*ನೀರ್ಲಕ್ಷ ಬೇಡವೆ ಬೇಡ*ಕೊರೋನಾವನ್ನು ನಿರ್ಲಕ್ಷ್ಯಮಾಡಬೇಡಿ ಹಾಗೂ ಲಘುವಾಗಿ ಪರಿಗಣಿಸಬೇಡಿ.ಎಂ ಪಿ ಕುಮಾರಸ್ವಾಮಿ #avintvcom
1 min readನೀರ್ಲಕ್ಷ ಬೇಡವೆ ಬೇಡ ಆತ್ಮೀಯ ನನ್ನ ವಿಧಾನಸಭಾ ಕ್ಷೇತ್ರದ ಜನತೆಯಲ್ಲಿ ಮನವಿ, ಭಾರತವನ್ನು ಬಾಧಿಸುತ್ತಿರುವ ಕೋರೋನಾ ಎರಡನೆಯ ಅಲೆಯನ್ನು ಅತ್ಯಂತ ಗಂಭೀರವಾಗಿ ಪ್ರತಿಯೊಬ್ಬರು ತೆಗೆದುಕೊಳ್ಳಬೇಕು, ಸರ್ಕಾರದ ಆದೇಶವನ್ನು ಅತ್ಯಂತ ಕಟ್ಟುನಿಟ್ಟಾಗಿ ಅನುಸರಿಸಿ, ಯಾವುದೇ ಕಾರ್ಯಕ್ರಮ ಮಾಡದೇ ಹಾಗೂ ಸಾರ್ವಜನಿಕ ವಾಗಿ ಅನವಶ್ಯಕವಾಗಿ ಸೇರಿದೆ, ಮನೆಯಲ್ಲೇ ಇದ್ದು ಕೊರೋನಾ ಸರಪಳಿಯನ್ನು ಕಡಿತಗೊಳಿಸಲು ಸಹಕರಿಸಬೇಕು, ಅಗತ್ಯ ಹಾಗೂ ತುರ್ತು ಸಂದರ್ಭದಲ್ಲಿ ಹೊರಗೆ ಹೋಗುವವರು ಸ್ಯಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ದೂರದಿಂದ ತಮ್ಮ ಕೆಲಸವನ್ನು ಮುಗಿಸಿಕೊಂಡು, ತಾವು ಹಾಗೂ ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಬೇಕು. ಸರ್ಕಾರ ನೀಡುವ ಯಾವುದೇ ಆದೇಶ ಹಾಗೂ ಎಚ್ಚರಿಕೆಯನ್ನು ನಿರ್ಲಕ್ಷಿಸಬೇಡಿ, ಹಾಗೂ ಮುಂದಿನ ಕೆಲ ದಿನಗಳವರೆಗೆ ನಾನು ಸಹ ಯಾವುದೇ ಸಾರ್ವಜನಿಕ ಕಾರ್ಯಕ್ರಮ ಅಥವಾ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಿದ್ದೇನೆ, ಸಾಕಷ್ಟು ಜನ ಈಗಲೂ ಸಹ ಮನೆ ಹತ್ತಿರ ಬರುತ್ತಿದ್ದು ದಯವಿಟ್ಟು ತಾವೆಲ್ಲರೂ ಫೋನ್ನ ಮೂಲಕ ನನ್ನ ಹಾಗೂ ನನ್ನ ಕಾರ್ಯದರ್ಶಿಯವರನ್ನು ಸಂಪರ್ಕ ಮಾಡಬೇಕು, ಇಂತಹ ಕೊರೊನಾ ಸಂದರ್ಭದಲ್ಲಿ ಯಾವುದೇ ಕಚೇರಿ ಕೆಲಸ ಇಲ್ಲದಿರುವುದರಿಂದ ದಯವಿಟ್ಟು ತಾವುಗಳು ಮನೆಯಲ್ಲೇ ಇದ್ದು ಕರೋನವನ್ನು ನಿರ್ಣಾಮ ಮಾಡಲು ಸಹಕಾರ ಮಾಡಬೇಕು ಎಂದು ತಮ್ಮಲ್ಲಿ ಮತ್ತೊಮ್ಮೆ ಬೇಡಿಕೊಳ್ಳುತ್ತಿದ್ದೇನೆ. ಕೊರೋನಾವನ್ನು ನಿರ್ಲಕ್ಷ್ಯಮಾಡಬೇಡಿ ಹಾಗೂ ಲಘುವಾಗಿ ಪರಿಗಣಿಸಬೇಡಿ. ವಿಜ್ನಾನವನ್ನು ನಂಬಿ. ಕಾನೂನನ್ನು ಪಾಲಿಸಿ. ಇಂತಿ ಎಂ ಪಿ ಕುಮಾರಸ್ವಾಮಿ ಶಾಸಕರು. ಮೂಡಿಗೆರೆ ವಿಧಾನಸಭಾ ಕ್ಷೇತ್ರ. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.