ಅತ್ತಿಗೆರೆಯಲ್ಲಿ ರೈತರು ತೋಟದ ದೈವಕ್ಕೆ ಎಡೆ ಅರ್ಪಿಸಿ . ಚೌಡಿಹಬ್ಬದ ಸಂಭ್ರಮದ ಪೂಜೆ ಸಲ್ಲಿಸಿದರು.#avintvcom
1 min read
ಅತ್ತಿಗೆರೆಯಲ್ಲಿ ಸಂಭ್ರಮದ ಚೌಡಿ ಹಬ್ಬ ಆಚರಣೆ.
ಮೂಡಿಗೆರೆ ತಾಲೊಕಿನ ಬಣಕಲ್ ಹೊಬಳಿ ಅತ್ತಿಗೆರೆ.
ಮಲೆನಾಡಿನಲ್ಲಿ ಕಾಫಿ ಕುಯ್ಲಿನ ನಂತರ ಒಂದು ಮಳೆ ಸುರಿದ ಮೇಲೆ ತೋಟದಲ್ಲಿ ಚೌಡಿಹಬ್ಬ ಮಾಡುವ ಸಂಪ್ರದಾಯವಿದ್ದು ಅತ್ತಿಗೆರೆಯಲ್ಲಿ ರೈತರು ಚೌಡಿಹಬ್ಬದ ವಾರ್ಷಿಕ ಪೂಜೆಯನ್ನು ಆಚರಿಸಿದರು.
ರೈತರಾದ ಕೃಷ್ಣೆಗೌಡ, ಚಂದ್ರೆಗೌಡ, ಸುರೇಶ್ ಗೌಡ, ಲಕ್ಷ್ಮಣಗೌಡ ಅತ್ತಿಗೆರೆಯಲ್ಲಿ ಚೌಡಿಹಬ್ಬ ಆಚರಿಸಿದರು. ತೋಟದಲ್ಲಿರುವ ಗುಡ್ಡಿಭೂತ ದೈವಕ್ಕೆ ಎಡೆ ಸಲ್ಲಿಸಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತರಾದ ಎ.ಬಿ. ಕೃಷ್ಣೆಗೌಡ, ತಲೆಮಾರುಗಳಿಂದ ಗುಡ್ಡಿಭೂತದ ಪೂಜೆ ಮಾಡಿಕೊಂಡು ಬರಲಾಗುತ್ತಿದ್ದು ವರ್ಷದ ಕಾಫಿಕುಯ್ಲು ಮುಗಿದ ನಂತರ ಮೊದಲ ಮಳೆ ನಂತರ ತೋಟದ ದೈವಕ್ಕೆ ಎಡೆ ಅರ್ಪಿಸಿ ಹಣ್ಣು ಕಾಯಿ ಮಾಡಿ ಪೂಜೆ ಸಲ್ಲಿಸಲಾಗುವುದು ಎಂದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.