*ಕಾಡೆಮ್ಮೆ ದಾಳಿ. ಪ್ರಣಾಪಾಯದಿಂದ ಪಾರು*ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಮಂಗಳ ನರ್ಸಿಂಗ್ ಹೊಮ್ ದಾಖಲಿಸಲಾಗಿದೆ #avintvcom
1 min read
ಕಾಡೆಮ್ಮೆ ದಾಳಿ. ಪ್ರಣಾಪಾಯದಿಂದ ಪಾರು
ಚಿಕ್ಕಮಗಳೂರು ಜಿಲ್ಲೆ. ಮೂಡಿಗೆರೆ ತಾಲೂಕಿನ ಹೆಸಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಲ್ಲಿಬೈಲ್ ತೋಟದಲ್ಲಿ ಗುರುವಾರ ಸಂಜೆ 3.15.ರ ಸುಮಾರಿಗೆ ತೋಟದ ಜನಗಳನ್ನು ಕೆಲಸದಿಂದ ಕೈ ಬಿಟ್ಟು ಬರುವಾಗ ರೈಟರ್ ವೆಂಕಟೇಶ್ ರವರ ಮೇಲೆ ಕಾಡೆಮ್ಮೆ ದಾಳಿ ನಡೆಸಿದೆ.
ಮಳೆ ಬಂತೆಂದು ಮರದಡಿ ನಿಂತ ವೆಂಕಟೇಶ ರವರಿಗೆ ಏಕಾ ಏಕಿ ದಾಳಿ ಅಗಿದೆ.
ದಾಳಿ ವೇಳೆ ಕೈಯಲ್ಲಿದ್ದ ಮೊಬೈಲ್ ಹಾರಿ ಹೊಗದೆ ಇದ್ದುದ್ದರಿಂದ ಕೂಡಲೆ ತೋಟದ ಮಾಲಿಕರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಕೂಡಲೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮಾಡಿಸಿ,ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಮಂಗಳ ನರ್ಸಿಂಗ್ ಹೊಮ್ ಗೆ ದಾಖಲಿಸಲಾಗಿದೆ ಎಂದು ತೋಟದ ಮಾಲಿಕ ವಿವೇಕ್.ಎನ್.ಪಿ.ತಿಳಿಸಿದ್ದಾರೆ.
ಪ್ರಾಣಕ್ಕೆ ಯಾವ ತೊಂದರೆ ಇಲ್ಲ ಎಂದು ಡಾ:ಎಂ.ಪಿ.ಆಶೋಕ್ ಗೌಡ ಹೇಳಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/career/