ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದ ಹಾಗೂ ಪರಿವಾರ ದೈವಗಳ ಅದ್ದೂರಿ ನೇಮೋತ್ಸವ#avintvcom
1 min read
ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದ ಹಾಗೂ ಪರಿವಾರ ದೈವಗಳ ಅದ್ದೂರಿ ನೇಮೋತ್ಸವ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಶ್ರೀ ಕ್ಷೇತ್ರ ಸಬ್ಬೇನಹಳ್ಳಿಯ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸಾನಿಧ್ಯದಲ್ಲಿ ಅದ್ದೂರಿ ಎರಡನೇ ವರ್ಷದ ನೇಮೋತ್ಸವ ನಡೆಯಿತು.
ಕಳೆದ ವರ್ಷವೇ ನಿಗಧಿಯಾಗಿದ್ದ ನೇಮೋತ್ಸವ ಮಹಾಮಾರಿ ಕೊರೋನ ಸಾಂಕ್ರಾಮಿಕ ರೋಗದಿಂದ ನಿಂತಿತ್ತು.
ಪ್ರಸ್ತುತ ರೋಗದ ಹರಡುವಿಕೆ ಇಳಿಮುಖವಾದ ಹಿನ್ನೆಲೆಯಲ್ಲಿ ನೇಮೋತ್ಸವವನ್ನು ನಡೆಸಲಾಯಿತು.
ದಿನಾಂಕ:27:03:2021ನೇ ಶನಿವಾರ ದಿಂದ 29:03:2021ನೇ ಸೋಮವಾರದ ವರೆಗೆ ವಿವಿಧ ಪೂಜಾ ವಿಧಿವಿಧಾನಗಳು ನಡೆದವು.
ಮೊದಲ ದಿನವಾದ ಶನಿವಾರದಂದು ಸ್ಥಳ ಶುದ್ಧಿ,ಕಲಾಹೋಮ ಹಾಗೂ ಪರಿವಾರ ದೈವಗಳಿಗೆ ಪಂಚಾಮೃತ ಅಭಿಷೇಕ, ಪ್ರಸಾದ ವಿತರಣೆ ನಡೆಯಿತು.ನಂತರ ಶ್ರೀ ದೈವಗಳ ಭಂಡಾರ ಇಳಿಸಿ ನೇಮೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ತದನಂತರದಲ್ಲಿ ಮೊಗೇರ ಕುಲ ದೈವಗಳಾದ ಮುದ್ದ ಮತ್ತು ಕಳಲ ಹಾಗೂ ಪರಿವಾರ ದೈವಗಳಾದ ಚಾಮುಂಡೇಶ್ವರಿ, ರಾಹು, ಗುಳಿಗ ದೈವದ ನೇಮೋತ್ಸವವು ನೆರದ ಭಕ್ತಾಧಿಗಳ ಭಕ್ತಿಯ ಪರಾಕಷ್ಠೆತೆಯನ್ನು ಹೆಚ್ಚಿಸಿತು.
ಭಾನುವಾರದ ಬೆಳಗ್ಗೆ ಕೊರಗಜ್ಜ ದೈವದ ನೇಮೋತ್ಸವ ನಡೆಯಿತು.
ಸೋಮವಾರದಂದು ದೈವಗಳಿಗೆ ಮಂಜಸೇವೆ ಮತ್ತು ಅಗೆಲು ಸೇವೆ ನಡೆಯಿತು.
ನೇಮೋತ್ಸವಕ್ಕೆ ಸಾವಿರಾರು ಭಕ್ತಾಧಿಗಳು ತಾವು ತಂದಂತಹ ಹೂ ಮತ್ತು ಹರಕೆಯನ್ನು ದೈವಗಳಿಗೆ ಭಕ್ತಿಯಿಂದ ಒಪ್ಪಿಸಿ ದೈವದೇವರ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿದರು.
ಅದ್ದೂರಿಯಾಗಿ ನಡೆದ ನೇಮೋತ್ಸವದಲ್ಲಿ ಶ್ರೀ ದೈವದ ಸೇವಕರಾದ ಬೋರ. ಪೊಡಿಯಾ. ಬೊಗ್ಗು. ಶ್ರೀಧರ. ಹರೀಶ. ಪ್ರಸನ್ನ. ಕೊರಗಪ್ಪ. ರಾಜು. ಗೋಪಾಲ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದರು.
ಮೂರು ದಿನಗಳ ವಿವಿಧ ಪೂಜಾವಿಧಿವಿಧಾನ ಹಾಗೂ ನೇಮೋತ್ಸವಕ್ಕೆ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ವಿವಿಧ ರೀತಿಯ ನೆರವನ್ನು ನೀಡಿದ್ದರು. ಲೋಹಿತ್ ಗೌಡ ಮತ್ತು ಸರಿತಾ ಲೋಹಿತ್ ಗೌಡ ಫಲ್ಗುಣಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಅನ್ನದಾನದ ನೆರವನ್ನು ನೀಡಿದ್ದು. ಫಲ್ಗುಣಿ ಗ್ರಾಮ ಪಂಚಾಯಿತಿಯ ಮತ್ತೋರ್ವ ಸದಸ್ಯರಾದ ಹೆಚ್.ಸಿ.ಸತೀಶ್ ಶಾಮಿಯಾನದ ವ್ಯವಸ್ಥೆಯ ನೆರವನ್ನು ನೀಡಿದರು.
ಗ್ರಾಮದ ಹಾಗೂ ಸುತ್ತಲಿನ ಗ್ರಾಮದ ದಾನಿಗಳ ಸಣ್ಣಪುಟ್ಟ ನೆರವಿನೊಂದಿಗೆ ನೇಮೋತ್ಸವ ಬಹಳಷ್ಟು ವಿಜೃಂಬಣೆಯಿಂದ ನಡೆಯಿತು.
ಈ ಅದ್ದೂರಿ ನೇಮೋತ್ಸವದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರು. ತಾಲ್ಲೂಕು ಹಸಲರು ಸಂಘದ ಪದಾಧಿಕಾರಿಗಳು. ಗ್ರಾಮಸ್ಥರಾದ ರಮೇಶ. ಗುರು. ಪ್ರಶಾಂತ್. ಶಾಂತ. ವಿನೋಧ. ಸೀತಜ್ಜಿ. ಗುರುವಮ್ಮ. ಪೂವಮ್ಮ ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.