AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹಳೇಮೂಡಿಗೆರೆ ಗ್ರಾಮ ಪಂಚಾಯತಿಯಲ್ಲಿ ನಿವೇಶನ ನೀಡಲು ವಸತಿಗಾಗಿ ಹೋರಾಟ ವೇದಿಕೆ ಸದಸ್ಯರ ಪ್ರತಿಭಟನೆ#avintvcom

1 min read
Featured Video Play Icon

ವಸತಿಗಾಗಿ ಹೋರಾಟ ವೇದಿಕೆ ಸದಸ್ಯರ ಪ್ರತಿಭಟನೆ……..

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ ಹಳೇಮೂಡಿಗೆರೆ ಗ್ರಾಮ ಪಂಚಾಯತಿಯಲ್ಲಿ ನಿವೇಶನ ನೀಡಲು ವಸತಿ ರಹಿತರ ಪಟ್ಟು……..
ಗ್ರಾಮ ಪಂಚಾಯತಿಯಲ್ಲಿ ಮೀಸಲಿರಿಸಿರುವ ನಿವೇಶನವನ್ನು ಶೀಘ್ರ ಅರ್ಹ ನಿವೇಶನ ರಹಿತರಿಗೆ ವಿತರಿಸಬೇಕು ಎಂದು ಒತ್ತಾಯಿಸಿ ವಸತಿಗಾಗಿ ಹೋರಾಟ ವೇದಿಕೆ ಸದಸ್ಯರು ಶುಕ್ರವಾರ ಗ್ರಾಮ ಪಂಚಾಯಿತಿ ಕಚೇರಿ ಅವರಣದಲ್ಲಿ ಪ್ರತಿಭಟನೆ ನಡೆಸಿದರು.
ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ ವಸತಿಗಾಗಿ ಹೋರಾಟ ವೇದಿಕೆಯಿಂದ ವಸತಿ ಮತ್ತು ನಿವೇಶನ ರಹಿತರ ಸಮಸ್ಯೆ ಪರಿಹಾರಕ್ಕಾಗಿ ಅನೇಕ ಬಾರಿ ಹೋರಾಟ ನಡೆಸಿದ್ದರಿಂದ ಹಳೇಮೂಡಿಗೆರೆ ಸಮೀಪ 3.30.ಎಕರೆ ಜಾಗ ಗುರುತಿಸಲಾಗಿದೆ.ಆದರೆ ಮೀಸಲಿರಿಸಿದ್ದ ಜಾಗಕ್ಕೆ ರಸ್ತೆ ನಿರ್ಮಿಸಿಲ್ಲ.ಕೂಡಲೆ ರಸ್ತೆ ನಿರ್ಮಿಸಿ ಗ್ರಾಮ ಪಂಚಾಯತಿ ಆಡಳಿತ ತನ್ನ ಸುಪರ್ದಿಗೆ ತೆಗೆದುಕೊಂಡು ಅರ್ಹ ಫಲಾನುಭವಿಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು.
ವಸತಿಗಾಗಿ ಹೋರಾಟ ವೇದಿಕೆ ಅಧ್ಯಕ್ಷ ಎಸ್.ಶೇಕರ್ ಮಾತನಾಡಿ ವಸತಿ ರಹಿತರಿಂದ ನಿವೇಶನಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ಅರ್ಹರಿಗೆ ನೀಡಲು ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಮುಂದಾಗಬೇಕೆಂದು ಆಗ್ರಹಿಸಿದರು.
ವಸತಿಗಾಗಿ ಹೋರಾಟ ವೇದಿಕೆ ಕಾರ್ಯದರ್ಶಿ ಶಿವಪ್ಪ ಮುಖಂಡರಾದ ನಾರಾಯಣ.
ಎಂ.ಎಸ್.ಕೃಷ್ಣ.
ಕೆ.ಹೆಚ್.ಕೃಷ್ಣಪ್ಪ.ಸಂತೊಷ್. ಗುರು.ಮಂಜುಳ.ಗೋಪಿ. ವನಜ.ಕಮಲ ಇತರರಿದ್ದರು.

ಈಗಾಗಲೆ 7.50.ಎಕರೆ ಜಾಗ ಗುರುತಿಸಿ
ಪೊಲಿಸ್ ಕ್ವಾರ್ಟರ್ಸ್ ಗೆ,1.ಎಕರೆ.
ಅಂಬೇಡ್ಕರ್ ಭವನಕ್ಕೆ 1.ಎಕರೆ.
ವಿದ್ಯಾರ್ಥಿ ನಿಲಯಕ್ಕೆ 1.ಎಕರೆ.
ಉಳಿದ 3.34.ಎಕರೆ ಜಾಗವನ್ನು ನಿವೇಶನಕ್ಕಾಗಿ ಕಾಯ್ದಿರಿಸಲಾಗಿದೆ. ರಸ್ತೆ ಸಮಸ್ಯೆಯಿಂದ ವಿವೇಶನ ನೀಡಲು ಸಾದ್ಯವಾಗಿಲ್ಲ. ಈ ಬಗ್ಗೆ ಈಗಾಗಲೇ ಸರ್ವ ಸದಸ್ಯರ ಸಭೆ ನಡೆಸಲಾಗಿದೆ. ಶೀಘ್ರ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹಳೇಮೂಡಿಗೆರೆ ಗ್ರಾಮ ಪಂಚಾಯತಿ ಅದ್ಯಕ್ಷ ಜುಭೇರ್ ಹೇಳಿದರು

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author