AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಳಸ ಡಾ.ರಾಜ್ ಕನ್ನಡ ಸಂಘ ಸರಳವಾಗಿ ಡಾ.ರಾಜ್ ಕುಮಾರ್ ಜನ್ಮದಿನದ ಆಚರಣೆ ಯಲ್ಲಿ ಭಾವಚಿತ್ರ ಕ್ಕೆ ಪುಷ್ಪರ್ಚನೆ#avintvcom

1 min read

ಕಳಸ :ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆ ನಿಂತವರು ಡಾ.ರಾಜ್ ; — ಡಾ.ಸಿ ಆರ್. ಮೋಹನ್ ಕುಮಾರ್

ಕಳಸ:
ಅಭಿನಯಿಸುವ ಪಾತ್ರ ಕ್ಕೆ ಜೀವ ನೀಡಿ ಅಭಿಮಾನಿ ಗಳ ಹೃದಯದಲ್ಲಿ ಶಾಶ್ವತ ವಾಗಿ ನೆಲೆ ನಿಂತವರು ಡಾ.ರಾಜಕುಮಾರ್ .
ಕನ್ನಡಕ್ಕೆ ಒಬ್ಬನೇ ರಾಜಕುಮಾರ್ ಎಂದು ಕಳಸ ಪೊಲೀಸ್ ಠಾಣೆ ಯ ಹೆಡ್ಕಾನ್ಸ್ಟೇಬಲ್ ಡಾ.ಸಿ. ಆರ್. ಮೋಹನ್ ಕುಮಾರ್ ಹೇಳಿದರು.

ಅವರು ಇಂದು ಕಳಸ ಡಾ.ರಾಜ್ ಕನ್ನಡ ಸಂಘ ಸರಳವಾಗಿ ಡಾ.ರಾಜ್ ಕುಮಾರ್ ಜನ್ಮದಿನದ ಆಚರಣೆ ಯಲ್ಲಿ ಭಾವಚಿತ್ರ ಕ್ಕೆ ಪುಷ್ಪರ್ಚನೆ ನಮನ ಸಲ್ಲಿಸಿ ಮಾತನಾಡಿದರು.
ಕರ್ನಾಟಕವೇಇವರ ತವರು.. ಇವರೇ ಕನ್ನಡದ ಕಲ್ಪತರು. ರಾಜ್ ಕುಮಾರ್ ಕೇವಲ ನಟನಾಗಿರದೆ ಅಧ್ಯಾತ್ಮ ಚಿಂತನೆ ಗಳುವುಳ್ಳ ಉತ್ತಮ ಯೋಗ ಪಟು ವಾಗಿದ್ದರು. ಇಂತಹ ವಿಶೇಷ ವ್ಯಕ್ತಿತ್ವ ಹೊಂದಿದ್ದ ಅವರು ಗಾಯಕರಾಗಿ ಕೂಡ ಸೇವೆಸಲ್ಲಿಸಿದರು.

ಕಳಸ ಡಾ.ರಾಜ್ ಕನ್ನಡ ಸಂಘದ ಅಧ್ಯಕ್ಷ,
ಕನ್ನಡ ರಾಜು ಮಾತನಾಡುತ್ತಾ ಡಾ.ರಾಜ್ ಕುಮಾರ್ ರವರು ಕಡಿಮೆ ಶಿಕ್ಷಣ ಪಡೆದರೂ ನಾಡುನುಡಿಗಾಗಿ ಅವರು ಸಲ್ಲಿಸಿದ ಸೇವೆಗೆ ಅತ್ಯುನ್ನತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದು ದೇಶವೇ ಕನ್ನಡ ನಾಡಿ ನತ್ತ ತಿರುಗಿ ನೋಡುವಂತೆ ಮಾಡಿದರು. ನಾವು ಮಾಡುವ ಕಾರ್ಯಕ್ರಮ ಸಣ್ಣದಿರಲಿ ದೊಡ್ಡದಿರಲಿ ಪ್ರಾಮಾಣಿಕತೆ.
ನಿಷ್ಠೆ ಯಿಂದ ಮಾಡಿದ್ದಾದರೆ ಸಾಧನೆ ಮಾಡಬಹುದು ಎನ್ನುವಂತೆ ಸ್ಮರಿಸಿದವರು ಡಾ.ರಾಜ್ ಕುಮಾರ್ ಎಂದರು .

ಡಾ.ರಾಜ್ ಕುಮಾರ್ ಜನ್ಮದಿನದ ಪ್ರಯುಕ್ತ 1000ಮಾಸ್ಕ್ ವಿತರಿಸಿದರು.
ಹಾಗೂ ಪೊಲೀಸ್ ಠಾಣೆ ಗ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳಿಗೆ ಸಹ ಮಾಸ್ಕ್ ಗಳನ್ನು ವಿತರಣೆ ಮಾಡಿದರು

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶ್ಯಾಮಚಾರ್. ಸಂತೋಷ.. ಪೂರ್ಣೇಶ್. . ಉಪಸ್ಥಿತರಿದ್ದರು

ವರದಿ.
ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

Career | job

Navachaitanya Old Age Home

 

About Author