AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸರ್ಕಾರದ ನಿಯಮಕ್ಕೆ ಬದ್ದ.ಸಾಹಿತಿ ಹಳೆಕೋಟೆರಮೇಶ್#avintvcom

1 min read
Featured Video Play Icon

ಸರ್ಕಾರದ ನಿಯಮಕ್ಕೆ ಬದ್ದ.ಸಾಹಿತಿ ಹಳೆಕೋಟೆರಮೇಶ್

ಸಾಹಿತಿಗಳು, ಪ್ರಗತಿಪರ ಕೃಷಿಕರು, ಲೇಖಕರು ಚಿಂತಕರು ಜೇಸಿ ಮತ್ತು ಲಯನ್ಸ್ ಕ್ಲಬ್ ಹಾಗೂ ಮೂಡಿಗೆರೆ ತಾಲ್ಲೂಕ್  ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅದ್ಯಕ್ಷರು.

ಮೂಡಿಗೆರೆ ತಾಲ್ಲೂಕ್ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಯಕ್ಷರಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹಳೆಕೋಟೆ ರಮೇಶ್ ಅವರ ಪುತ್ರ ಯುಗಂಧರ ಮತ್ತು ಶ್ರೇಯ ಇವರ ವಿವಾಹ ಏಪ್ರಿಲ್‌ 25 ರ ಭಾನುವಾರ ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಅದ್ದೂರಿಯಾಗಿ ನಿಗದಿಯಾಗಿತ್ತು. ಪ್ರಪಂಚದ ಹಲವು ಕಡೆಗಳಿಂದ ಅತಿಥಿಗಳು ಆಗಮಿಸುತಿದ್ದರು.

ಕೋವೀಡ್ 19 ಕಾಯಿಲೆಯು ತೀವ್ರವಾಗಿ ಹರಡುತ್ತಿರುವುದರಿಂದ ಸರ್ಕಾರ ಮದುವೆಗೆ ಕೆಲವು ಷರತ್ತುಗಳನ್ನು ವಿಧಿಸಿ ಜನಮಿತಿ ಹಾಕಿರುವುದರಿಂದ  ಮದುವೆಯು ಸರಳವಾಗಿ ನಡೆಯಲಿದೆ ಎಂದು ಸಾಹಿತಿ ಹಳೆಕೋಟೆ ರಮೇಶ್ ತಿಳಿಸಿದ್ದಾರೆ.

ಅವಿನ್ ಟಿವಿಯೊಂದಿಗೆ ಮಾತನಾಡಿದ ಅವರು ನಮ್ಮ ಮಗ ಯುಗಂಧರ ಮತ್ತು ಶ್ರೇಯ ಇವರ ಮದುವೆಯ ಕಾರ್ಯಕ್ರಮಗಳ ಆಮಂತ್ರಣವನ್ನು ಈ ಮೊದಲು ಕಳುಹಿಸಿದ್ದೆವು.ಆದರೆ ಕೋವಿಡ್ ಕಾಯಿಲೆಯು ತೀವ್ರವಾಗಿ ಹರಡುತಿರುವುದರಿಂದ ಸರ್ಕಾರದ ಕೆಲವು ಷರತ್ತುಗಳನ್ನು ವಿಧಿಸಿರುವುದರಿಂದ ನಾವು ಮದುವೆಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳನ್ನು ಮಿತಿಗೊಳಿಸಿದ್ದೇವೆ.

ದಯವಿಟ್ಟು ನೀವೆಲ್ಲರೂ,ವಧು ವರರನ್ನು ತಾವಿರುವಲ್ಲಿಂದಲೇ ಆಶೀರ್ವದಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಶ್ರಿಮಂತಿಕೆ ಹಾಗೂ ರಾಜಕಾರಿಣಿಗಳ ಬೆಂಬಲ ಇದ್ದರು ಸಹ ತನ್ನ ಪ್ರಾಮಾಣಿಕತೆ ಹಾಗೂ ಸರಳತೆಯನ್ನ ಎತ್ತಿ ಹಿಡಿದ ಪ್ರಗತಿ ಪರ ಕೃಷಿಕ,

ಬಂಗಾರದ ಮನುಷ್ಯರಾದ ಹಳೆಕೋಟೆರಮೇಶ್ ಇವರ ಸಮಾಜದ ಕಳಕಳಿಗೆ ರಾಜ್ಯದ ಎಲ್ಲ ಜನತೆ ಪ್ರಶಂಸೆಯನ್ನು ವ್ಯಕ್ತ ಪಡಿಸಿದ್ದಾರೆ.

ವದು ವರರಿಗೆ

ಅವಿನ್ ಟಿವಿಯ ಪರವಾಗಿ ನಾವು ಹಾರೈಸುತ್ತೆವೆ.ನೀವು ಹಾರೈಸಿ.

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

Career | job

Navachaitanya Old Age Home

 

About Author