ಬಾಬಾ ಸಾಹೇಬ್ ಅಂಬೇಡ್ಕರ್ ಅವರ 130ನೆ ಜನುಮ ದಿನವನ್ನು ಹಾಂದಿ ಘಟಕದಲ್ಲಿ ಆಚರಿಸಲಾಯಿತು #avintvcom
1 min read
ಬಾಬಾ ಸಾಹೇಬ್ ಅಂಬೇಡ್ಕರ್ ಅವರ 130ನೆ ಜನುಮ ದಿನವನ್ನು ಹಾಂದಿ ಘಟಕದಲ್ಲಿ ಆಚರಿಸಲಾಯಿತು
ಮೂಡಿಗೆರೆ ಕಸಬ ವಲಯ.
ಏಪ್ರಿಲ್ 14.
ಈ ದಿನ ಶಿವಗಿರಿ ಸೇವಕರು ಹಾಗೂ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸರಳವಾಗಿ ಅಂಬೇಡ್ಕರ್ ಜಯಂತಿಯನ್ನು ಹಾಂದಿ ಘಟಕದಲ್ಲಿ ಅಚರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಚರಿತ್ರೆಯನ್ನು ನಮ್ಮ ತಂಡದ ಸದಸ್ಯರುಗಳಿಗೆ ತಿಳಿಸಿದರು. ಈ ತಂಡಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಇನ್ನು ಮುಂದೆಯೂ ಇಡೀ ಸಮಾಜಕ್ಕೆ ಇಂತಹ ತಂಡಗಳ ಅವಶ್ಯಕತೆಯಿದೆಯೆಂದು ತಿಳಿಸಿದರು.
ಸಭಾ ಕಾರ್ಯಕ್ರಮ ಮುಕ್ತಾಯದ ಬಳಿಕ ಶಾಲೆಯ ಸುತ್ತ-ಮುತ್ತ ಬೆಳೆದಿರುವ ಗಿಡಗಂಟೆಗಳನ್ನು ಸ್ವಚ್ಛ ಮಾಡಿ ಸ್ಕೂಲಿನ ಟಾಯ್ಲೆಟ್ ಬಾತ್ ರೂಮನ್ನು ಸ್ವಚ್ಛಗೊಳಿಸಲಾಯಿತು.
ನಂತರ ಶಾಲೆಯ ಸ್ವಚ್ಛಗೊಳಿಸಿದ ಗಿಡಗಂಟೆಗಳನ್ನು ಶಾಲೆಯ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ಹಾಕಲಾಯಿತು.
ಈ ಒಂದು ಸಂದರ್ಭದಲ್ಲಿ ಶಿವಗಿರಿ ಸೇವಕರು ತಂಡದ ಹಾಂದಿ ಘಟಕದ ಸದಸ್ಯರಾದ ಮಂಜುನಾಥ್, ಗೌತಮ್, ರವಿ, ಪ್ರತಾಪ್ ಶೆಟ್ಟಿ, ಕಾರ್ತಿಕ್ ಶೆಟ್ಟಿ, ಸಂದೇಶ್ ಪೂಜಾರಿ, ಸುರೇಶ್, ಮೂಡಿಗೆರೆ ಘಟಕದ ಮಂಜುನಾಥ್, ಹರೀಶ್, ಮೂಡಿಗೆರೆ ಕಸಬಾ ವಲಯದ ವಿಪತ್ತು ನಿರ್ವಹಣಾ ಘಟಕದ ಸಂಯೊಜಕ ಪ್ರವೀಣ್ ಪೂಜಾರಿ,
ಸದಸ್ಯರಾದ ಅರುಣ್ ಪಿಂಟೋ ಮಂಜುನಾಥ್ ಸುರೇಶ್ ಇದ್ದರು. ತುಂಬಾ ಸರಳವಾಗಿ ಈ ಕಾರ್ಯಕ್ರಮವನ್ನು ಅಚರಿಸಲಾಯಿತು.
ವರದಿ
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.