AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅನೇಕ ಕಡೆ ಇಂದು ಮಳೆಯಾಗಿದೆ. ಗುಡುಗು ಸಹಿತ ಬಾರಿ ಮಳೆಯಾಗಿದೆ. #avintvcom

1 min read
Featured Video Play Icon

ಚಿಕ್ಕಮಗಳೂರು ಜಿಲ್ಲೆಯ ಅನೇಕ ಕಡೆ ಇಂದು ಮಳೆಯಾಗಿದೆ.
ಮೂಡಿಗೆರೆಯ
ಬಣಕಲ್, ಕೊಟ್ಟಿಗೆಹಾರ ಸುತ್ತ ಗುಡುಗು ಸಹಿತ ಮಳೆ

:ಬಾಳೂರು, ಚಾರ್ಮಾಡಿ ಘಾಟಿ, ಕೊಟ್ಟಿಗೆಹಾರ, ಬಣಕಲ್, ಬಗ್ಗಸಗೋಡು, ಫಲ್ಗುಣಿ, ಹೊರಟ್ಟಿ.
ಮೂಡಿಗೆರೆ ಪಟ್ಟಣ.ಬೀಜುವಳ್ಳಿ. ಸೇರಿದಂತೆ ಹಲವು ಕಡೆ ಗುರುವಾರದಂದು ಗುಡುಗು ಸಹಿತ ಬಾರಿ ಮಳೆಯಾಗಿದೆ.
ಅರ್ಧ ಗಂಟೆಗೂ ಆಧಿಕ ಕಾಲ ಬಿರುಸಿನಿಂದ ಕೂಡಿದ ಮಳೆಯಾಗಿದ್ದು, ಮಳೆಯಿಂದ ರೈತರ, ಬೆಳೆಗಾರರ ಮೊಗದಲ್ಲಿ ಹರ್ಷ ಮೂಡಿದೆ. ಪ್ರತಿ ವರ್ಷವೂ ಒಂದಲ್ಲ ಒಂದು ಕಾರಣದಿಂದ ಹವಾಮಾನ ವೈಪರೀತ್ಯದಿಂದ ಸಕಾಲಕ್ಕೆ ಮಳೆಯಾಗದೇ ಬೆಳೆ ಇಳುವರಿ ಕಡಿಮೆಯಿತ್ತು. ಆದರೆ ಈ ಬಾರಿಯ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಕಾಫಿ ಮೊಗ್ಗು ಹೂವಾಗಿ ಅರಳಿದೆ. ಇದರಿಂದ ರೈತರು ಮುಂದಿನ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಮಳೆಯು ಕಾಫಿ ಬೆಳೆಗೆ ಮಾತ್ರವಲ್ಲದೇ ಕಾಳುಮೆಣಸು, ಶುಂಠಿ ಮತ್ತಿತರ ಬೆಳೆಗೂ ಅನುಕೂಲವಾಗಿದೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

http://nisargacare.com/career/

Navachaitanya Old Age Home

About Author