ಡುಬ್ಲಿಕೇಟ್ ಪಾಸ್ ಕಾರ್ ಸೀಜ್ ಮಾಡಿದ ಕಮೀಷನರ್#avintvcom
1 min read
ಡುಬ್ಲಿಕೇಟ್ ಪಾಸ್ ಕಾರ್ ಸೀಜ್ ಮಾಡಿದ ಕಮೀಷನರ್
ಹುಬ್ಬಳ್ಳಿ- ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಇಂದಿನಿಂದ 14 ದಿನಗಳ ಕಾಲ ಲಾಕ್ ಡೌನ್ ಮಾಡಿದ್ದು, ಅನಾವಶ್ಯಕವಾಗಿ ತಿರುಗಾಡುತ್ತಿವವರಿಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಿ ಎಂದು ಆದೇಶ ಹೊರಡಿಸಿದೆ. ಆದರೆ ಇಲ್ಲೊಬ್ಬ ಮಹಾಪುರುಷ ಡ್ಯುಬ್ಲಿಕೇಟ್ ಪಾಸ್ನ್ನು ಹಚ್ಚಿಕೊಂಡು ಹೋಗುತ್ತಿರುವಾಗ ಕಮೀಷನರ್ ಕೈಯಲ್ಲಿ ಸಿಕ್ಕಾಕೊಂಡಿದ್ದಾನೆ.
ಹೌದು,,, ಹುಬ್ಬಳ್ಳಿ ಧಾರವಾಡ ಕಮೀಷನರ್ ಲಾಬುರಾಮ ನಗರದ ಕೇಶ್ವಾಪೂರ ಸರ್ಕಲ್ ದಲ್ಲಿ ವಾಹನಗಳನ್ನು ಕಾರ್ಯಾಚರಣೆ ಮಾಡುವ ವೇಳೆಯಲ್ಲಿ, ಕಾರಿನ ಸವಾರನೊಬ್ಬ ಡ್ಯುಬ್ಲಿಕೇಟ್ ಪಾಸ್ ಹಚ್ಚಿಕೊಂಡು ಹೋಗುತ್ತಿದ್ದ, ಕಮೀಷನರ್ ಪರಿಶೀಲನೆ ನಡೆಸುತ್ತಿರುವಾಗ ಅನುಮಾನಗೊಂಡು, ಸಂಬಂಧಿಸಿದ ಕಛೇರಿಗೆ ಕೇಳಿದಾಗ ಯಾವುದೇ ಪಾಸ್ ಕೊಟ್ಟಿಲ್ಲ ಎಂದು ತಿಳಿದಿದ್ದು, ಆ ವ್ಯಕ್ತಿಯ ಮೇಲೆ ಕಠಿಣ ಕ್ರಮ ಕೈಗೊಂಡು ಕಾರ್ನ್ನು ಸೀಜ್ ಮಾಡಿದರು. ಈ ರೀತಿ ಯಾರುದರು ಪೊಲೀಸರನ್ನು ಯಾಮಾರಿಸಲು ಹೋದರೆ ಅವರ ಮೇಲೆ ಕಾನೂನು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಸೂಚನೆ ನೀಡಿದರು. ವರದಿ.ಸುರೇಶ್ ಜಾದವ್ ಹುಬ್ಬಳ್ಳಿ