*ಸರ್ಕಾರಿ ಕೆಲಸ ದೇವರ ಕೆಲಸ ಎಂದು ಮಾಡಿ ನಿವೃತ್ತಿ*ಶಿಕ್ಷಕ ಸ್ನೇಹಿ#avintvcom
1 min read
ಸರ್ಕಾರಿ ಕೆಲಸ ದೇವರ ಕೆಲಸ ಎಂದು ಮಾಡಿ ನಿವೃತ್ತಿ ಮೂಡಿಗೆರೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರೂ…..ಅಕ್ಷರ ದಾಸೋಹ ನಿರ್ದೇಶಕರು…..ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮೂಡಿಗೆರೆ ಇದರ ಉಪಾಧ್ಯಕ್ಷರೂ ಆದ ಶ್ರೀ ಗಣೇಶಪ್ಪ ಇವರು ಇಂದು ನಿವೃತ್ತರಾಗಲಿದ್ದಾರೆ…..ಸರ್ಕಾರಿ ಕೆಲಸ ದೇವರ ಕೆಲಸ ಎಂದು ಮಾಡಿದವರು.ಇವರು ಮೂಡಿಗೆರೆಯಲ್ಲಿ ಶಿಕ್ಷಕ ಸ್ನೇಹಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪಂಚಾಯತಿ ಸಭೆಗಳಲ್ಲಿ ನೋಡಲ್ ಅಧಿಕಾರಿಯಾಗಿದ್ದಾಗ ಜನಾನುರಾಗಿಯಾಗಿ ವ್ಯಕ್ತಿಯಾಗಿ,ಆಟೋಟ-ಕ್ರೀಡಾ ಸಂದರ್ಭಗಳಲ್ಲಿ ಸ್ಪರ್ಧಾಸ್ಪೂರ್ತಿಯಾಗಿ,ಸಮಸ್ಯೆ ಎದುರಿಸುವಾಗ ಭಾವಪರವಶರಾಗಿ,ಸಭೆ-ಸಮಾರಂಭಗಳಲ್ಲಿ ಕರಾರುವಾಕ್ಕು ಬುದ್ಧಿಜೀವಿಯಾಗಿ…ಅನುಭವಿಯಾಗಿ ಹಿರಿಯಣ್ಣನಂತೆ ನಮ್ಮೊಂದಿಗೆ ನಡೆದುಕೊಂಡ ತಮ್ಮ ಎಲ್ಲಾ ಸಹಕಾರಕ್ಕೆ ನಮ್ಮ ಪ್ರೀತಿಪೂರ್ವಕ ಧನ್ಯವಾದಗಳು…. ತಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ….ಶ್ರೀ ದೇವರು ತಮಗೆ ಆಯುರಾರೋಗ್ಯ ,ಐಶ್ವರ್ಯ, ಸಿರಿ,ಸಂಪತ್ತನ್ನು ಕರುಣಿಸಲಿ.ತಮ್ಮ ಪ್ರವೃತ್ತಿಯನ್ನು ಮುಂದುವರೆಸುವ ಶಕ್ತಿಯನ್ನು ದೇವರು ಕರುಣಿಸಲಿ….ತಮ್ಮ ಸುದೀರ್ಘ ವೃತ್ತಿ ಜೀವನಕ್ಕೆ ಅಭಿನಂದನೆಗಳು.💐💐👍….ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್