ಜೆಸಿ ವತಿಯಿಂದ ಗುರುವಾರ *ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ*ಹದಿಹರೆಯದ ಸಮಸ್ಯೆ* ಬಗ್ಗೆ ಮಾಹಿತಿ ನೀಡಿದ್ದರು#avintvcom
1 min read
08-03-2021ರಂದು ಸೋಮವಾರ ಮೂಡಿಗೆರೆ ಜೆಸಿಐ ಹಾಗೂ ಜೇಸಿರೇಟ್ ವಿಭಾಗ ದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೂಡಿಗೆರೆ ಇಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರೋಪ ಸಮಾರಂಭದಲ್ಲಿ ಮೂಡಿಗೆರೆ ಎಂ ಜಿ ಎಂ ಹಾಸ್ಪಿಟಲ್ ವೈದ್ಯರಾದ ಡಾಕ್ಟರ್ ಶಾಂಭವಿ ಮೇಡಂ ವಿದ್ಯಾರ್ಥಿಗಳಿಗೆ ಹದಿಹರೆಯದಲ್ಲಿ ಬರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಪೋಸ್ಕೋ ಕಾಯ್ದೆಯ ಕಾನೂನಿನ ಬಗ್ಗೆ ಮಾತನಾಡಿ ಹತ್ತರಿಂದ 16 ವರ್ಷದೊಳಗಿನ ಬಾಲಕಿಯರು ದೌರ್ಜನ್ಯಕ್ಕೆ ಒಳಗಾದರೆ 10 ವರ್ಷ ಜೈಲು ಶಿಕ್ಷೆಯ ಕಾಯ್ದೆ ಬಗ್ಗೆ ತಿಳಿಸಿದರು ಮತ್ತು ನಿಮ್ಮ ಆರೋಗ್ಯದ ದೃಷ್ಟಿಯನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು ನೀವುಗಳು ಈ ವಯಸ್ಸಿನಲ್ಲಿ ನಿಮ್ಮ ಆರೋಗ್ಯ ದೃಷ್ಟಿಯನ್ನು ಸರಿಪಡಿಸಿಕೊಳ್ಳಬೇಕು ಆದರೆ ನೀವು ಒಳ್ಳೆಯ ಆಹಾರವನ್ನು ತೆಗೆದುಕೊಳ್ಳಬೇಕು ಮುಂದೆ ಹೆಣ್ಣುಮಕ್ಕಳಿಗೆ ಬರುವ ಸಮಸ್ಯೆಯನ್ನು ಪರಿಹರಿಸಬಹುದು.
ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರದ ಉಪನ್ಯಾಸಕರಾದ ಸಾವಿತ್ರಿ ಮೇಡಂ ಅವರು ಮಾತನಾಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮೂಡಿಗೆರೆ ಜೆಸಿಐ ಯವರು ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಯ ವೈದ್ಯರಿಂದ ಹೆಣ್ಣುಮಕ್ಕಳಿಗೆ ಹದಿಹರೆಯದ ಸಮಸ್ಯೆ ಬಗ್ಗೆ ಮಾಹಿತಿ ನೀಡುತ್ತಿರುವುದು ಸಂತೋಷಕರ ವಿಷಯ ಎಂದು ತಿಳಿಸಿದರು
ಮೂಡಿಗೆರೆ ಜೆಸಿ ಅಧ್ಯಕ್ಷರಾದ ಜೆಸಿ ಚಂದ್ರಶೇಖರ್ ಕುನ್ನಹಳ್ಳಿ ಅವರು ಮಾತನಾಡಿ ಪ್ರತಿಯೊಂದು ಪುರುಷನ ಹಿಂದೆ ಮಹಿಳೆಯರು ಇರುತ್ತಾರೆ .ಎತ್ತು ಹೊತ್ತು, ಸಾಕಿ ,ಸಲಹುವಳು ಮಹಿಳೆ,ಅಕ್ಕ-ತಂಗಿ ,ಪುತ್ರಿ ಪತ್ನಿಯಾಗಿ ಜೀವನ ತುಂಬುವಳು, ಜಗತ್ತಿನಲ್ಲಿ ಅಪೂರ್ವ ಸ್ಥಾನವಿದೆ. ಹೆಣ್ಣು ಜಗತ್ತಿನ ಸೃಷ್ಟಿಕರ್ತೆ ಹೆಣ್ಣನ್ನು ನದಿ ಮೂಲಗಳಿಗೆ ,ಪ್ರಕೃತಿಗೆ ಹೋಲಿಸಿದ್ದಾರೆ ,ಇಂತಹ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆಗೆ ಆಗಮಿಸಿರುವ ತಮ್ಮೆಲ್ಲರಿಗೂ ಶುಭ ಕೋರಿದರು. ಮೂಡಿಗೆರೆ ಜೆಸಿಐನ ಜೆಸಿರೇಟ್ ಅಧ್ಯಕ್ಷರಾದ ಚಂದ್ರಶೇಖರ್ ಅವರು ಮಾತನಾಡಿ ಹೆಣ್ಣಿಗೆ ಒಂದು ಗೌರವ ಸ್ಥಾನವನ್ನು ಕೊಡುತ್ತಿದ್ದಾರೆ ಎಲ್ಲಾ ರಂಗದಲ್ಲೂ ಮಹಿಳೆ ಮುಂದೆ ಬರುತ್ತಿದ್ದಾಳೆ ಆದರೆ ಮಹಿಳೆಯನ್ನು ದೈಹಿಕವಾಗಿ ಮಾನಸಿಕವಾಗಿ ಲೈಂಗಿಕವಾಗಿ ಹೆಣ್ಣನ್ನು ಹಿಂಸಿಸುವುದು ತಡೆಗಟ್ಟಬೇಕು. ಇದನ್ನು ಮಹಿಳಾ ದೌರ್ಜನ್ಯ ಕಾಯ್ದೆಗಳಿಂದ ನಾವು ಬಂಧನ ಮುಕ್ತಗೊಳಿಸಲು ಸಾಧ್ಯವಿಲ್ಲ,ನಾವು ನಡೆದುಕೊಳ್ಳುವ ರೀತಿ ನಮ್ಮ ನಡವಳಿಕೆಗಳು ಒಳ್ಳೆಯ ಗುಣಗಳಿಂದ ತುಂಬಿರಬೇಕು ಆಗ ನಮ್ಮ ಸಮಾಜದಲ್ಲಿ ನಮಗೆ ಒಳ್ಳೆಯ ಗೌರವ ಹೆಚ್ಚಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿರೇಟ್ ಅಧ್ಯಕ್ಷರಾದಂತಹ ಸುಧಾ ಚಂದ್ರಶೇಖರ್ ಅವರು ವಹಿಸಿದ್ದರು,ಮೂಡಿಗೆರೆ ಜೇಸಿ ಅಧ್ಯಕ್ಷರಾದಂತಹ ಜೆಸಿ ಚಂದ್ರಶೇಖರ್ ಸ್ವಾಗತಿಸಿದರು.
ಜೆಸಿರೇಟ್ ಕಾರ್ಯದರ್ಶಿ ಕೃತಿ ಪ್ರದೀಪ್ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾಕ್ಟರ್ ಶಂಭವಿಯವರಿಗೆ ಸನ್ಮಾನಿಸಲಾಯಿತ್ತು ಹಾಗೂ ರಾಜ್ಯಶಾಸ್ತ್ರದ ಉಪನ್ಯಾಸಕರಿಗೆ
ಸಾವಿತ್ರಮ್ಮ ರವರಿಗೆ ಸನ್ಮಾನಿಸಲಾಯಿತ್ತು .ಜೇಸಿ ಪೂರ್ವಾಧ್ಯಕ್ಷರಾದ ಚೈತ್ರ ತೇಜಸ್ವಿ ,ಪವನ ವಿಜಯಕುಮಾರ್ ,ವಿಂದ್ಯಾ ರತೀಶ್, ಸುಮಿತ್ರ ಅಶೋಕ್, ಸ್ಪೂರ್ತಿ ನಯನ್, ಜೇಸಿರೇಟ್ ನಿಕಟಪೂರ್ವ ಕಾರ್ಯದರ್ಶಿ ದೀಪಿಕಾ ಪ್ರಸಾದ್, ಜೆಸಿ ಸದಸ್ಯರಾದ ರೇಖಾ , ಜೆಸಿ ಕಾರ್ಯದರ್ಶಿ ಶ್ರೇಷ್ಠಿ ರವರು ಇದ್ದರು.
http://nisargacare.com/career/http://nisargacare.com/navachaithanya-old-age-home/