ಜೊಲ್ಲೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ನಡೆಯಿತು.#avintvcom
1 min read
ನಿಪ್ಪಾಣಿ ತಾಲೂಕಿನ ಸಿದ್ನಾಳ ಗ್ರಾಮದಲ್ಲಿ ಬಸವಜ್ಯೋತಿ ಯೂಥ ಫೌಂಡೇಶನ ವತಿಯಿಂದ ಆಯೋಜಿಸಲಾದ ಜೊಲ್ಲೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ *ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ* ಯವರು ಪ್ರಥಮ ಸ್ಥಾನವನ್ನು ಪಡೆದ ಶಿವನೇರಿ ವಾರಿಯರ್ಸ್ ತಂಡಕ್ಕೆ, 25,000 ನಗದು ಬಹುಮಾನ ಹಾಗೂ ಟ್ರೋಫಿ ಎರಡನೇ ಬಹುಮಾನ ಜೈ ಹಿಂದ ಸ್ಪೋರ್ಟ್ಸ್ ತಂಡಕ್ಕೆ, 15,000 ಹಾಗೂ ಟ್ರೋಫಿ ತೃತೀಯ್ ಬಹುಮಾನವನ್ನು ಉದಯ ಪಾಟೀಲ ಚಾಲೆಂಜರ್ಸ್ ತಂಡಕ್ಕೆ, 7,000 ಹಾಗೂ ಟ್ರೋಫಿ ಬಹುಮಾನ ನೀಡಿದರು. ನಂತರ ನಮ್ಮ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾದ ಶ್ರೀ ನವಲಖ ದಾಬಾಡೆ ಅವರ ಮನೆಗೆ ಭೇಟಿ ನೀಡಿ ಕುಶಲೋಪಚಾರಿ ವಿಚಾರಿಸಿ ಕುಟುಂಬ ಸದಸ್ಯರೊಂದಿಗೆ ಉಪಹಾರ ಸೇವಿಸಿ. ಕುಟುಂಬದವರಿಗೆ ಧನ್ಯವಾದಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಊರಿನ ಹಿರಿಯರು, ಅನೇಕ ಗಣ್ಯರು, ಗ್ರಾಮ ಪಂಚಾಯತ್ ಸದಸ್ಯರು, ಆಟಗಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.