ಮುಂದುವರಿದ ಸಹಾಯ ಹಸ್ತ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು.#avintvcom
1 min read
ಮುಂದುವರಿದ ಸಹಾಯ ಹಸ್ತ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು.
ಇಂದು ಜಿಲ್ಲಾ ಸಂಸ್ಥೆ ವತಿಯಿಂದ ಸತತ ಏಳನೇ ದಿನದಂದು ಜಿಲ್ಲಾ ಲಸಿಕಾ ಕೇಂದ್ರದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರುಪೂರೈಕೆ, ಲಸಿಕಾ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಪಾಡುವುದು,
ಲಸಿಕೆ ಪಡೆಯಲು ಬರುವವರಿಗೆ ಅದರ ಮಾಹಿತಿ ನೀಡಿ ಸರತಿ ಸಾಲಿನಲ್ಲಿ ನಿಲ್ಲಿಸುವುದು ಮುಂತಾದ ಸೇವೆಯು ಮುಂದುವರೆದಿದ್ದು,
ಇಂದು ಲಸಿಕಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ನರ್ಸ್, ಆಶಾ ಕಾರ್ಯಕರ್ತರಿಗೆ ಉತ್ತಮ ಗುಣಮಟ್ಟದ ಆಹಾರದ ಪ್ಯಾಕೆಟ್ ಗಳನ್ನು ವಿತರಿಸಲಾಯಿತು.
ಈ ಕಾರ್ಯದಲ್ಲಿ ಜಿಲ್ಲಾ ಕಾರ್ಯದರ್ಶಿ
ಶ್ರೀ ಪಣಿರಾಜ್ ಮತ್ತು ಜಿಲ್ಲಾ ಸಹಾಯಕ ಆಯುಕ್ತರು ಡಾಕ್ಟರ್ ಶ್ರೀನಿವಾಸ್ ರವರು ಹಾಗೂ ಜಿಲ್ಲಾ ಸಂಘಟಕರು ಗಳಾದ ಕಿರಣ್ ನವೀನ್ ಮತ್ತು ಗೈಡ್ ಕ್ಯಾಪ್ಟನ್ ಸುಪ್ರಿಯಾ ರವರು ಹಾಜರಿದ್ದರು.
ಸಚಿವರಾದ ಸಿಟಿ ರವಿ ಅವರು ಲಸಿಕಾ ಕೇಂದ್ರದಲ್ಲಿ ಇಂದು ಭೇಟಿ ನೀಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಸೇವೆಯ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ನಿಮ್ಮ ಸಂಸ್ತೆಗೆ ಬೇಕಾದ ಸಹಾಯ ಮಾಡುವುದಾಗಿ ಶಾಸಕರು ತಿಳಿಸಿದರು.
ವರವಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.