*ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ನಿದ್ದೆಯಲ್ಲಿ*ದರ್ಪ. ಯಾಕೆ #avintvcom
1 min read
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ನಿದ್ದೆಯಲ್ಲಿ ಚಿಕ್ಕಮಗಳೂರು ಕೊರೊನಾ ಸಂಕಷ್ಟದಲ್ಲೂ ಅಕ್ರಮ ಮರಳುಗಾರಿಕೆ. ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಹೆಸರೇಳಿಕೊಂಡು ಮರಳು ಸಾಗಾಣೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದಲ್ಲಿ ಘಟನೆ. ಮರಳು ಲೂಟಿ ಪ್ರಶ್ನಿಸಿದ್ದಕ್ಕೆ ದರ್ಪ ತೋರಿದ ಅಧಿಕಾರಿ. ಟಿವಿ9 ಪ್ರತಿನಿಧಿ ಮೇಲೆ ರೇಗಾಡಿದ ಲೇಡಿ ಆಫೀಸರ್. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ವಿಂಧ್ಯಾರಿಂದ ದರ್ಪ. ಯಾಕೆ ವಿಡಿಯೋ ತೆಗೀತಾ ಇರೋದು ಅಂತಾ ಆವಾಜ್. ಕ್ಯಾಮೆರಾ ಕಿತ್ತುಕೊಳ್ಳಲು ಬಂದು ದರ್ಪ ಮೆರೆದ ಅಧಿಕಾರಿ. ನನ್ ಪರ್ಮಿಶನ್ ತೆಗೆದುಕೊಳ್ಳಬೇಕು, ಹಾಗೆಲ್ಲಾ ವಿಡಿಯೋ ಮಾಡಂಗಿಲ್ಲ. ಅಕ್ರಮವನ್ನ ಕೇವಲ ಮಾಧ್ಯಮದವರು ಮಾತ್ರ ಪ್ರಶ್ನೆ ಮಾಡ್ಬೇಕು ಅಂತಿಲ್ಲ. ಪ್ರತಿಯೊಬ್ಬರಿಗೂ ಪ್ರಶ್ನಿಸೋ ಹಕ್ಕಿದೆ ಅಂದಿದ್ದಕ್ಕೆ ಉಡಾಫೆ ವರ್ತನೆ. ದೊಡ್ಡ ಪ್ರಮಾಣದಲ್ಲಿ ನಡೆದ ಮರಳು ಲೂಟಿ ಗೊತ್ತಿಲ್ವಾ ಅಂದಿದ್ದಕ್ಕೂ ರೋಷವೇಶ. ನಮ್ ಕಚೇರಿ ಜಿಲ್ಲಾಮಟ್ಟದಲ್ಲಿದೆ, ಹೋಬಳಿ ಮಟ್ಟದಲ್ಲಿ ನಡೆಯೋದು ಗೊತ್ತಗಲ್ಲ ಎಂದು ಸಮರ್ಥನೆ. 2 ದಿನದ ಹಿಂದೆ ಹಿಟಾಚಿ ಬಳಸಿ ಟಿಪ್ಪರ್ ಗಳಲ್ಲಿ ಹತ್ತಾರು ಲೋಡ್ ಮರಳು ಸಾಗಾಟ. ತನ್ನ ಮನೆಗೂ ಮರಳು ಬಂದಿರೋದನ್ನ ಒಪ್ಪಿಕೊಂಡ ಪರಿಷತ್ ಉಪ ಸಭಾಪತಿ. ಇಷ್ಟೆಲ್ಲಾ ನಡೆದ್ರೂ ಸೈಲೆಂಟಾಗಿರೋ ಪೊಲೀಸ್ ಇಲಾಖೆ. ಜಿಲ್ಲಾಡಳಿತ ಪ್ರತಿ ನಡೆಯನ್ನ ಗಮನಿಸುತ್ತಿರೋ ಸಾರ್ವಜನಿಕರು. ಇಗಿನ ಸರ್ಕಾರದಲ್ಲಿ ಜನಪ್ರತಿನಿದಿಗಳಷ್ಟೆ ದರ್ಪ ಅದಿಕಾರಿಗಳಿಗೂ ಇದೆ. ಭ್ರಷ್ಟ ಜನಪ್ರತಿನಿದಿಗಳ ಮತ್ತು ಅದಿಕಾರಿಗಳ ಕುತ್ತಿಗೆ ಪಟ್ಟಿ ಹಿಡಿದು ನ್ಯಾಯ ಕೇಳುವ ದಿನ ದೂರವಿಲ್ಲ. ಪ್ರಾಮಾಣಿಕತೆ ಬಿಟ್ಟರೆ ಮುಂದಿನ ದಿನ ನಿಮಗೆ ಭವಿಷ್ಯವಿಲ್ಲ ಯುವಕರೆ ಎಚ್ಚರ. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.