ಕೃಷಿ ಪ್ರದಾನ ದೇಶ ವಾದ ಭಾರತ ದಲ್ಲಿ ರೈತರಿಗೆ ಮೀನುಗಾರಿಕೆಗೆ ಉತ್ತೇಜನ; ಬಿ.ಕೆ. ಚಂದ್ರಶೇಖರ್.#avintvcom
1 min read
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನ :ಗೋಣಿಬೀಡು ಜಿ. ಹೊಸಳ್ಳಿ (ಕೆಮ್ಮಣ್ಣು ಗುಂಡಿ )ಯಲ್ಲಿ ಮೀನು ಕೃಷಿ ತರಬೇತಿ
—————————————-
ರೈತರಿಗೆ ಮೀನುಗಾರಿಕೆಗೆ ಉತ್ತೇಜನ; ಬಿ.ಕೆ. ಚಂದ್ರಶೇಖರ್.
ಕೃಷಿ ಪ್ರದಾನ ದೇಶ ವಾದ ಭಾರತ ದಲ್ಲಿ ಮೀನು ಸಾಕಾಣಿಕೆ ಯನ್ನು ಉದ್ಯೋಗ ವನ್ನಾಗಿ ಮಾಡಿಕೊಳ್ಳಬಹುದು ಎಂದು ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ಅಧ್ಯಕ್ಷ ಬಿ ಕೆ ಚಂದ್ರಶೇಖರ್ ಹೇಳಿದರು.
ಅವರು ಶುಕ್ರವಾರ ಜೇಸಿಐ ಗೋಣಿಬೀಡು ಹೊಯ್ಸಳ ಘಟಕ ಮತ್ತು ಕೃಷಿ ವಿಜ್ಞಾನ ಕೇಂದ್ರ ಹಾಗೂ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಮೂಡಿಗೆರೆ ಇವರ ಸಂಯುಕ್ತ ಆಶ್ರಯ ದಲ್ಲಿ “ರೈತರಿಗೆ ಮೀನು ಕೃಷಿ ತರಬೇತಿ ಕಾರ್ಯಗಾರ ದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಗ್ರ ಮೀನು ಸಾಗಾಣಿಕೆ ಯಿಂದ ರೈತರಿಗೆ ಮೂಲ ಕಸುಬಿನ ಜೊತೆ ಆರ್ಥಿಕ ಸುಧಾರಣೆ ಆಗುವುದರಿಂದ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಡಿಮೆ ಯಾಗುತ್ತದೆ. ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರ ಯುವಕರಿಗೆ ಮೀನುಗಾರಿಕೆಗೆ ಉತ್ತೇಜನ ನೀಡುತ್ತಿದೆ ಎಂದರು.
ಸಸ್ಯ ಮತ್ತು ಕೀಟ ರೋಗ ಶಾಸ್ತ್ತ್ರಜ್ಞರಾದ ಡಾ.ಗಿರೀಶ್ ರವರು ಮಾತನಾಡುತ್ತಾ ಮೀನು ಗಾರಿಕೆಯನ್ನು ಸ್ವಾವಲಂಬಿಕಾರಣ ಮಾಡುವ ಮಹತ್ವದ ಚಿಂತನೆಯಿದೆ. ಸಂಕಷ್ಟದ ಕಾಲದಲ್ಲಿಯುಮೀನುಗಾರರ ನೆರವಿಗೆ ಸರ್ಕಾರ ಪ್ರಯತ್ನಿಸುತ್ತಿದೆ. ಕೃಷಿ ಗೆ ಯೋಗ್ಯ ವಲ್ಲದ ಅತೀ ತೇವಾಂಶ ವಿರುವ ಮತ್ತು ಜೌಗು ತಗ್ಗು ಪ್ರದೇಶ ವನ್ನು ಉಪಯೋಗಿಸುವುದರಿಂದ ಭೂಮಿಯು ಸದ್ಬಳಕೆ ಆಗುತ್ತದೆಂದರು.
ಮೂಡಿಗೆರೆ ಮೀನು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಶ್ರೀ ಸ್ವಾಮಿ ರವರು ಮಾತನಾಡುತ್ತಾ ಮೀನು ಸಾಕಾಣಿಕೆ ಯಿಂದ ದೊಡ್ಡ ಉದ್ಯಮಿ ಯಾಗಬಹುದು ಮೀನಿನ ಸಾಕಾಣಿಕೆಯ ಹಿಂದೆ ಹಲವು ಉದ್ಯಮ ಗಳು ತೆರೆದು ಕೊಳ್ಳುತ್ತದೆ. ಮೀನು ಸಾಕಾಣಿಕೆ. ಮೀನಿನ ಆಹಾರೋತ್ಪನ್ನ ಗಳ ಹಾಗೂ ಮಾರಾಟ ಕೇಂದ್ರ. ಮೀನು ಗಳ ಶುದ್ದಿಕರಣಹಾಗೂ ಶಿಥಿಲೀಕರಣ ಮತ್ತು ರಫ್ತ್ತು ಉದ್ಯಮ ಗಳ ತಾಜಾ ಮೀನಿನ ಮಾರುಕಟ್ಟೆ ಹಾಗೂ ಇನ್ನೂ ಮುಂತಾದ ವಿಷಯ ಗಳ ಬಗ್ಗೆ ಕೂಲಂಕುಷವಾಗಿ ತಿಳಿಸಿದರು
ಪ್ರಗತಿ ಪರ ರೈತ. ಹೆಚ್. ಕೆ.ಪೂರ್ಣೇಶ್. ರೈತ ಒಕ್ಕೂಟ ದ ಅಧ್ಯಕ್ಷ ಶ್ರೀ ಹಾಲಪ್ಪ ಗೌಡ . ಬಾಲಕೃಷ್ಣ. ರಾಜೇಗೌಡ ಕಾರ್ಯದರ್ಶಿ ಹೆಚ್. ಆರ್ ಯೋಗೇಶ್ ಕುಮಾರ್ ಮಾತ ನಾಡಿದರು . ಗ್ರಾಮ ಪಂಚಾಯತಿ ಸದಸ್ಯ ಚಂದ್ರಶೇಖರ್. ಮದು. ರಂಜಿತ್. ಹಾಗೂ ಇತರೆ 50 ಜನರೈತರು ಭಾಗವಹಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್
ಬ್ಯೂರೋ ನ್ಯೂಸ್.