ಜೆಸಿಐ ಕಾರ್ಯಲಯದಲ್ಲಿ ನಡೆದ ಸೈಲೆಂಟ್ ವರ್ಕರ್ ಕಾರ್ಯಕ್ರಮ.ತಪ್ಪದೇ ವೀಕ್ಷಿಸಿ.#avintvcom
1 min read
*ನಾವು ಮಾಡುವ ವೃತ್ತಿ ಯಲ್ಲಿ ಪ್ರೀತಿ ಇದ್ದಾರೆ ಯಶಸ್ಸು ಖಂಡಿತ :ಡಾ.ಮೋಹನ್ ರಾಜಣ್ಣ. ಮೂಡಿಗೆರೆ: ಉದ್ಯೋಗ ಯಶಸ್ಸು ಆಗಬೇಕಾದರೆ ಉದ್ಯೋಗ ದಲ್ಲಿ ಪ್ರೀತಿ ಇರಬೇಕು ಕೆಲಸ ವನ್ನು ಪ್ರೀತಿ ಮಾಡಬೇಕು ಗೌರವ ಕೊಡಬೇಕು ಅವಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ರಾದ ಡಾ.ಮೋಹನ್ ರಾಜಣ್ಣ ಹೇಳಿದರು. ಅವರು ಗುರುವಾರ ಜೇಸಿಐ ಕಾರ್ಯಾಲಯದಲ್ಲಿ ಗೋಣಿಬೀಡು ಜೇಸಿಐ ಹೊಯ್ಸಳ ಸಂಸ್ಥೆಯ “ಸೈಲೆಂಟ್ ವರ್ಕರ್ “ಕಾರ್ಯಕ್ರಮ ದಲ್ಲಿ ಜನ್ನಾಪುರ ಮೆಸ್ಕಾಂ ಇಲಾಖೆ ಯ ಲೋಕೇಶ್ ರವರನ್ನು ಸನ್ಮಾನಿಸಿ ಮಾತನಾಡಿದರು. ಹೆಚ್ಚು ಪ್ರಚಾರ ಪಡಯದೇ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಲೈನ್ ಮ್ಯಾನ್ ಲೋಕೇಶ್ ಎಲೆಮರೆ ಕಾಯಿಯಂತೆ ಪ್ರಾಮಾಣಿಕತೆ. ಶ್ರದ್ದೆ ನಿಷ್ಠೆ ಯಿಂದ ಕೆಲಸ ಮಾಡುವ ಮೂಲಕ ವೃತ್ತಿ ಜೀವನ ದಲ್ಲಿ ಹೊಸ ಹೊಸ ಸಾಧನೆ ಗಳನ್ನು ಮಾಡಿದಾಗ ಗೌರವ -ಸನ್ಮಾನ ಪ್ರಾಪ್ತ ವಾಗಲು ಸಾಧ್ಯ. ಮತ್ತು ಲೋಕೇಶ್ ರವರು ಈ ಸಮಾಜಕ್ಕೆ ಮಾದರಿ ಎಂದರು.. . ಪೂರ್ವಧ್ಯಕ್ಸ ಎಂ. ಸಿ. ಆದರ್ಶ ಮಾತನಾಡುತ್ತ ಲೈನ್ ಮ್ಯಾನ್ ಕೆಲಸ ತುಂಬಾ ಕ್ಲಿಷ್ಟ ಕರವಾಗಿ ರುತ್ತೆ ಹಾಗೂ ಪ್ರತಿಯೊಬ್ಬರು ಸಹ ಲೈನ್ ಮ್ಯಾನ್ ಗಳನ್ನು ಗೌರವಿಸಬೇಕು. ಮತ್ತು ಇಂತಹ ವರು ಮುಂದಿನ ಪೀಳಿಗೆಗೆ ಮಾರ್ಗದರ್ಶನ ವಾಗಬೇಕು ಎಂದರು…. ಸಭೆಯ ಅಧ್ಯಕ್ಷತೆ ಯನ್ನು ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆ ಅಧ್ಯಕ್ಷ ರಾದ ಬಿ. ಕೆ.ಚಂದ್ರಶೇಖರ್ ವಹಿಸಿ ಮಾತನಾಡುತ್ತ ಶ್ರಮ ಪಟ್ಟು ಕೆಲಸ ಮಾಡಿದರೆ ಇಂತಹ ಸಂಘ ಸಂಸ್ಥೆ ಗಳು ಗುರುತಿಸುತ್ತವೆ ನಾನು ಬಡವ ನನ್ನಲ್ಲಿ ಏನು ಇಲ್ಲಾ ಅಂತ ಮನಸಿನಲ್ಲಿದ್ದರೆ ಅದರಿಂದ ಹೊರಬರಲು ಸಾಧ್ಯವಿಲ್ಲಾ. ನಾವು ಪ್ರಯತ್ನ ಮಾಡಿ ಸಾಧನೆ ಮಾಡಿದರೆ ನಮಗೆ ಯಾರಾದ್ರೂ ಸಹಾಯ ಮಾಡುತ್ತಾರೆ ಎಂದರು. ಸೈಲೆಂಟ್ ವರ್ಕರ್ ಲೋಕೇಶ್ ರವರಿಗೆ ಸನ್ಮಾನಿಸಲಾಯಿತು.. ಮೆಸ್ಕಾಂ ಇಲಾಖೆ ಯ ವೆಂಕಟೇಶ್. ಮಾತನಾಡಿದರು. ಸನ್ಮಾನ ಸ್ವೀಕರಿಸಿ ಲೋಕೇಶ್ ಮಾತನಾಡಿದರು.ಪೂರ್ವಾಧ್ಯಕ್ಸ ರಾದ. ಎಂ. ಸಿ. ಗಣೇಶ್ ಗೌಡ. ವೈ ಬಿ. ಸುಂದರೇಶ್ ಜಿ ಆರ್ . ಪರಮೇಶ್. ಡಿ ಡಿ ರಮೇಶ್. ರವಿಕುಮಾರ್. ರಂಜಿತ್. ಮದು. ಬಾಲಕೃಷ್ಣ. ಯು ಆರ್ ಸತ್ಯಕುಮಾರ್. ಗ್ರಾಮ ಪಂಚಾಯತಿ ಸದಸ್ಯ ಚಂದ್ರಶೇಖರ್. ಉಪಸ್ಥಿತರಿದ್ದರು. ಜೂನಿಯರ್ ಜೇಸಿ ಕು!!ಹನಿ ಆದರ್ಶ ರವರ ಜನ್ಮದಿನದ ಆಚರಣೆ ಸಹ ಆಚರಿಸಲಾಯಿತು.. ಕೊನೆಯಲ್ಲಿ ಕಾರ್ಯದರ್ಶಿ ಹೆಚ್ ಆರ್ ಯೋಗೇಶ್ ಕುಮಾರ್ ವಂದಿಸಿದರು……* ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್. www.avintv.com ಅನುಭವಿ ಸುದ್ದಿ ವರದಿಗಾರರು ಬೇಕಾಗಿದ್ದಾರೆ