ಬೀದರ ನಗರಸಭೆ ಚುನಾವಣೆಯ ಪ್ರಯುಕ್ತ ಭಾರತೀಯ ಜನತಾ ಪಕ್ಷದ ಕಾರ್ಯಾಲಯ *ಶ್ರೀ ಪ್ರಭು ಬಿ.ಚವ್ಹಾಣ* ಅವರು ಉದ್ಘಾಟಿಸಿದರು.#avintvcom
1 min readಬೀದರ ನಗರಸಭೆ ಚುನಾವಣೆಯ ಪ್ರಯುಕ್ತ ನಗರದ ಹಲ್ವಾಯಿ ಕಾಂಪ್ಲೆಕ್ಸ್ ,
ಎಕ್ಸಿಸ್ ಬ್ಯಾಂಕ್ ಎದುರುಗಡೆ ಮನ್ನಳ್ಳಿ ರಸ್ತೆ ಬೀದರ ಇಲ್ಲಿ ಭಾರತೀಯ ಜನತಾ ಪಕ್ಷದ ಚುನಾವಣಾ ಕಾರ್ಯಾಲಯವನ್ನು ಸಚಿವರಾದ ಶ್ರೀ ಪ್ರಭು ಬಿ.ಚವ್ಹಾಣ ಅವರು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದು ಒಳ್ಳೆಯ ಕೆಲಸ ಮಾಡುತಿದ್ದು ಸರ್ಕಾರದ ಎಲ್ಲ ಜನಪರ ಕೆಲಸಗಳನ್ನು ಮನೆ ಮನೆ ತಲುಪಿಸಬೇಕು ಮತ್ತು ಈ ಸಲ ನಮ್ಮ ಪಕ್ಷವು ನಗರಸಭೆಯಲ್ಲಿ ಅಧಿಕಾರಕ್ಕೆ ಬರಬೇಕು ಈ ನಿಟ್ಟಿನಲ್ಲಿ ನಾನು ಸಮಯವನ್ನು ನೀಡುತ್ತೆನೆ ಮತ್ತು ನಿಮ್ಮ ಜೊತೆಗೆ ಪ್ರಚಾರಕ್ಕು ಬರುತ್ತೆನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ್,ಬೀದರ್ ನಗರ ಮಂಡಲ ಅಧ್ಯಕ್ಷರಾದ ಹಣಮಂತ ಬುಳ್ಳಾ, ಸಂಸದರಾದ ಭಗವಂತ ಖೂಬಾ,ಸೂರ್ಯಕಾಂತ ನಾಗಮಾರಪಳ್ಳಿ, ಬುಡಾ ಅಧ್ಯಕ್ಷರಾದ ಬಾಬು ವಾಲಿ, kssidc ಅಧ್ಯಕ್ಷರಾದ ಡಾ.ಶೈಲೇಂದ್ರ ಬೆಲ್ದಾಳೆ,ನಗರ ಪ್ರಧಾನ ಕಾರ್ಯದರ್ಶಿಗಳಾದ ಸುನೀಲ ಗೌಳಿ,ಅನೀಲ ರಾಜಗೀರಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ ಹೋಕ್ರಾಣೆ,ಅರಹಂತ ಸಾವಳೆ, ಪ್ರಮುಖರಾದ ರೇವಣಸಿದ್ದಪ್ಪಾ ಜಲಾದೆ,ಪ್ರಕಾಶ ಟೊಣ್ಣೆ, ರಾಜಕುಮಾರ ಚಿದ್ರಿ,ಕುಶಾಲ ಪಾಟೀಲ ಗಾದಗಿ,ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರಿದ್ದರು.