AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಯಕರ್ನಾಟಕ ಸಂಘಟನೆಯ ವತಿಯಿಂದ ಸಿವಿಲ್ ಜಡ್ಜ್ ಆಗಿ ಆಯ್ಕೆಯಾದ ದಸ್ತಗೀರ್ ಸಾಬ್ ಮುಲ್ಲಾ ಅವರಿಗೆ ಸನ್ಮಾನ.#avintvcom

1 min read
Featured Video Play Icon

ಜಯಕರ್ನಾಟಕ ಸಂಘಟನೆಯ ವತಿಯಿಂದ ಸಿವಿಲ್ ಜಡ್ಜ್ ಆಗಿ ಆಯ್ಕೆಯಾದ ದಸ್ತಗೀರ್ ಸಾಬ್ ಮುಲ್ಲಾ ಅವರಿಗೆ ಸನ್ಮಾನ. ಬೆಳಗಾವಿ ಜಿಲ್ಲೆಯ ಅಥಣಿಯ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ದಸ್ತಗೀರ್ ಸಾಬ್ ಮುಲ್ಲಾ ಅವರು ಸಿವಿಲ್ ಜಡ್ಜ್ ಆಗಿ ಆಯ್ಕೆ ಯಾದ ಹಿನ್ನೆಲೆಯಲ್ಲಿ ಇಂದು ಅಥಣಿ ತಾಲೂಕ ಜಯಕರ್ನಾಟಕ ಸಂಘಟನೆಯ ವತಿಯಿಂದ ಸನ್ಮಾನವನ್ನು ಮಾಡಲಾಯಿತು. ಬೆಳಗಾವಿಯಲ್ಲಿ R,L LOW ಕಾಲೇಜ್ ನಲ್ಲಿ ಮೂರು ವರ್ಷ LLB ವಿದ್ಯಾಭ್ಯಾಸವನ್ನು ಮುಗಿಸಿ ಅವರು ಅಥಣಿ ನ್ಯಾಯಾಲಯದಲ್ಲಿ ಐದು ವರ್ಷಗಳಿಂದ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚಿಗೆ ಅವರು ಕಠಿಣ ಪರಿಶ್ರಮದಿಂದಾ ಅಭ್ಯಾಸವನ್ನು ಮಾಡಿ ಪೂರ್ವ ಪರೀಕ್ಷೆಯನ್ನು ನೀಡಿ ಇದೀಗ ಸಿವಿಲ್ ಜಡ್ಜ್ ಆಗಿ ಆಯ್ಕೆಯಾಗಿದ್ದು ನಮಗೆ ತುಂಬಾ ಸಂತಸ ತಂದಿದೆ ಯಂದು ಯುವ ಘಟಕದ ಅಧ್ಯಕ್ಷ ಶೋಯಬ್ ಚೌದರಿ ಮಾಧ್ಯಮಕ್ಕೆ ತಿಳಿಸಿದರು. ಈ ಸನ್ಮಾನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಮಹಾಂತೇಶ್ ವಸ್ತ್ರದ ಪತ್ರಕರ್ತರು ಅಥಣಿ ಭಾಗಿಯಾಗಿದ್ದರು. ನಂತರ ಮಾತನಾಡಿದ ಅವರು ತಾವು ಈ ಚಿಕ್ಕ ವಯಸ್ಸಿನಲ್ಲಿಯೇ ಸಿವಿಲ್ ಜಡ್ಜ್ ಆಗಿ ಆಯ್ಕೆಯಾಗಿದ್ದು ನಮಗೆ ತುಂಬಾ ಹೆಮ್ಮೆ ಹಾಗು ಸಂತೋಷದ ವಿಷಯವಾಗಿದೆ. ತಾವು ಬಡವರ ಹಾಗು ದಿನ ದಲಿತರಿಗೆ ನ್ಯಾಯ ವದಗಿಸಿ ಅವರ ಪಾಲಿನ ಆಶಾ ಕಿರಣವಾಗಬೇಕು ತಾವು ಇನ್ನು ಹೆಚ್ಚಿನ ಹುದ್ದೆಗೆ ನೇಮಕಗೊಳ್ಳುವ ಅಂತಾಗಲಿ ಎಂದು ಹರ್ಷವನ್ನು ವೇಕ್ತ ಪಡಿಸಿದರು. ನಂತರ ದಸ್ತಗೀರ್ ಸಾಬ್ ರವರ ಹುಟ್ಟುಹಬ್ಬ ವಿದ್ದ ಕಾರಣ ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಕೂಡಾ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಜಾಫರ್ ಬಿರಾದಾರ್, ವಿದ್ಯಾರ್ಥಿ ಘಟಕದ ಉಪಾಧ್ಯಕ್ಷರಾದ,ಕುಮಾರ್ ಯಾದವ್, ಸದಸ್ಯರಾದ ಪಯಿಮ್ ದ್ರಾಕ್ಷಿ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. www.avintv.com ಅನುಭವಿ ಸುದ್ದಿ ವರದಿಗಾರರು ಬೇಕಾಗಿದ್ದಾರೆ

 

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author