ಅಂತ ಬಂದ್ರೆ ಎಲ್ಲ ಸರ್ಕಾರ,ವ್ಯವಸ್ಥೆ,ಸಮುದಾಯದ್ ಮೇಲ್ ಹಾಕ್ಬಿಡೋದು.
ಗ್ರೇಟ್ ಕಣ್ರೋ ನೀವು.

ಇದು ಸಾಂಕ್ರಾಮಿಕ ರೋಗ.
ಔಸ್ತಿ ಕಂಡಿಡ್ಯೋಕೆ ಈ ಜಗತ್ತಾಗೆ ಇನ್ನೂ ಯಾವನ್ಗೂ ಆಗಿಲ್ಲ.
ಮುಖ ಮುಚ್ಕಂಡು,ಡಿಸ್ಟನ್ಸ್ ಇಟ್ಕಂಡು, ನಮ್ ಸೇಫ್ಟಿಲಿ ಕೇರ್ ಫುಲ್ ಆಗಿ ಇರ್ಬೇಕು.
ಇಲ್ಲಾಂದ್ರೆ ಪರುಮನೆಂಟ್ ಆಗಿ ಮುಖ ಮುಚ್ತಾರೆ ಅಸ್ಟೆ.
ಇಂತ ಟೈಮಲ್ಲೂ ನಾನು‌ ಎಡ,ಬಲ,ಭಕ್ತ,ಗುಲಾಮ ಅಂತ ಕೆಸರೆರುಚ್ಕೊಳ್ತಿರೋರ್ನ ನೋಡಿ ಕೊರೋನಾ ಎಲ್ಲೆಲ್ಲಿಂದ ನಗ್ತಿದ್ಯೋ ಗೊತ್ತಿಲ್ಲ.
ಮೊದ್ಲು ನೀವ್ ಸರಿ ಆಗಿ.
ಆಮೇಲೆ ವ್ಯವಸ್ಥೆನ ದೂರುವ್ರಂತೆ‌.
ಅವ್ರುನು ನಿಮ್ ತರಾನೆ ಮೈಮರ್ತವ್ರೆ ಅಷ್ಟೆ.
ಅವ್ರಿಗೂ ಇದು ಹೊಸ್ದು.
ನೀವೂ ಕೇಳಿಲ್ಲ ಅವ್ರುನೂ ಮಾಡಿಲ್ಲ.
ಇಂತ ಟೈಮಲ್ಲಾದ್ರು ಒಂದು ದೇಶ ಒಂದು ಕಾನೂನು ಅನ್ನೋದ್ನ ಪಾಲ್ಸೋ ಟೈಮು.
ಇಲ್ಲಾಂದ್ರೆ ಗೊತ್ತಲ‌ Survival Of The Fittest.
ಆ ಪೊಲಿಸ್ನೋರ್ಗೂ ತಂದೆ ತಾಯಿ ಹೆಂಡ್ತಿ ಮಕ್ಳು‌ ಅವ್ರೆ.
ಅವ್ರು ಹಿಡಿದ್ರು ತಪ್ಪೂ ,ಬಡಿದ್ರೂ ತಪ್ಪು ,ಬಿಟ್ರೂ ತಪ್ಪು.
ಇಸ್ಟ್ ವರ್ಷ ನೀವ್ ಮಾಡ್ಕಂಡ್ ಬಂದ್ ಘನಂದಾರಿ‌ ಕೆಲ್ಸುಕ್ಕೆ,ನಿಮ್ ಅಸಹಾಯಕತೆಗೆ ಅವ್ರುನ್ಯಾಕೆ ಬೈತೀರ.
ತಿನ್ನಿ ನಾಕ್ ಬಾಸುಂಡೆ.

ಕೊನೆದಾಗಿ ಜೋಪಾನವಾಗಿರಿ.
ಕಾನೂನು ಪಾಲಿಸಿ.
ಇಲ್ಲಾಂದ್ರೆ ಯಾವ್ದುಕ್ಕೂ ಒಂದ್ ಹಾರ ಕುತ್ಗೆಗೆ ಹಾಕೊಂಡೇ ಇರಿ.
ಆಮೇಲೆ ಹಾಕೋಕು ಯಾರೂ ಇಲ್ದಂಗಾದೀತು.
ನೀವೇನೋ ಹೋಗ್ತಿರಿ.
ಆದ್ರೆ ಎಲ್ಲಾನೂ ಪಾಲ್ಸಿ ನೀಯತ್ತಾಗೆ ಇರೋ ಒಂದಷ್ಟು ಜನಾನೂ ಇದಾರೆ ನೋಡಿ ಅವ್ರ ಬಗ್ಗೆ ಕನ್ಸರ್ನು ಅಸ್ಟೆ.

ಕಾಮನ್ ಮ್ಯಾನ್

Career | job

Navachaitanya Old Age Home

 

About Author