ರೈಲ್ವೆ ಐಸೋಲೇಷನ್ ಕೊಚ್ ಬಳಸಿಕೊಳ್ಳಲು ರಾಜ್ಯ ಸರ್ಕಾರ ನಿರಾಶಕ್ತಿ ನೂರಾರು ರೈಲ್ವೆ ಐಸೋಲೇಷನ್ ಬೋಗಿಗಳು.#avintvcom
1 min read
: ರೈಲ್ವೆ ಐಸೋಲೇಷನ್ ಕೊಚ್ ಬಳಸಿಕೊಳ್ಳಲು ರಾಜ್ಯ ಸರ್ಕಾರ ನಿರಾಶಕ್ತಿ:ನಿರುಪಯುಕ್ತವಾಗಿ ಬಿದ್ದಿವೆ ನೂರಾರು ರೈಲ್ವೆ ಐಸೋಲೇಷನ್ ಬೋಗಿಗಳು…
ಹುಬ್ಬಳ್ಳಿ
ದೇಶಾದ್ಯಂತ ಕೊರೊನಾ ಎರಡನೇ ಅಲೆ ದಿನೇ ದಿನೇ ಹೆಚ್ಚಾಗ್ತಿದೆ. ಅಲ್ದೆ ಮಹಾಮಾರಿ ಕೊರೊನ ವೈರಸ್ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಹರಸಾಹಸ ಪಡುತ್ತಿವೆ. ಇದಕ್ಕೆ ಪೂರಕವೆಂಬಂತೆ ಕೈಜೋಡಿಸಿದ್ದ ರೈಲ್ವೇ ಇಲಾಖೆಯ ಸಹಾಯವನ್ನ ಉಪಯುಕ್ತ ಮಾಡಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ.
ಯಾಕೆ ಏನು ಅಂತ ತೋರಿಸ್ತೀವಿ ಈ ಸ್ಟೋರಿ ನೋಡಿ…
ಹೌದು ದೇಶಾದ್ಯಂತ ಈಗಾಗಲೇ ದಿನೇ ದಿನೇ ಸಾಕಷ್ಟು ಆತಂಕವನ್ನು ಸೃಷ್ಠಿ ಮಾಡುತ್ತಿರುವಂತಹ ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಈಗಾಗಲೇ ಕೇಂದ್ರ ಸರ್ಕಾರ ಅನೇಕ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ದೇಶದೆಲ್ಲೆಡೆ ಯಾವುದೇ ರೀತಿಯಲ್ಲಿ ಕೊರೊನಾ ಕಾರ್ಮೋಡ ಪಸರಿಸಬಾರದು ಎಂಬ ಉದ್ದೇಶದಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನೂ ಸಹ ತೆಗೆದುಕೊಂಡಿದೆ. ಈ ಒಂದು ಮಹತ್ವದ ಕಾರ್ಯಕ್ಕೆ ರೈಲ್ವೆ ಇಲಾಖೆಯೂ ಹೊರತಾಗಿಲ್ಲ. ದೇಶದೆಲ್ಲೆಡೆ ಹೆಚ್ಚಾಗುತ್ತಿರುವ ಕೊರೊನ ಸೊಂಕಿತರ ಭೀತಿಯಿಂದ ಸೌಥ್ ವೆಸ್ಟರ್ನ ರೈಲ್ವೆ ರಾಜ್ಯ ಹಾಗೂ ದೇಶದಲ್ಲಿರುವ ಆಸ್ಪತ್ರೆಗಳಲ್ಲಿ ಐಸೋಲೇಶನ್ ವಾರ್ಡ್ ಗಳ ಕೊರತೆ ಹಿನ್ನೆಲೆ ರೈಲ್ವೆ ಕೋಚ್ ಗಳನ್ನೇ ಐಸೋಲೇಶನ್ ವಾರ್ಡ್ ಗಳನ್ನಾಗಿ ಪರಿವರ್ತನೆ ಮಾಡಿತ್ತು. ಆದ್ರೆ ಕೊರೊನಾ ಸೋಂಕಿತರಿಗೆ ಬೆಡ್ ಗಳ ವ್ಯವಸ್ಥೆ ಮಾಡುವಲ್ಲೇ ಹೆಣಗಾಡುತ್ತಿರುವ ರಾಜ್ಯ ಸರ್ಕಾರ ಈಗಾಗಲೇ ರೈಲ್ವೇ ಬೋಗಿಗಳಲ್ಲಿ ರೆಡಿ ಇರುವ ಸಾವಿರಾರು ಐಸೋಲೇಶನ್ ಬೆಡ್ ಗಳನ್ನು ಬಳಸಿಕೊಳ್ಳುವಲ್ಲಿ ಹಿಂದೇಟು ಹಾಕುತ್ತಿದೆ.
ಬೈಟ್ – ಅನೀಶ್ ಹೆಗಡೆ, ನೈರುತ್ಯ ರೈಕ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ
ಇನ್ನು ಈಗಾಗಲೇ ಹುಬ್ಬಳ್ಳಿಯ ರೈಲ್ವೆ ವರ್ಕ್ ಶಾಪ್ ನಲ್ಲಿ ರೆಡಿಯಾಗಿ ನಿಂತಿರುವ ರೈಲ್ವೇ ಐಸೋಲೇಶನ್ ವಾರ್ಡ್ ಗಳನ್ನು ಸಂಪೂರ್ಣವಾಗಿ ತಯಾರು ಮಾಡಲಾಗಿದೆ ಪ್ರಮುಖವಾಗಿ ಸೌಥ್ ವೆಸ್ಟರ್ನ್ ರೈಲ್ವೇ ಇಲಾಖೆಯ ವ್ಯಾಪ್ತಿಯಲ್ಲಿ 280 ರೈಲ್ವೆ ಕೋಚ್ ಗಳನ್ನ ಪರಿವರ್ತನೆ ಮಾಡಲಾಗಿದ್ದು, ಹುಬ್ಬಳ್ಳಿ ವರ್ಕ್ ಶಾಪ್ ನಲ್ಲಿ 96 ಕೋಚ್ ಗಳನ್ನ ಐಸೋಲೇಶನ್ ಗಳಾಗಿ ಮಾರ್ಪಾಡು ಮಾಡಲಾಗಿದೆ. ಪ್ರಮುಖವಾಗಿ ಕೊರೊನಾ ಲಕ್ಷಣಗಳು ಕಂಡುಬಂದಂತಹ ಯಾವುದೇ ವ್ಯಕ್ತಿ ಈ ರೈಲ್ವೇ ಐಸೋಲೇಶನ್ ಗೆ ಸ್ವಯಂ ಪ್ರೇರಿತವಾಗಿ ಆಗಮಿಸಿ ತಮಗೆ ಕೊರೊನಾ ಸೋಂಕು ತಗುಲಿದೆಯೋ ಇಲ್ಲವೋ ಎಂಬುದರ ಕುರಿತು ವೈದ್ಯರಿಂದ ಚಿಕಿತ್ಸೆ ಪಡೆಯುವ ಮೂಲಕ ಪರೀಕ್ಷೀಸಿಕೊಳ್ಳಬಹುದಾದ ವ್ಯವಸ್ಥೆ ಕೂಡ ಮಾಡಲಾಗಿದೆ. ಇನ್ನು ಒಂದು ಕೋಚ್ ನಲ್ಲಿ 16 ಜನರಿಗೆ ಇಲ್ಲಿ ಐಸೋಲೇಶನ್ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ಬಿದ್ರೆ ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಚಿಕಿತ್ಸೆಗೆ ಬೇಕಾದ ಸಕಲ ವ್ಯವಸ್ಥೆಯನ್ನೂ ಈ ಕೋಚ್ ಗಳಲ್ಲಿ ಮಾಡಲು ಇಲಾಖೆ ಸಮಾಲೋಚನೆ ನಡೆಸಲು ಮುಂದಾಗಿದೆ. ಆದ್ರೆ ರಾಜ್ಯದಾದ್ಯಂತ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಬೆಡ್ ಗಳ ಕೊರತೆ ಹೆಚ್ಚಾಗಿದ್ದರೂ ರಾಜ್ಯ ಸರ್ಕಾರ ಮಾತ್ರ ಈ ಬೆಡ್ ಗಳನ್ನ ಬಳಸಿಕೊಳ್ಳಲು ಹಿಂದೇಟು ಹಾಕುತ್ತಿದೆ. ಅಲ್ದೆ ಈ ಬಗ್ಗೆ ಸಚಿವ ಜಗದೀಶ ಶೆಟ್ಟರ್ ಅವರನ್ನ ಕೇಳಿದ್ರೆ ಸದ್ಯ ರೈಲ್ವೇ ಬೋಗಿಗಳ ಐಸೋಲೇಶನ್ ಅಗತ್ಯತೆ ಇಲ್ಲ . ಅಗತ್ಯ ಬಿದ್ರೆ ನೋಡೋಣ ಎನ್ನುತ್ತಿದ್ದಾರೆ.
ಬೈಟ್ -ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ
ಒಟ್ಟಾರೆ ದೇಶಾದ್ಯಂತ ತನ್ನ ರೌದ್ರನರ್ತನ ನಡೆಸಿರುವ ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಅನೇಕ ರೀತಿಯ ಮುಂಜಾಗ್ರತ ಕ್ರಮಗಳನ್ನ ಕೈಗೊಂಡಿರುವುದು ಒಂದೆಡೆಯಾದ್ರೆ ರಾಜ್ಯದಲ್ಲಿ ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಎದ್ದು ಕಾಣುತ್ತಿದ್ದರೂ ರಾಜ್ಯ ಸರ್ಕಾರ ಮಾತ್ರ ರೈಲ್ವೆ ಇಲಾಖೆಯ ವ್ಯಾಪ್ತಿಯಲ್ಲಿರುವ ಈ ಬೆಡ್ ಗಳ ಉಪಯುಕ್ತತೆಗೆ ಮುಂದಾಗದಿರುವದು ವಿಪರ್ಯಾಸ. ಇನ್ನಾದ್ರೂ ರಾಜ್ಯ ಸರ್ಕಾರ ರೈಲ್ವೇ ಇಲಾಖೆಯ ಐಸೋಲೇಶನ್ ಕೋಚ್ ಗಳನ್ನ ಬಳಕೆ ಮಾಡಿಕೊಳ್ಳುವ ಮೂಲಕ ಹೆಚ್ಚಾಗುತ್ತಿರುವ ಬೆಡ್ ಗಳ ಕೊರತೆ ಹಾಗೂ ಆಕ್ಸಿಜನ್ ಕೊರತೆ ನೀಗಿಸಬೇಕಿದೆ.