ಮೂಡಿಗೆರೆ ಪಟ್ಟಣಕ್ಕೆ ಹೊಂದಿಕೊಂಡಿರುವ ಗದ್ದೆ ಬಯಲಿನಿಂದ ಹೊರಟ ಕಾಡಾನೆ ಆಗಮನ*#avintvcom
1 min read
ಹೊಸ ವರ್ಷದ ಸಂಭ್ರಮದಲ್ಲಿ ಮಳೆ,ಕಾಡಾನೆ ಆಗಮನ
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲ್ಲೂಕಿನ ಮೂಡಿಗೆರೆ ಪಟ್ಟಣಕ್ಕೆ ಹೊಂದಿಕೊಂಡಿರುವ ಗದ್ದೆ ಬಯಲಿನಿಂದ ಹೊರಟ ಕಾಡಾನೆಯು,
ಮೂಡಿಗೆರೆ ಜೆಸಿ ಸದಸ್ಯರಾದ ವಿದ್ಯಾ ರಾಜು ಅವರ ಮನೆಯ ಮುಂಭಾಗದಿಂದ ಸಾಗಿ ಆನೆಯು ಕುನ್ನಹಳ್ಳಿ ಗ್ರಾಮಕ್ಕೆ ಆಗಮಿಸಿದ್ದು ಮೂಡಿಗೆರೆ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಭಾರತಿರವಿಂದ್ರ ಮನೆಯಮುಂಭಾಗದ ತೋಟದಲ್ಲಿ ಸಾಗಿದೆ. ಕುನ್ನಹಳ್ಳಿ ಗ್ರಾಮಸ್ಥರು ಹಾಗೂ ಜೇಸಿ ಅಧ್ಯಕ್ಷರಾದ ಚಂದ್ರಶೇಖರ್ ಅವರ ತೋಟಕ್ಕೆ ಬಂದು ಅಲ್ಲಿಂದ ಕುನ್ನಹಳ್ಳಿ ಗ್ರಾಮದ ಅಲಗಾಮಿ ಎಸ್ಟೇಟ್ ತೋಟದಲ್ಲಿ ಬಂದು ನಿಂತಿರುತ್ತದೆ.
ಆನೆಯನ್ನು ಓಡಿಸಲು ಗ್ರಾಮಸ್ಥರು ಸೇರಿಕೊಂಡಿರುತ್ತಾರೆ.
ಹಾಗೂ ಇನ್ನೆರಡು ಆನೆಗಳು ಹಳಸೆ ಶಿವಣ್ಣವರ ತೋಟದಲ್ಲಿ ನಿಂತಿರುತ್ತವೆ.
ಈ ಹಿಂದೆಯೂ ಸಹ ಕುನ್ನಹಳ್ಳಿ ಗ್ರಾಮ ಹಾಗೂ ಹಳಸೆ, ದುಂಡಗದಲ್ಲಿ 13.ಆನೆಗಳು ಬಂದು ತುಂಬಾ ಅನಾಹುತಗಳನ್ನು ಮಾಡಿ ಬಾಳೆ, ಅಡಿಕೆ, ಗದ್ದೆ ,ಕಾಫಿ ಮುಂತಾದ ಬೆಳೆಗಳನ್ನು ಹಾಳು ಮಾಡಿ ಹೋಗಿದ್ದು ಈಗ ಮತ್ತೆ ಪುನಃ ಆನೆ ಬಂದಿದ್ದು ಕೂಡಲೇ ಅರಣ್ಯ ಇಲಾಖೆಯವರು ಬಂದು ಆನೆಯನ್ನು ಬೇರೆ ಕಡೆ ಸ್ತಳಾಂತರಿಸಬೇಕೆಂದು ಮೂಡಿಗೆರೆ ಜೆಸಿ ಅಧ್ಯಕ್ಷರಾದ ಕುನ್ನಹಳ್ಳಿ ಚಂದ್ರಶೇಖರ್ ವಿನಂತಿಸಿಕೊಂಡಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.