:ರಾಜ್ಯದಲ್ಲಿ *ರೈತರ ನೆರವಿಗಾಗಿ ಅಗ್ರಿ ವಾರ್ ರೂಂ ಸ್ಥಾಪನೆ*#avintvcom
1 min read
ರೈತರ ನೆರವಿಗಾಗಿ ಅಗ್ರಿ ವಾರ್ ರೂಂ ಸ್ಥಾಪನೆ
:ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ಹರಡುತ್ತಿರುವ ಹಿನ್ನಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ,ಮೂಡಿಗೆರೆ ವತಿಯಿಂದ ರೈತರಿಗೆ ಕೃಷಿ ಮತ್ತು ಕೃಷಿ ಸಂಬಂಧಿತ ಸಲಹೆಗಳನ್ನು ನೀಡುವ ಸಲುವಾಗಿ ಅಗ್ರಿ ವಾರ್ ರೂಂ ಆನ್ಲೈನ್ ಸೇವೆಯನ್ನು ಆರಂಭಿಸಿದ್ದು ರೈತರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ.ಎ.ಟಿ.ಕೃಷ್ಣಮೂರ್ತಿ ತಿಳಿಸಿದರು.
ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಈ ಘಟಕದ ಸೇವೆಯನ್ನು ರೈತರು ಕೋವಿಡ್-19 ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪಡೆದುಕೊಳ್ಳಬಹುದಾಗಿದೆ. ರೈತಾಪಿ ವರ್ಗದವರು ತಮ್ಮ ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳ ಸಮಸ್ಯೆಗಳನ್ನು ಛಾಯಾಚಿತ್ರ ಹಾಗೂ ವೀಡಿಯೋಗಳ ಮಖೇನ ವಿಜ್ಞಾನಿಗಳಿಗೆ ಕಳುಹಿಸಿ ಸೂಕ್ತ ಸಲಹೆಗಳನ್ನು ಪಡೆಯಬಹುದಾಗಿದೆ.
ಕೃಷಿ ಕಾರ್ಯಗಳು ಸಾಗಲೇಬೇಕಾಗಿರುವುದರಿಂದ ಕೋವಿಡ್ ಸಾಂಕ್ರಾಮಿಕ ಮಹಾಮಾರಿಯ ನಡುವೆಯೂ ಈ ವ್ಯವಸ್ಥೆಯನ್ನು ಜಾರಿ ಇರುವಂತೆ ನೋಡೊಕೊಳ್ಳಲಾಗುತ್ತಿದೆ. ಈ ಮೂಲಕ ರೈತರೂ ಸಹ ತಮ್ಮ ಚಟುವಟಿಕೆಗಳ ಸಂಧರ್ಭದಲ್ಲಿ ಸದಾ ಜಾಗರೂಕರಾಗಿದ್ದು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿ¸ಬೇಕು. ರೈತರು ಕೇಂದ್ರದ ವಿಜ್ಞಾನಿಗಳ ಈ ದೂರವಾಣಿ ಸಂಖ್ಯೆಗಳಿಗೆ 9480838203,9739916660, 7338550518, 8050406567 & 9632894144 ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಕಳುಹಿಸುವ ಮೂಲಕ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.