AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಾರ್ಪೊರೇಶನ್ ಬ್ಯಾಂಕಿನ ಮ್ಯಾನೇಜರ್ ಲಂಚಕ್ಕಾಗಿ ಬೇಡಿಕೆ ಇಟ್ಟ ಘಟನೆ #avintvcom

1 min read
Featured Video Play Icon

ಕೋಳಿಗುಡ್ಡ ಗ್ರಾಮದ ಆನಂದ್ ಪಡಸಲಗಿ ಎಂಬ ಯುವಕ ತಾನು ಬೆಳೆದಿದ್ದ 1ಎಕರೆ ಕಬ್ಬನ್ನು ಕಾರ್ಖಾನೆಗೆ ಕಳುಹಿಸಿದ್ದಾನೆ ಕಾರ್ಖಾನೆಯವರು ಯುವಕನ ಅಳಗವಾಡಿ ಕಾರ್ಪೊರೇಷನ್ ಬ್ಯಾಂಕಿನಲ್ಲಿರುವ ಖಾತೆಗೆ ಹಣ ಜಮಾವಣೆ ಮಾಡಿದ್ದಾರೆ.. ತೆಗೆದುಕೊಳ್ಳಲು ಹೋದರೆ ಮ್ಯಾನೇಜರ ಹೇಳುವುದು ಬೇರೆನೆ ಕಥೆಯಾಗಿದೆ …. ಯಾವುದೋ ಬ್ಯಾಂಕಲ್ಲಿ ಇನ್ನ್ಯಾರೋ ಸಾಲ ಮಾಡಿದ್ದಕ್ಕೆ ರೈತನನ್ನು ಟಾರ್ಗೆಟ್ ಮಾಡಿ ರೈತನ ಕಬ್ಬಿನ ಬಿಲ್ಲನ್ನು ನೀಡುವಲ್ಲಿ ಮೀನಾಮೇಷ ಎಣಿಸುತ್ತಿರುವ ಬ್ಯಾಂಕಿನ ಮ್ಯಾನೇಜರ್… ಅಸಲಿಗೆ ನಡೆದದ್ದು ಇಷ್ಟೇ ಕೆವಿಜಿ ಬ್ಯಾಂಕಿನಲ್ಲಿ ತಂದೆಯ ಸಾಲವಿದೆ ಆ ಬ್ಯಾಂಕಿನ ಮ್ಯಾನೇಜರ್ ಕಾರ್ಪೊರೇಷನ್ ಬ್ಯಾಂಕಿನ ಮ್ಯಾನೇಜರ್ಗೆ ತಕರಾರು ಅರ್ಜಿಯನ್ನು ಇಟ್ಟಿದ್ದಾರೆ… ಅರ್ಜಿ ಯಾವುದೋ ನ್ಯಾಯಾಲಯದ ಆದೇಶ ಅಲ್ಲ… ಆದರೂ ರೈತನನ್ನು ಹಣ ಕೊಡದೆ ಸತಾಯಿಸುತ್ತಿರುವ ಅಧಿಕಾರಿ ಇದರಲ್ಲಿ ಏನಪ್ಪಾ ವಿಶೇಷ ಅಂತೀರಾ ಇಲ್ಲೇ ಇರೋದು ನೋಡಿ…ಒಂದಿಷ್ಟು ಸತಾಯಿಸಿದರೆ ರೈತ ತನ್ನಿಂದತಾನೇ ಏನಾದರೂ ಮಾಡಿ… ಸ್ವಾಮಿ ನನ್ನ ಖಾತೆಯಲ್ಲಿರುವ ಹಣವನ್ನು ನನಗೆ ಕೊಡಿ ಅಂತ ಅನ್ನುತ್ತಾನೆ ಆಗ 10 ಸಾವಿರಕ್ಕೆ ಬೇಡಿಕೆ ಇಟ್ಟ ಬ್ಯಾಂಕ್ ಮ್ಯಾನೇಜರ್…. ರೈತನ ಮನೆಯಲ್ಲಿ ವೃದ್ಧತಾಯಿ…ಮುಂದೆ ಹದಿನೈದು ದಿನಕ್ಕೆ ಆತನ ಮದುವೆ ಫಿಕ್ಸ್ ಆಗಿದೆ ಹಣದ ಅವಶ್ಯಕತೆ ತುಂಬಾನೇ ಇದೆ ಇಂತಹ ಸ್ಥಿತಿಯಲ್ಲಿ ರೈತರ ಏನು ಮಾಡಲಿ ಎಂದು ತಲೆ ಮೇಲೆ ಕೈ ಇಟ್ಟುಕೊಂಡು ಕುಳಿತುಕೊಂಡಿದ್ದಾನೆ… ಮೊದಲೇ ಅತಿವೃಷ್ಟಿ ಅನಾವೃಷ್ಟಿಯಿಂದ ಕಂಗಾಲಾಗಿರುವ ಹಿಂದೆ ಮಾಡಿದ ಸಾಲವನ್ನು ತುಂಬಲಾಗದೆ ಕುಟುಂಬ ನಿರ್ವಹಣೆಯ ಮಾಡದೆ ಅತ್ತಿಂದಿತ್ತ ಓಡಾಡುತ್ತಿರುವ ಸನ್ನಿವೇಶದಲ್ಲಿ ಇಂತಹ ಪ್ರಸಂಗ ಸಿಡಿಲು ಬಡಿದಂತೆ ಆಗಿದೆ ವೈಯಕ್ತಿಕ ಖಾತೆಯಲ್ಲಿರುವ ಹಣವನ್ನು ನೀಡಲು ನಿರಾಕರಿಸುತ್ತಿದ್ದಾರೆ ವರ್ಷವಿಡಿ ಸಾಲಸೋಲ ಮಾಡಿ ಕಷ್ಟಪಟ್ಟು ಬೆಳೆದ ಕಬ್ಬಿನ ಹಣವನ್ನು ತೆಗೆದುಕೊಳ್ಳಲು ಪಡಸಲಗಿ ಎಂಬ ಯುವಕ ಬ್ಯಾಂಕಿಗೆ ಹೋದಾಗ ರೈತನಿಗೆ ಆಘಾತ ಕಾದಿತ್ತು,ಕಾರಣ ಕೇಳಿದರೆ ಬೇರೆ ಬ್ಯಾಂಕಿನಲ್ಲಿರುವ ನಿಮ್ಮ ತಂದೆಯ ಸಾಲವನ್ನು ತುಂಬಬೇಕು. ಮತ್ತು ನನಗೆ ಹತ್ತು ಸಾವಿರ ಲಂಚ ಕೊಡಬೇಕು ಆಗ ನಿಮ್ಮ ಖಾತೆಯಲ್ಲಿರುವ ಹಣವನ್ನು ನೀಡುತ್ತೇವೆ ಎಂದು ಬ್ಯಾಂಕಿನವರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ ಇಷ್ಟಕ್ಕೂ ತಕರಾರು ಅರ್ಜಿ ಇಟ್ಟವರು ಬೇರೆ ಬ್ಯಾಂಕಿನ ಅಧಿಕಾರಿಗಳು ಕಾರ್ಪೋರೇಷನ್ ಬ್ಯಾಂಕಿಗೆ ಕೆವಿಜಿ ಬ್ಯಾಂಕಿಗೂ ಅಜಗಜಾಂತರ ವ್ಯತ್ಯಾಸವಿದೆ ಆದರೂ ಸಂಬಂಧಪಡದ ವಿಷಯದಲ್ಲಿ ಕಾನೂನು ಬಾಹಿರವಾಗಿ ತಲೆ ಹಾಕುತ್ತಿರುವುದು ಕಾರ್ಪೊರೇಷನ್ ಬ್ಯಾಂಕಿನ ಮ್ಯಾನೇಜರ್ ವಿರುದ್ಧ ಆಕ್ರೋಶಗೊಂಡ ಯುವಕ ನ್ಯಾಯಕ್ಕಾಗಿ ಹಾರೋಗೇರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ… ಇಂತಹ ಅವಿವೇಕತನದ ಪ್ರಸಂಗಗಳು ಹೆಚ್ಚಾಗುತ್ತಿರುವುದರಿಂದ ರೈತನ ಆತ್ಮಹತ್ಯೆಗೆ ಮುಂದಾಗುತ್ತಿರುವ ಘಟನೆಗಳು ಹೆಚ್ಚಾಗತೊಡಗಿವೆ…. ಸಂಬಂಧಪಟ್ಟ ಮೇಲಾಧಿಕಾರಿಗಳು ಬ್ಯಾಂಕ್ ಮ್ಯಾನೇಜರ್ ಬಿಸಿ ಮುಟ್ಟಿಸಿ ರೈತನಿಗೆ ನ್ಯಾಯ ಕೊಡಿಸಬೇಕಾಗಿದೆ.. www.avintv.com

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author