AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಿಷೇದ :ವಿಜಯ್ ಕುಮಾರ್ #avintvcom

1 min read
Featured Video Play Icon

*ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಿಷೇದ :ವಿಜಯ್ ಕುಮಾರ್

ಕಳಸ ;ಕರೋನಾ ಎರಡನೇ ಅಲೆ ಅತೀ ಹೆಚ್ಚು ವೇಗ ದಿಂದ ಸಾಂಕ್ರಾಮಿಕ ವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದ ಆದೇಶ ದಂತೆ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಧಾರ್ಮಿಕ ಕಾರ್ಯಕ್ರಮ ಗಳನ್ನು ನಿಷೇದಿ ಸಲಾಗಿದೆ ಎಂದು ಕುದುರೆಮುಖ ವೃತ ದ ಪೊಲೀಸ್ ನಿರೀಕ್ಷಕಾರದ ಶ್ರೀ ವಿಜಯ್ ಕುಮಾರ್ ತಿಳಿಸಿದರು.

ಅವರು ಏಪ್ರಿಲ್ 21ರಂದು ಕಳಸ ಪೊಲೀಸ್ ಠಾಣೆ ಯಲ್ಲಿ ದೇವಸ್ಥಾನ. ಮಸೀದಿ. ಚರ್ಚ್. ಕಲ್ಯಾಣ ಮಂಟಪ. ಸಭಾಂಗಣ. ದ ಮುಖ್ಯಸ್ಥರ ಸಮ್ಮುಖದಲ್ಲಿ ನೆಡದ ಸಭೆಯಲ್ಲಿ ಮಾತನಾಡಿದರು.
ಕಲ್ಯಾಣ ಮಂಟಪ ದಲ್ಲಿ 50ಜನರು. ಜನ್ಮದಿನದ ಆಚರಣೆ ಗೆ 50ಜನ.ಶವಸಂಸ್ಕಾರ ಕ್ಕೆ 20ಜನರಿಗೆ ಅವಕಾಶವಿದೆ . ಆದರೆ ಇವರೆಲ್ಲರೂ ಜಿಲ್ಲಾಧಿಕಾರಿ ಗಳಿಂದ ಪರವಾನಗಿ ಸಹಿತ ಪಾಸ್ ಪಡೆದು ಕೊಳ್ಳುವುದು ಕಡ್ಡಾಯವಾಗಿದೆ.ಮದುವೆ ಸಂಭ್ರಮ ದಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಪಾಸ್ ಪಡೆದುಕೊಳ್ಳಬೇಕು. ಎಲ್ಲಾ ರಾಜಿಕೀಯ. ಧಾರ್ಮಿಕ. ಕ್ರೀಡಾ ಮನೋರಂಜನೆ. ಶೈಕ್ಷಣಿಕ. ಸಬೆ ಸಮಾರಂಭ ಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಪಿಎಸ್ಐ. ಎ. ಬಿ. ಮಂಜಯ್ಯ ಮಾತನಾಡುತ್ತಾ ಈಗಿನ ಕರೋನಾ ಪರಿಸ್ಥಿತಿ ಅರ್ಥೈಸಿ ಕೊಂಡು ಸಹಕರಿಸಿ ಎಂದು ಮನವಿ ಮಾಡಿಕೊಂಡ ಅವರು ಪ್ರತಿಯೊಂದು ಕಾರ್ಯಕ್ರಮ ಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಕಡ್ಡಾಯ ಮಾಸ್ಕ್ ಧಾರಣೆ ಹಾಗೂ ಕಾರ್ಯಕ್ರಮದ ಆರಂಭ ಮತ್ತು ಕೊನೆಯಲ್ಲಿ ಸ್ಯಾನಿಟೇಜರ್ ಮಾಡಬೇಕು.

ಹೆಡ್ ಕಾನ್ಸ್ಟೇಬಲ್. ಸಿ. ಆರ್.ಮೋಹನ್ ಕುಮಾರ್ ಕಾರ್ಯಕ್ರಮ ದಲ್ಲಿ ಕೊರೊನ ಬಗ್ಗೆ ಭೀತಿ ಬೇಡ. ಆದರೆ ಜೀವ ಇದ್ದರೆ ಜೀವನ ಆದ್ದರಿಂದ ಎಚ್ಚರಿಕೆ ವಹಿಸಿ ಲಸಿಕೆ ತೆಗೆದುಕೊಂಡು ಸರ್ಕಾರ ಹೇಳುವ ನಿಯಮ ಗಳನ್ನು ಪಾಲಿಸಬೇಕು ಎಂದರು.

ಎ ಎಸ್ ಐ ಮುರುಳೀಧರ್. ಉಮೇಶ್ ಕರಿಗೋಳಿ. ಸಂಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೇಯಾಂಶ ಜೈನ್. ಪಂಚಾಯತಿ ಅಭಿರುದ್ದಿ ಅಧಿಕಾರಿ ಕವೀಶ್. ಗ್ರಾಮ ಲೆಕ್ಕಾಧಿಕಾರಿ ಪ್ರಸನ್ನ. ಶ್ರೀಮತಿ ಹೇಮಲತಾ. ಅನಿಲ್ ಕೋವಿಯಸ್. ಹೊರನಾಡು ದೇವಸ್ಥಾನ ದ ರಾಘವೇಂದ್ರ.. ದೇವಸ್ಥಾನ. ಸಭಾಂಗಣ. ಕಲ್ಯಾಣಮಂಟಪ.ಮಾಲೀಕರು ಹಾಗೂ ಇನ್ನು ಮುಂತಾದವರು ಮತ್ತು ಗ್ರಾಮಸ್ಥರು ಗಳು ಭಾಗವಹಿಸಿದ್ದರು*
ವರದಿ : ಮಗ್ಗಲಮಕ್ಕಿ ಗಣೇಶ್
ಬ್ಯುರೊ ನ್ಯೂಸ್

Career | job

Navachaitanya Old Age Home

About Author