AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೆ.ಎಸ್. ಆರ್. ಟಿ.ಸಿ ಬಸ್ ನಲ್ಲಿ ಬಂದು ಮೂಡಿಗೆರೆ ನಿಲ್ದಾಣದಲ್ಲಿ ಇಳಿದು ಹೋದರು. ಒಂದು ಘಂಟೆ ನಂತರ ಬ್ಯಾಗಿನ ನೆನಪಾಗಿ ಕರೆಮಾಡಿದ್ದಾರೆ.#avintvcom

1 min read

ಮಾನವಿಯತೆ ಮೆರೆದ ವಕೀಲ ಪರಿಕ್ಷಿತ್.ಜಾವಳಿ

ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಮೂಡಿಗೆರೆ ತತ್ಕೋಳ ಗ್ರಾಮದ ಲಕ್ಷ್ಮಣಗೌಡ ಎಂಬುವವರ ಪುತ್ರಿ ವಿದ್ಯಾ ಎಂಬುವವರು ನಿನ್ನೆ ಬೆಂಗಳೂರಿನಿಂದ ಹೊರನಾಡಿಗೆ ಬರುತ್ತಿದ್ದ ದೊಡ್ಡಬಳ್ಳಾಪುರ ಡಿಪೋಕ್ಕೆ ಸೇರಿದ ಕೆ.ಎಸ್. ಆರ್. ಟಿ.ಸಿ ಬಸ್ ನಲ್ಲಿ ಬಂದು ಮೂಡಿಗೆರೆ ನಿಲ್ದಾಣದಲ್ಲಿ ಇಳಿದು ಹೋದರು. ಸುಮಾರು ಒಂದು ಘಂಟೆ ನಂತರ ಬ್ಯಾಗಿನ ನೆನಪಾಗಿ ಪರೀಕ್ಷಿತ್ ಜಾವಳಿ ಅವರಿಗೆ ಕರೆ ಮಾಡಿ ತಿಳಿಸಲಾಗಿ ,ಬಸ್ಸು ಜಾವಳಿ ಪಾಸಾಗಿ ಕೆಳಗೂರು ಕಡೆ ಹೋಗಿತ್ತು.
ನಂತರ ಅವರ ಸ್ನೇಹಿತ ಶಿವಕುಮಾರ್ ಅವರಿಗೆ ಕರೆ ಮಾಡಿ ಬಸ್ಸನ್ನು ತಡೆದು ಬ್ಯಾಗ್ ನ್ನು ತೆಗೆದುಕೊಳ್ಳಲಾಯಿತು,
ಅದರಲ್ಲಿ ಲ್ಯಾಪ್ಟಾಪ್, ಅವರ ಕಂಪೆನಿಯ ದಾಖಲೆ ಪತ್ರ, ಎಸ್. ಎಸ್. ಎಲ್.ಸಿ ಮಾರ್ಕ್ಸ್ ಕಾರ್ಡ್, ಸೇರಿದಂತೆ ಅನೇಕ ಪ್ರಮುಖ ಮೂಲ ದಾಖಲೆಗಳು ಅದರಲ್ಲಿ ಇದ್ದವು.
ಇಂದು ಅವರಿಗೆ ಮೂಡಿಗೆರೆಯಲ್ಲಿ ಅವರ ಬ್ಯಾಗನ್ನು ಸುರಕ್ಷಿತವಾಗಿ ಹಸ್ತಂತಾರಿಸಲಾಯಿತು,ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅನುಕುಮರ್,
ಪರೀಕ್ಷಿತ್ ಜಾವಳಿ, ಸಂಜಯ್ ಕೊಟ್ಟಿಗೆಹಾರ, ಶ್ರೇಯಸ್,
ರವಿ ಕೊಟ್ಟಿಗೆಹಾರ,
ಅಭಿ ಕೊಟ್ಟಿಗೆಹಾರ,
ಕಿರಣ್ ಬಿನ್ನಡಿ,
ಪ್ರದೀಪ್ ಬಿನ್ನಡಿ ಇದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

 

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author