AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಜಾತಿ ನಿಂದನೆ ಹೇಯ ಕೃತ್ಯ* ದಲಿತ ಯುವಕನ ಮೇಲೆ ಅತ್ಯಂತ ಹೇಯ ರೀತಿಯಲ್ಲಿ ದೌರ್ಜನ್ಯ #avintvcom

1 min read
Featured Video Play Icon

ಜಾತಿ ನಿಂದನೆ ಹೇಯ ಕೃತ್ಯ

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲ್ಲೂಕಿನ ಗೊಣಿಬೀಡು ಪೊಲಿಸ್ ಠಾಣೆಯಲ್ಲಿ.
ಅಕ್ರಮವಾಗಿ ಠಾಣೆ ಯಲ್ಲಿ ಕೂಡಿಟ್ಟು ದಲಿತ ಯುವಕನ ಮೇಲೆ ಅತ್ಯಂತ ಹೇಯ ರೀತಿಯಲ್ಲಿ ದೌರ್ಜನ್ಯ ನಡೆಸಿರುವ ಗೊಣಿಬೀಡು ಸಬ್ ಇನ್ಸ್ಪೆಕ್ಟರ್ ರನ್ನು ತಕ್ಷಣ ಅಮಾನತ್ತು ಪಡಿಸಿ ತನಿಖೆ ನಡೆಸಬೇಕು ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಿತರಕ್ಷಣಾ ತಾಲೂಕು ಒಕ್ಕೂಟದ ಕಾರ್ಯದರ್ಶಿ ಕೆ.ಕೆ.ರಾಮಯ್ಯ ಗೃಹ ಮಂತ್ರಿ ಹಾಗೂ ಪಶ್ಚಿಮ ವಲಯ ಐಜೀಪಿ ಯವರನ್ನು ಒತ್ತಾಯಿಸಿದ್ದಾರೆ.

ಅವರು ಈ ಕುರಿತು ಮಂಗಳವಾರ ಹೇಳಿಕೆ ನೀಡಿದ್ದು,
ಇತ್ತೀಚೆಗೆ ಕಿರುಗುಂದ ಗ್ರಾಮದ ಯುವಕ ಪುನೀತ್ ಎಂಬಾತ ಯಾವುದೋ ಕಾರಣದಿಂದ ಗೋಣಿಬಿಡು ಪೊಲೀಸ್ ಠಾಣೆಗೆ ಕರೆ ಮಾಡಿ ಕರೆದಿದ್ದು,
ಗ್ರಾಮಕ್ಕೆ ಬಂದ ಪೊಲೀಸರು ಕರೆ ಮಾಡಿದ ವ್ಯಕ್ತಿ ಪುನಿತನನ್ನೆ ಬಲವಂತದಿಂದ ಹಲ್ಲೆ ನಡೆಸಿ ಠಾಣೆಗೆ ಕರೆದೊಯ್ದು ಅಕ್ರಮವಾಗಿ ಕೂಡಿ ಹಾಕಿ ಮನಸೋ ಇಚ್ಛೆಯಂತೆ ಥಳಿಸಿ ಅಮಾನವೀಯ, ಅತ್ಯಂತ ಹೇಯವಾಗಿ, ಕ್ರೂರವಾಗಿ ಹಲ್ಲೆ ನಡೆಸಿ, ಮೂತ್ರ ಕುಡಿಸಿ ಹಿಂಸಿಸಿ ರಾತ್ರಿ ಕಳಿಸಿದ್ದರು ಎಂದು ಪುನೀತ್ ಈಗಾಗಲೇ ಹಿರಿಯ ಅಧಿಕಾರಿಗಳು ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಆದ್ರೂ ದೌರ್ಜನ್ಯ ಎಸಗಿದ ಸಬ್ ಇನ್ಸ್ಫಕ್ತರ್ ರನ್ನು ಕೇವಲ ವರ್ಗಾವಣೆ ಮಾಡಿ ಚಿಕ್ಕಮಗಳೂರು ಜಿಲ್ಲಾ ಹಿರಿಯ ಪೊಲೀಸರು ಕ್ರಮ ಜರುಗಿಸಿದಂತೆ ಕಣ್ಣೊರೆಸುವ ತಂತ್ರ ಮಾಡಿ ಕೈತೊಳೆದು ಕೊಂಡಿದ್ದಾರೆ. ಇದು ಸರಿಯಲ್ಲ. ಯುವಕನೊಂದಿಗೆ ಅನಾಗರಿಕವಾಗಿ ನಡೆದುಕೊಂಡು ಅತ್ಯಂತ ಹೇಯ ಕೃತ್ಯ ಎಸಗಿರುವ ಎಸೈಯನ್ನು ತಕ್ಷಣ ಅಮಾನತ್ತು ಪಡಿಸಿ ಕ್ರಮ ಜರುಗಿಸಬೇಕು.
ಇಲ್ಲದಿದ್ದರೆ ಸಮಾನ ಮನಸ್ಕರು ಒಟ್ಟುಗೂಡಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಬಾರಿ ಕೊರೊನ ಸಂದರ್ಭದಲ್ಲಿ ಸಹ ಅಮಾನುಷವಾಗಿ ನಡೆದುಕೊಂಡಿದ್ದರು.

ಬಂದ ಮೊದಲಿಗೆ ತುಂಬಾ ಸ್ಟ್ರಿಕ್ಟ್ ಎಂದು ಜನ ಬಹಳ ಖುಷಿಯಿಂದ ಇದ್ದರು.
ನಂತರ ಮಾನವಿಯತೆಯನ್ನೆ ಮರೆತು ಕೆಲಸ ಮಾಡುತಿದ್ದರು ಎಂದು ಗೊಣಿಬೀಡು ನಾಗರಿಕರು ತಿಳಿಸಿದ್ದಾರೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

http://nisargacare.com/career/

Navachaitanya Old Age Home

About Author