*ಆಸ್ತಿ ಜಗಳ ಕೊಲೆಯವರೆಗೆ*ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.#avintvcom
1 min read
ಆಸ್ತಿ ಜಗಳ ಕೊಲೆಯವರೆಗೆ
ಚಿಕ್ಕಮಗಳೂರು ಜಿಲ್ಲೆ.
ಕಳಸ ತಾಲ್ಲೂಕಿನ
ಮಹಾವೀರ ಬಿನ್ ಅನಂತ ರಾಜಯ್ಯ 45 ವರ್ಷ. ಕೊಲೆಯಾದ ವ್ಯಕ್ತಿ.
ಕಂಬಳ ಗದ್ದೆ ಮರಸಣಿಗೆ ಗ್ರಾಮ ಕಳಸ ತಾಲೂಕು. ಇವನಿಗೆ ಈಗ್ಗೆ 03 ದಿನಗಳ ಹಿಂದೆ ಕೋವಿಡ್-19 ಸೋಂಕು ಇದ್ದ ಕಾರಣ ಮೂಡಿಗೆರೆ ಸರ್ಕಾರಿ ಎಂ.ಜಿ.ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು.
ದಿನಾಂಕ 15-05 2021ರಂದು ಸಂಜೆ 7-00 ಗಂಟೆಗೆ ಚಿಕಿತ್ಸೆ ಪಲಕಾರಿಯಾಗುವುದಿಲ್ಲವೆಂದು ಆಂಬುಲೆನ್ಸ್ ನಲ್ಲಿ ಮಹಾವೀರನನ್ನು ಮನೆಗೆ ಕರೆದುಕೊಂಡು ಬಂದರು.
ಮನೆಯ ಜಗುಲಿಯ ಮೇಲೆ ಮಲಗಿಸಿದ ಸಹೋದರ ಪಾರ್ಶ್ವನಾಥ ಮರಸಣಿಗೆ ಕಡೆ ಹೋಗಿದ್ದು ವಾಪಸ್ಸು ರಾತ್ರಿ 8-30 ಗಂಟೆಗೆ ವಾಪಸ್ಸು ಬಂದನು. ಬಂದವನೆ ಕೈಯಲ್ಲಿ ಕತ್ತಿ ಹಿಡಿದುಕೊಂಡು ಬಂದು ಏಕಾ ಏಕಿ ಜಗುಲಿಯ ಮೇಲೆ ಮಲಗಿದ್ದ ಮಹಾವೀರನ ಕುತ್ತಿಗೆಯನ್ನು ಕಾಲಿನಿಂದ ಒತ್ತಿ ತುಳಿಯುತ್ತ ತಲೆ ಮತ್ತು ಮುಖಕ್ಕೆ ಹೊಡೆಯುತ್ತಿದ್ದನು. ಫಿರ್ಯಾದುದಾರರು ಕತ್ತಿಯನ್ನು ಕಿತ್ತುಕೊಂಡರು.ಆದರು ಬಿಡದೆ ಪುನಹ ಸೌದೆ ಕೊಟ್ಟಿಗೆಯಲ್ಲಿದ್ದ ಕೊಡಲಿಯಿಂದ ಮಹಾವೀರನ ಮುಖಕ್ಕೆ ಎಡ ಕಿವಿಯ ಹತ್ತಿರ ಹೊಡೆದಿದ್ದರಿಂದ ಮಹಾವೀರ ಮೃತಪಟ್ಟಿರುತ್ತಾನೆ.
ಆಸ್ತಿ ವಿಚಾರದಲ್ಲಿ ಈ ಹಿಂದೆ ಹಲವಾರು ಬಾರಿ ಜಗಳ ಮಾಡಿಕೊಳ್ಳುತ್ತಿದ್ದರೆಂದು ತಿಳಿದುಬಂದಿದೆ.
ಈ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/navachaithanya-old-age-home/