ಕಳಸ: ಮಹಿಳೆಯರು ಸಮಾಜದ ಅಭಿರುದ್ದಿಯ ಶಿಲ್ಪಿಗಳು ಎಂದು ಕಳಸ ಪೊಲೀಸ್ ಡಾ.ಸಿ.ಆರ್.ಮೋಹನ್ ಕುಮಾರ್ ಹೇಳಿದರು#avintvcom
1 min read
ಕಳಸ: ಮಹಿಳೆಯರು ಸಮಾಜದ ಅಭಿರುದ್ದಿಯ ಶಿಲ್ಪಿ ಗಳು ಎಂದು ಕಳಸ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಡಾ.ಸಿ. ಆರ್. ಮೋಹನ್ ಕುಮಾರ್ ಹೇಳಿದರು. ಅವರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆಯ ಚೇತನ ಜ್ಞಾನ ವಿಕಾಸ ಕೇಂದ್ರ ಮತ್ತು ಶ್ರೀ ಮಂಜುನಾಥೇಶ್ವರ ಸಮಾಜ ಸೇವಾ ಸಮಿತಿ ಹೆರಡಿಕೆ ಕಾರಗದ್ದೆ ಸಹಯೋಗದಲ್ಲಿ ಅಂಗನವಾಡಿ ಕೇಂದ್ರದ ಆವರಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿ ಗಳಾಗಿ ಮಾತನಾದರು. ಒಬ್ಬ ಮಹಿಳೆ ತನ್ನ ಕುಟುಂಬ ದಲ್ಲಿ ತಾಯಿ. ಮಗಳು. ಸೊಸೆ ಯಾಗಿ ಅತ್ಯಂತ ಪ್ರಮುಖ ಜವಾಬ್ದಾರಿ ಸ್ಥಾನ ನಿರ್ವಹಿಸುತ್ತಿರುತ್ತಾಳೆ.ಹಾಗೆಯೇ ಸಾಮಾಜಿಕ ವ್ಯವಹಾರ ದಮೂಲಕ ಆರ್ಥಿಕ ಭದ್ರತೆ ನೀಡಿ ಸಮಾಜದ ಅಭಿರುದ್ದಿ ಯ ಶಿಲ್ಪಿ ಯಾಗಿ ಮಹತ್ತರ ಕಾರ್ಯ ನಿರ್ವಹಿಸುತ್ತಾರೆ ಎಂದರು. . ಮಹಿಳಾ ಜಾಗೃತ ವೇದಿಕೆ ಅಧ್ಯಕ್ಷೆ ಮುಮ್ತಾಜ್ ಬೇಗಂ ರವರು ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರು ಸರಿ ಸಮಾನರು ಎಲ್ಲಿ ಮಹಿಳೆ ಯನ್ನು ಪೂಜಿಸುತ್ತಾರೋ ಅಲ್ಲಿ ದೇವರು ನೆಲಸಿರುತ್ತಾರೆ ಎನ್ನುವ ಭಾವನೆ ಗ್ರಂಥ ದಲ್ಲಿ ಅಡಕ ವಾಗಿದೆ. ಪ್ರತಿ ಮಗುವಿಗೆ ಮನೆಯೇ ಮೊದಲ ಪಾಠಶಾಲೆ. ಹಾಗೆಯೇ ತಾಯಿಯೇ ಮೊದಲ ಗುರು. ಮಹಿಳೆಯು ಸಮಾಜದ ಹಾಗೂ ದೇಶದ ಅಭಿರುದ್ದಿ ಗೆ ಕಾರಣ ಅವರಿಗೆ ಸಿಗಬೇಕಾದ ಸ್ಥಾನಮನ ಗೌರವ ಕೊಡುವಂತ ದ್ದು ಎಲ್ಲರ ಕರ್ತವ್ಯ ವಾಗಿದೆ ಎಂದರು. ಮೇಲ್ವಿಚಾರಕಶ್ರೀ ನಾಗರಾಜ್ ಪ್ರಾಸ್ತಾವಿಕ ವಾಗಿ ಮಾತನಾಡುತ್ತಾ ಪ್ರತಿ ಮಹಿಳೆಯು ಸಾಮಾಜಿಕ ವ್ಯವಹಾರ ಮೂಲಕ ಆರ್ಥಿಕ ಭದ್ರತೆ ಯನ್ನು ಕಂಡುಕೊಳ್ಳುವಲ್ಲಿ ಮುಂದಾಗಬೇಕು. ಮಹಿಳೆಯರಿಗೆ ಮಾತೆಯ ಪವಿತ್ರ ಸ್ಥಾನ ವಿದೆ. ಮಹಿಳೆಯರಿಗೆ ಪುರುಷರುಬೆನ್ನೆಲುಬಾಗಿ ಕೆಲಸ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿಶ್ರೀಮತಿ ಪಾರ್ವತಮ್ಮ. ಶ್ರೀಮತಿ ಬೆಳ್ಳಮ್ಮ. ಜನಾರ್ಧನಚಾರ್. ಗಜೇಂದ್ರ. ಸೇವಾ ಪ್ರತಿನಿಧಿ ಶ್ರೀಮತಿ ಉಷಾ. ಶ್ರೀಮತಿ ಕಮಲಾಕ್ಷಿರಮೇಶ್. ಕು.ಅಶ್ವಿನಿ. ಅಂಗನವಾಡಿ ಕಾರ್ಯಕರ್ತರು. ಗ್ರಾಮಸ್ಥರು ಭಾಗವಹಿಸಿದ್ದರು ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.