ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಘನ ವಾಹನ ಮತ್ತು ಸರ್ಕಾರಿ ಬಸ್ ಸಂಚಾರಕ್ಕೆ ಅನುಮತಿ ಕೊಡಿ .#avintvcom
1 min read
*ನೇರವಾಗಿ ವಿಷಯಕ್ಕೆ ಬರುತ್ತೇನೆ. ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಘನ ವಾಹನ ಮತ್ತು ಸರ್ಕಾರಿ ಬಸ್ ಸಂಚಾರಕ್ಕೆ 19.03.2020 ರಂದು ಮಾನ್ಯ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಅನುಮತಿ ಕೊಟ್ಟು ಮತ್ತೆ ಒಂದೇ ದಿನಕ್ಕೆ ಮಂಗಳೂರು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಂಚಾರ ನಿರ್ಬಂಧಿಸಿದ್ದು ಕಳೆದ 3 ವರ್ಷಗಳಿಂದ ಪಡಬಾರದ ಕಷ್ಟವನ್ನ ಪ್ರಯಾಣಿಕರು ಪಡುತ್ತಿದ್ದಾರೆ* *1 ವರ್ಷದ ಹಿಂದೆ ಮಿನಿ ಬಸ್ ಬಿಟ್ಟಿದ್ದು ಅದರಲ್ಲಿ ಅದರಲ್ಲಿ ಕನಿಷ್ಠ ಅಂದರು 100 ಜನಕ್ಕೂ ಹೆಚ್ಚು ಜನ ಅರ್ಧದಷ್ಟು ನಿಂತು ಆ ಘಾಟ್ ನಲ್ಲಿ ಒಬ್ಬರ ಮೇಲೆ ಒಬ್ಬರು ವಾಂತಿ ಮಾಡಿಕೊಳ್ಳುತ್ತ ವಿದಿ ಇಲ್ಲ ಕಾರಣ ಗಂಟೆಗೆ 1 ಬಸ್ ಇರೋದು. ಮೊದಲಾದರೆ 10 ನಿಮಿಷ ಕೊಂದರಂತೆ ಬಸ್ ಇತ್ತು. ಶಾಲೆಗೆ ಬಿಡಲು ಹೋಗುವ ಮಕ್ಕಳು ಪೋಷಕರು,ಆಸ್ಪತ್ರೆಗೆ ಹೋಗಲು ವೃದ್ಧರು ನಿತ್ಯ ಕೆಲಸಕ್ಕೆ ಉಜಿರೆಗೆ,ಮೂಡಿಗೆರೆಗೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹೇಳಾತೀರದು. ಬೆಳೆಗ್ಗೆ 7 ರಿಂದ ಸಂಜೆ 7 ರ ತನಕ ಮಾತ್ರ ಆ ಮಿನಿ ಬಸ್ ಮಂಗಳೂರು ಆಸ್ಪತ್ರೆಗೆ ಹೋಗಿ ಹೇಗೋ ಉಜಿರೆ ತನಕ ಬಂದು ತಲುಪುವಾಗ 6 ಕ್ಕೆ ಕೊನೆ ಮೂಡಿಗೆರೆ, ಚಿಕ್ಕಮಗಳೂರಿಗೆ ಬಸ್ ಇಲ್ಲ ಅನ್ನೋ ಮಾತು ಕೇಳಿ ಎಷ್ಟೋ ಬಡ ಕುಟುಂಬದ ಅನಾರೋಗ್ಯ ಪೀಡಿತ ರೋಗಿಗಳು ದುಡ್ಡಿಲ್ಲದೆ ಕಣ್ಣೆರು ಹಾಕಿರುವ ಯಾರತ್ತಿರ ಕೇಳಲು ಉಜಿರೆಯಲ್ಲಿ ಸಂಬದಿಗಳು ಇಲ್ಲ ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳನ್ನ ಮನೆಯಲ್ಲಿ ಬಿಟ್ಟು ಸಂಜೆ ಒಳಗೆ ಬರಬಹುದು ಅಂತ ಹೋದವರು ಅದೇ ನಿಮ್ಮ ಉಜಿರೆಯ ಅಂಗಡಿ, ಹೋಟೆಲ್ ಮುಂಬಾಗದಲ್ಲಿ ರೂಮ್ ಮಾಡಲು ದುಡ್ಡಿಲ್ಲದೆ ಮಲಗಿ ಬೆಳೆಗ್ಗೆ ಬಸ್ ಗೆ ಬಂದಿರುವ ಎಷ್ಟೋ ಉದಾಹರಣೆಗಳು ಇವೆ. ನಮಗೆ ಆ ಅನುಭವ ಬಂದಿಲ್ಲ ನಾವು ಈ 1 ವರ್ಷದಿಂದ ಆ ಮಿನಿ ಬಸ್ ಘಾಟ್ ತಿರುವಲ್ಲಿ ಹತ್ತೋಕೆ ಆಗದೆ ಜನ ಜಾಸ್ತಿ ಆಗಿ ಒದ್ದಾಡುತ್ತಿದ್ದನ್ನು ನೋಡಿರೋದು ಮಾತ್ರ ಕಾರಣ. ನಾವು ಕಾರಲ್ಲಿ ನಿತ್ಯ ತಿರುಗುತ್ತಿರೋದು ನಮಗೆ ಆ ಕಷ್ಟ ಗೊತ್ತಾಗುತ್ತಿಲ್ಲ. ದಯಮಾಡಿ ನಿಮ್ಮಲ್ಲಿ ಕಳಕಳಿಯ ಮನವಿ 2 ವರ್ಷದಿಂದ ಯಾವ ಇಲಾಖೆ ಯಾವ ಪ್ರಾಧಿಕಾರ ಅನ್ನೋದೇ ಅವರ ಅವೈಜ್ಞಾನಿಕ ವರದಿ ಇವತ್ತಿಗೂ ಸಾರಿಗೆ ಬಸ್ ಸಂಚಾರಕ್ಕೆ ಮತ್ತು ನಿತ್ಯ ವಸ್ತುಗಳನ್ನು ಸರಬರಾಜು ಮಾಡುವ ವಾಹನಗಳಿಗೆ ಅನುಮತಿ ಕೊಡದಿರುವುದು. ಆ ಮಿನಿ ಬಸ್ ಗೆ ಇನ್ನ 5 ಅಡಿ ಉದ್ದ ಇರೋದೇ ಆ ಕೆಂಪು ಬಸ್ ಇದು ಹೆದ್ದಾರಿ ಯಾವ ಅಥವಾ ಅಧಿಕಾರಿಗಳ ತಪ್ಪು ತಿಳುವಳಿಕೆ ಗೊತ್ತಿಲ್ಲ. ನೀವು ಕಳೆದ 3 ವರ್ಷದ ಹಿಂದೆ ಇದೇ ಘಾಟ್ ನಲ್ಲಿ ಮಣ್ಣು ಕುಸಿತ ಆಗಿ ಘಾಟ್ ಬಂದ್ ಆದಾಗ ಖುದ್ದು ನೀವು ಮತ್ತು ಚಿಕ್ಕಮಗಳೂರು ದಕ್ಷ ಪೊಲೀಸ್ ಅಧಿಕಾರಿಗಳಾದ ಅಣ್ಣಾ ಮಲೈರವರು ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಟ್ಟಿದ್ದೀರಿ* *ಕಳೆದ 6 ತಿಂಗಳಿಂದ ಮೂಡಿಗೆರೆ ಹ್ಯಾಂಡ್ಪೋಸ್ಟ್ ನಿಂದ ಕೊಟ್ಟಿಗೆಹಾರ ತನಕ ಇದೆ ತರ ಒಂದು ಬಾಗ ಮೋರಿ ಮಾಡುವಾಗ ಅರ್ಧ ಭಾಗ ಒಡೆದು ಅರ್ಧ ತಿರುಗಲು ಅನುಮತಿ ಮಾಡಿ ಕೊಟ್ಟಿದ್ದು ಎಲ್ಲಾ ರಸ್ತೆಗಳಲ್ಲೂ ಇದೆ ವ್ಯವಸ್ಥೆ ಇದ್ದು ಇವಾಗಲು ನಿಮ್ಮ ವ್ಯಾಪ್ತಿಗೆ ಬರುವ ಚಾರ್ಮಾಡಿ ಘಾಟ್ ನ 1,2,3 ನೆ ತಿರುವು ನಲ್ಲಿ 4 ಮೋರಿ ಕೆಲಸ ಆಗುತ್ತಿದ್ದು ಇನ್ನು 2 ಮೋರಿ ಬಾಕಿ ಇರುತ್ತವೆ. ಎಲ್ಲಾ ರೀತಿಯ ವಾಹನಗಳು ತಿರುಗುತ್ತಿದ್ದು ಕೆಂಪು ಬಸ್ಗೆ ಯಾಕೆ ಈ ನಿರ್ಬಂಧ ಆ ಭಾಗದ ಹೆದ್ದಾರಿ ಯವರ ಅಥವಾ ಅಧಿಕಾರಿಗಳಿಗೆ ತಪ್ಪು ಮಾಹಿತಿನೊ ಗೊತ್ತಿಲ್ಲ. ದಯಮಾಡಿ ತಕ್ಷಣ ಮೊನ್ನೆ ಪ್ರಾರಂಭ ಅದ ಬಸ್ ಸಂಚಾರವನ್ನ ಪ್ರಾರಂಭಿಸಬೇಕು ಮತ್ತು ಇನ್ನು ಮಳೆಗಾಲ ಪ್ರಾರಂಭ ಅಗಲು 2 ತಿಂಗಳು ಬಾಕಿ ಇದ್ದು ಬಡವರ ಮಧ್ಯಮವರ್ಗದ ಜನರ ನಿತ್ಯ ಮಾತು ಶಾಪ ಜನಪ್ರತಿನಿದಿಗಳಿಗೆ ಹೊರೆತು ಯಾವುದೇ ಅಧಿಕಾರಿಗಳಿಗೆ ಅಥವಾ ಅವೈಜ್ಞಾನಿಕ ವರದಿ ನೀಡುವ ಹೆದ್ದಾರಿ ಪ್ರಾಧಿಕಾರದವರಿಗಲ್ಲ. ಹಾಗಾಗಿ ನಾವುಗಳು ನಿತ್ಯ ಪಡುವ ಕಷ್ಟವನ್ನ ನೋಡಲು ಆಗುತ್ತಿಲ್ಲ ಮತ್ತು ಬಡವರಿಗೆ ಹೊರೆಯಾಗಿದ್ದು ದಯಮಾಡಿ ತಕ್ಷಣ ಬಸ್ ಸಂಚಾರಕ್ಕೆ ಮತ್ತು ಘನ ವಾಹನಕ್ಕೆ ಅನುಮತಿ ಕೊಡಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ* ಆದರ್ಶ. ತರುವೆ. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.