लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಮೂಡಿಗೆರೆ ದೇಶದ ಪ್ರತಿಯೊಬ್ಬರಿಗೂ ಅಂಬೇಡ್ಕರ್ ಸ್ಫೂರ್ತಿ ಡಾ.ಮೋಹನ್ ರಾಜಣ್ಣ*

1 min read
Featured Video Play Icon

*ಮೂಡಿಗೆರೆ :
ದೇಶದ ಪ್ರತಿಯೊಬ್ಬರಿಗೂ ಅಂಬೇಡ್ಕರ್ ಸ್ಫೂರ್ತಿ :
ಡಾ.ಮೋಹನ್ ರಾಜಣ್ಣ* . ಮೂಡಿಗೆರೆ :
ಜೀವನದಲ್ಲಿ ಅನುಭವಿಸಿದ ನೋವು ಅವಮಾನ ಗಳನ್ನೇ ಸಾಧನೆಯಮೆಟ್ಟಿಲಾಗಿಸಿ ಕೊಂಡು ವಿಶ್ವ ನಾಯಕ ಡಾ.ಬಿ. ಆರ್.ಅಂಬೇಡ್ಕರ್ ದೇಶದ ಪ್ರತಿಯೊಬ್ಬರಿಗೂ ಸ್ಫೂರ್ತಿ ಯಾಗಿದ್ದಾರೆ ಎಂದು ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆ ಯ ಸಂಸ್ಥಾಪಕ ಡಾ.ಮೋಹನ್ ರಾಜಣ್ಣ ಹೇಳಿದರು. ಅವರು ಇಂದು ಜೇಸಿಐ ಗೋಣಿಬೀಡು ಹೊಯ್ಸಳ ಘಟಕ ವತಿಯಿಂದ ಬೆಟ್ಟದಮನೆ ಗ್ರಾಮದಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ರವರ 130ನೇ ಜನ್ಮದಿನದ ಪ್ರಯುಕ್ತ ಭಾವಚಿತ್ರ ಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. . ಸಾಮಾಜಿಕ. ಆರ್ಥಿಕ.ರಾಜಕೀಯ.
ಹೀಗೆ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದ ದೇಶದ ಹೆಮ್ಮೆಯ ಪುತ್ರ ಅಂಬೇಡ್ಕರ್ ದೇಶ ಕ್ಕೆ ಉತ್ತಮ ಸಂವಿಧಾನ ರಚಿಸಿ ಕೊಡುಗೆ ಯಾಗಿ ನೀಡಿದರೆ ಎಂದು ಸ್ಮರಿಸಿ ಕೊಂಡರು. ಅಂಬೇಡ್ಕರ್ ಎಂದರೆ ಶಿಕ್ಷಣ. ಸಂಘಟನೆ. ಹೋರಾಟ. ದೇಶದೊಳಗೆ ಅವಕಾಶ ವಂಚಿತ ಸಮುದಾಯದಲ್ಲಿ ಜನಿಸಿದ ಅವರು ಶೈಕ್ಷಣಿಕ. ಸಾಮಾಜಿಕ ವಾಗಿ ಮಾಡಿದ ಸಾಧನೆ ಅನನ್ಯ ಎಂದು ಬಣ್ಣಿಸಿದರು.. ಜೇಸಿಐ ಗೋಣಿಬೀಡು ಹೊಯ್ಸಳ ಅಧ್ಯಕ್ಷ ಬಿ.ಕೆ. ಚಂದ್ರಶೇಖರ ಅಧ್ಯಕ್ಷ ತೆ ವಹಿಸಿ ಮಾತನಾಡುತ್ತಾ. ಸಮಾನತೆ.ಮಾನವೀಯತೆ. ಗೌರವಿಸುವ ಅವರ ಚಿಂತೆನೆ ಎಲ್ಲರಿಗೂ ಆದರ್ಶ ವಾದುದು.
ಶಾಲೆಯಲ್ಲಿ ಗೋಣಿಚೀಲದ ಮೇಲೆ ಕುಳಿತು ಶಿಕ್ಷಣ ಪಡೆದ ಅವರ ಪ್ರತಿಭೆ ಮೂಲಕವೇ ಸಂವಿದಾನ ಶಿಲ್ಪಿಯಾದರು.
ಅದರ ಮೂಲಕವೇ ಶೇಷ್ಠ ಪ್ರಜಾಪ್ರಭುತ್ವ ವ್ಯವಸ್ಥೆ ದೇಶಕ್ಕೆ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಶ್ರೀಯುತ ರಾಜೇಗೌಡ ರವರು ಪುಷ್ಪ ನಮನ ಸಲ್ಲಿಸಿ ಸಮಾಜದಲ್ಲಿನ ಪ್ರಸ್ತುತ ಯುವ ಪೀಳಿಗೆ ಅವರ ತತ್ವ ಆದರ್ಶ ಮೈಗೂಡಿಸಿಕೊಂಡು ಸಮಾನತೆಯಿಂದ ಉತ್ತಮ ಕೆಲಸಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.
ವೇದಿಕೆ ಯಲ್ಲಿ ಚಂದ್ರಶೇಖರ್. ಬಾಲಕೃಷ್ಣ. ಪೂರ್ಣೇಶ್. ಮದು. ರಂಜಿತ್. ಕಾರ್ಯದರ್ಶಿ ಯೋಗೇಶ್ ಕುಮಾರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.*

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

 

About Author