ಪೊಲೀಸ್ ಇಲಾಖೆ ಭೇಟಿ, ಮತ್ತು ಸ್ವಯಂಸೇವಕರ ಪರಿಚಯ ಕಾರ್ಯಕ್ರಮ.
1 min read
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, “ಶೌರ್ಯ” ವಿಪತ್ತು ನಿರ್ವಹಣಾ ಘಟಕ ಬಣಕಲ್. ಮೂಡಿಗೆರೆ.
ಪೊಲೀಸ್ ಇಲಾಖೆ ಭೇಟಿ, ಮತ್ತು ಸ್ವಯಂಸೇವಕರ ಪರಿಚಯ ಕಾರ್ಯಕ್ರಮ.
ಬಣಕಲ್ ಪೊಲೀಸ್ ಠಾಣೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಣಕಲ್ ಠಾಣೆಯ ಮುಖ್ಯ
ಠಾಣಾಧಿಕಾರಿ ಗಳಾದ ಶ್ರೀಯುತ ಶ್ರೀನಾಥ್ ರೆಡ್ಡಿ, ಸರ್. ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಶ್ರೀಯುತ ವಿಠಲ ಪೂಜಾರಿ, ಸರ್. ಯೋಜನಾ ಕಚೇರಿಯ ವ್ಯವಸ್ಥಾಪಕರಾದ. ಅಣ್ಣು ಗೌಡ, ಬಣಕಲ್ ವಲಯ ಮೇಲ್ವಿಚಾರಕರಾದ ಶ್ರೀಮತಿ ಶಶಿಕಲಾ. ಮತ್ತು ಸಂಯೋಜಕರಾದ. ಕೆ ಎಲ್. ರವಿ, ಕೂಡಹಳ್ಳಿ. ಪ್ರಕಾಶ್ ಬಕ್ಕಿ,
ಹಾಗೂ ಸ್ವಯಂಸೇವಕರು ಭಾಗವಹಿಸಿದ್ದರು.
ಯೋಜನಾಧಿಕಾರಿಗಳಾದ ಶ್ರೀಯುತ ವಿಠಲ ಪೂಜಾರಿಯವರು ಪ್ರಾಸ್ತಾವಿಕ ನುಡಿ ನುಡಿದು ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂಸೇವಕರು ಎನ್. ಡಿ.ಆರ್.ಎಫ್. ತಂಡದಿಂದ ತರಬೇತಿ ಪಡೆದಿರುತ್ತಾರೆ. ಬಣಕಲ್ ಘಟಕದಲ್ಲಿ 20 ಜನ ಸ್ವಯಂಸೇವಕರ ತಂಡ ಇದೆ ಬಣಕಲ್ ಸುತ್ತಮುತ್ತಲಿನಲ್ಲಿ ಯಾವುದೇ ವಿಪತ್ತು ಸಂಭವಿಸಿದರೂ, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ,
ಕೈಜೋಡಿಸಿ ಕಾರ್ಯನಿರ್ವಹಿಸಲು ಸದಾ ಸಿದ್ಧವಿದೆ ಎಂದು ಸಭೆಯಲ್ಲಿ ತಿಳಿಸಿದರು.
ಬಣಕಲ್ ಠಾಣಾಧಿಕಾರಿ ಗಳಾದ ಶ್ರೀಯುತ ಶ್ರೀನಾಥ್ ರೆಡ್ಡಿ ಯವರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಕೆಲಸಕಾರ್ಯಗಳಲ್ಲಿ ಮತ್ತು ದುಡಿಮೆಯಲ್ಲಿ ತೊಡಗಿಸಿಕೊಂಡರು, ಸಮಾಜಸೇವೆಗಾಗಿ ದಿನದಲ್ಲಿ ಅರ್ಧ ಗಂಟೆಯಾದರೂ ಮೀಸಲು ಇಡಬೇಕು ಎಂದರು
ಮತ್ತು ನಿರ್ಗತಿಕರು, ಅಸಹಾಯಕರು, ಹಾಗೂ ತೊಂದರೆಯಲ್ಲಿರುವ ಕುಟುಂಬಗಳಿಗೆ ಸಹಾಯ ಮಾಡಬೇಕು ಮತ್ತು ಮಳೆಗಾಲ ಸಮಯದಲ್ಲಿ ಸಂಭವಿಸುವ ಅನಾಹುತಗಳಿಗೆ, ತ್ವರಿತವಾಗಿ ಸ್ಪಂದಿಸಲು ಸ್ವಯಂಸೇವಕರ ಅಗತ್ಯವಿದೆ. ಪ್ರತಿಯೊಬ್ಬರ ಜೀವವು ಅಮೂಲ್ಯವಾದದ್ದು ಮುಂದೆ ಆಗುವ ಅನಾಹುತಗಳನ್ನು ಇಂದೇ ತಡೆಯಲು, ಪ್ರಯತ್ನಿಸಿ ಎಂದು ಸಲಹೆ ನೀಡಿದರು.
ಈ ಸಭೆಯಲ್ಲಿ 15 ಜನ, ಸ್ವಯಂಸೇವಕರು. ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.