ಮಸ್ಕಿಯ ಹೈಟೆಕ್ ಇಸ್ಪೀಟ್ ಅಡ್ಡೆ ಮೇಲೆ ಐಜಿಪಿ ಜಾಗೃತ ತಂಡ ದಾಳಿ.ತಪ್ಪದೇ ವೀಕ್ಷಿಸಿ #avintvcom
1 min read
ಮಸ್ಕಿಯ ಹೈಟೆಕ್ ಇಸ್ಪೀಟ್ ಅಡ್ಡೆ ಮೇಲೆ ಐಜಿಪಿ ಜಾಗೃತತಂಡ ದಾಳಿ . ಮಸ್ಕಿ,ಫೆ.18 ಮಸ್ಕಿ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಹೈಟೆಕ್ ಇಸ್ಪೀಟ್ ಅಡ್ಡೆಯೊಂದರ ಮೇಲೆ ಬಳ್ಳಾರಿ ವಲಯ ಐಜಿಪಿ ಅವರ ಮಾರ್ಗ ದರ್ಶನ ತಂಡದ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ. ಮಸ್ಕಿ ಪಟ್ಟಣದ ಹೊರ ವಲಯದ ಬಾಳೆಕಾಯಿ ತೋಟದಲ್ಲಿ ಹಲವು ದಿನಗ ಳಿಂದ ಇಸ್ಪೀಟ್ ಜೂಜಾಟ ನಡೆಯುತ್ತಿತ್ತು. ಮಸ್ಕಿಯ ಪ್ರಭಾವಿ ರಾಜಕಾರಣಿಗಳು ಹಾಗೂ ಇಲ್ಲಿನ ಪೊಲೀಸ್ ಅಧಿಕಾರಿಗಳೇ ಈ ದಂಧೆಯಲ್ಲಿ ಶಾಮೀಲಾಗಿ ಬಹಿರಂಗವಾಗಿ ಯೇ ಇಸ್ಪೀಟ್ ಜೂಜಾಟ ನಡೆಸುತ್ತಿದ್ದರು ಎನ್ನುವ ಆರೋಪಗಳಿದ್ದವು. ಈ ಮಾಹಿತಿ ಸಂಗ್ರಹಿಸಿದ್ದ ಬಳ್ಳಾರಿ ವಲಯ ಐಜಿಪಿ ಡಾ.ನಂಜುಂಡಸ್ವಾಮಿ ಅವರು ಇಲ್ಲಿನ ಜೂಜಾಟ ಪತ್ತೆಗೆ ಪ್ರತ್ಯೇಕ ತಂಡ ರಚಿಸಿ ದ್ದರು. ಬಳ್ಳಾರಿ ವಲಯ ಐಜಿಪಿ ಅವರ ಮಾರ್ಗದರ್ಶನದ ಮೇಲೆ ಸಿಂಧನೂರು ಜಿ.ಚಂದ್ರಶೇಖರ ಸೇರಿ ಬಳ್ಳಾರಿ ಐಜಿ ಕಚೇರಿ ಹಾಗೂ ರಾಯಚೂರು ಎಸ್ಪಿ ಕಚೇರಿಯ ಇತರೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ, ಸಿಪಿಐ ದಾಳಿ ವೇಳೆ ಭರತ ಶೆಠ್ ಎನ್ನುವ ವ್ಯಕ್ತಿ ಸೇರಿ ಐದು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಂದಾಜು 3 ಲಕ್ಷ ರೂ. ನಗದು, ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡ ಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಬಹಿರಂಗ:ಹಲವು ದಿನಗಳಿಂದ ಇಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಸಂಗತಿ ಜಿಲ್ಲಾಧ್ಯಂತ ಸದ್ದು ಮಾಡಿತ್ತು , ಇದರ ನಡುವೆಯೇ ಮಸ್ಕಿ ಕಾಂಗ್ರೆಸ್ ಪಕ್ಷದ ನಾಯಕರು ಪತ್ರಿಕಾಗೋಷ್ಠಿ ಕರೆದು ಬಹಿರಂಗವಾಗಿ ಈ ಬಗ್ಗೆ ಆರೋಪ ಮಾಡಿದರು, ಖಾಕಿ ಪಡೆ ಹಾಗೂ ರಾಜಕಾರಣಿಗಳ ಬೆಂಗಾವ ಲಿಂದಲೆ ಇಸ್ಪೀಟ್ ಜೂಜಾಟ , ಮಟ್ಕಾ ಹಲೋ ಅಕ್ರಮ ದಂಧೆಗಳು ನಡೆಯುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು ಇಂತಹ ಆರೋಪಗಳು ಹೊರಬಿದ್ದ ಬೆನ್ನಲ್ಲೇ , ಈಗ ಐಜಿಪಿ ಮಾರ್ಗದರ್ಶನದ ತಂಡ ದಾಳಿ ಮಾಡಿರುವುದು ಪುಷ್ಟಿ ನೀಡಿದೆ , ಇದು ಮಸ್ಕಿಯ ಕೇವಲ ಒಂದು ಕಡೆ ಮಾತ್ರವಲ್ಲ ಇಂತಹ ಹಲವು ಅಡ್ಡೆಗಳು ಮಸ್ಕಿಯಲ್ಲಿ ತಲೆಯೆತ್ತಿದ್ದು ಎಲ್ಲಾ ಇಸ್ಪೀಟ್ ಜೂಜಾಟ ಅಡ್ಡ ಗಳಲ್ಲಿ ದಾಳಿ ನಡೆಯಬೇಕು ಇವರನ್ನು ಆಡಲು ಬೆಂಗಾವಲಾಗಿ ಕೆಲಸಮಾಡುವ ಕೆಲ ಪೊಲೀಸರು ಪ್ರಭಾವಿ ನಾಯಕರ ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಜರಗಿಸಿ ಎಂದು ಪ್ರಗತಿಪರ ಸಂಘಟನೆಗಳು ಹಾಗೂ ನಾಗರಿಕರ ಒತ್ತಾಯವಾಗಿದೆ. www.avintv.com ಅನುಭವಿ ಸುದ್ದಿ ವರದಿಗಾರರು ಬೇಕಾಗಿದ್ದಾರೆ