ಪೀಸ್ &ಅವೆರ್ನೆಸ್ ಟ್ರಸ್ಟ್ (ರಿ ) ಬಿಳಗುಳ ಇವರವತಿಯಿಂದ ಇಂದು ಹೆಸಗಲ್ ಗ್ರಾಮದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯು ಯಶಸ್ವಿಯಾಗಿ ನೆರವೇರಿತು. #avintvcom
1 min read
ಪೀಸ್ &ಅವೆರ್ನೆಸ್ ಟ್ರಸ್ಟ್ (ರಿ ) ಬಿಳಗುಳ ಇವರವತಿಯಿಂದ ಇಂದು ಹೆಸಗಲ್ ಗ್ರಾಮದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯು ಯಶಸ್ವಿಯಾಗಿ ನೆರವೇರಿತು. ಈ ಕಾರ್ಯಕ್ರಮಕ್ಕೆ 01ರಿಂದ 07ನೇ ತರಗತಿಯ 40 ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮವಾದ ಪ್ರದರ್ಶವನ್ನು ತೋರಿರುತ್ತಾರೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಥಮ,ದ್ವಿತೀಯ, ತೃತೀಯ ಮತ್ತು ಸಮಾಧಾನಕರ ಬಹುಮಾನಗಳನ್ನು ಗಣ್ಯರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಹೆಸಗಲ್ ಗ್ರಾಮದ ಮುಖಂಡರಾದ ಹೆಸಗಲ್ ಗಿರೀಶ್, ಪೀಸ್ &ಅವೆರ್ನೆಸ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಅಲ್ತಾಫ್ ಬಿಳಗುಳ, ಮೂಡಿಗೆರೆ ತಾಲ್ಲೂಕು ಕ.ಸಾ.ಪ ದ ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್, ಮೂಡಿಗೆರೆ ಜಾನಪದ ಪರಿಷತ್ ನ ಅಧ್ಯಕ್ಷರಾದ ಬಕ್ಕಿ ಮಂಜು, ಬಣಕಲ್ ಹೋಬಳಿ ಘಟಕದ ಕ.ಸ.ಪ.ದ ಅಧ್ಯಕ್ಷರಾದ ವಸಂತ್ ಹಾರುಗೋಡು, ಹೆಸಗಲ್ ಗ್ರಾಮದ ಅಂಗನವಾಡಿ ಕಾರ್ಯಕರ್ತರಾದ ಶ್ರೀಮತಿ ಉದ್ದಮ್ಮ, ಮಿತ್ರ ಜಾನಪದ ಕಲಾ ತಂಡದ ಕಲಾವಿದರಾದ ಬಕ್ಕಿ ರವೀಂದ್ರ ಹೆಸಗಲ್ ಗ್ರಾಮದ ಮಂಜು, ಪೀಸ್ &ಅವೆರ್ನೆಸ್ ಟ್ರಸ್ಟ್ ನ ಸದಸ್ಯರಾದ ವೆಂಕಟೇಶ ಹೆಸಗಲ್, ಸಫ್ವಾನ್ ಹೆಸಗಲ್ ಗ್ರಾಮಸ್ಥರಾದ ರವಿ,ಕಿರಣ್, ಪರಮೇಶ್, ರೇಖಾ ಪುಷ್ಪ, ಶ್ವೇತ ಗಿರೀಶ್,ಇತರರು ಹಾಜರಿದ್ದರು. ಕಾರ್ಯಕ್ರಮವನ್ನು ವೆಂಕಟೇಶ್ ಹೆಸಗಲ್ ನೀರೂಪಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.