ಗೊಲಿಬಜೆ. ಕೋಳಿ ಕಬಾಬ್.ಸಂತೋಷ್ ಹೋಟೆಲ್ ನಲ್ಲಿ ರುಚಿ ರುಚಿ ಅಗಿರುತ್ತವೆ ಮೂಡಿಗೆರೆ ತಾ/ ಕಳಸ ಹೋಬಳಿ, ಬಾಳೆಹೊಳೆಯಲ್ಲಿ#avintvcom
1 min readಗೊಲಿಬಜೆ.
ಕೋಳಿ ಕಬಾಬ್.
ಮೂಡಿಗೆರೆ ತಾಲೂಕ್ ಕಳಸ ಹೋಬಳಿ, ಬಾಳೆಹೊಳೆಯ ಸಂತೋಷ್ ಹೋಟೆಲ್ ನ ಮಾಲೀಕ ಜಯಪ್ರಕಾಶ್ ಶೆಟ್ಟಿ ಹಲವು ವರ್ಷಗಳಿಂದ ಬಾಳೆಹೊಳೆಯಲ್ಲಿ ಹೋಟೆಲ್ ನಡೆಸಿಕೊಂಡು ಬರುತ್ತಿದ್ದಾರೆ.
2019 ರಲ್ಲಿ ಹೋಟೆಲ್ ಗೆ ಹೊಂದಿಕೊಂಡಿರುವ ಅವರ ಮನೆ ಪಕ್ಕದಲ್ಲೆ ಇರುವ ಭದ್ರಾ ನದಿಗೆ ಕೊಚ್ಚಿ ಹೋಗಿದ್ದು ಆ ಸಂದರ್ಭದಲ್ಲಿ ಕೆಲ ಕಾಲ ಬೇರೆಡೆ ವಾಸವಿದ್ದರು. ಸರ್ಕಾರ ಇವರಿಗೆ ಕಳಸ ಸಮೀಪ ಮನೆ ಕಟ್ಟಲು ಜಾಗವನ್ನು ನೀಡಿದ್ದು 1 ಲಕ್ಷ ಪರಿಹಾರವನ್ನು ನೀಡಿತ್ತು.
ಆದರೆ ಸರ್ಕಾರ ನೀಡಿರುವ ಜಾಗದಲ್ಲಿ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳು ಇಲ್ಲದೆ ಇರುವುದರಿಂದ ಅಲ್ಲಿ ಮನೆ ಕಟ್ಟಲು ಸಾದ್ಯವಾಗದೇ ಪ್ರಸ್ತುತ್ತ ಹೋಟೆಲ್ ನ ಶಿಥಿಲಗೊಂಡ ಮನೆಯಲ್ಲೆ ವಾಸಿಸುತ್ತಿದ್ದಾರೆ.
ಬಾಳೆಹೊಳೆಯಿಂದ ಮಾಗುಂಡಿಗೆ ಸಾಗುವ ರಸ್ತೆಯ ಪಕ್ಕದಲ್ಲಿರುವ ಜಯಪ್ರಕಾಶ ಶೆಟ್ಟಿ ಅವರು ಸಂತೋಷ್ ಹೋಟೆಲ್ ನ ದುಡಿಮೆಯಿಂದಲೆ ಬದುಕನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಈ ಹೋಟೆಲ್ ನಲ್ಲಿ ಸಿಗುವ ಗೋಲಿಬಜ್ಜೆ ಹಾಗೂ ಕೋಳಿ ಕಬಾಬ್ ನ ರುಚಿ ಸವಿದವನೇ ಬಲ್ಲ.
ಗರಿಗರಿ ಗೋಲಿಬಜ್ಜಿಯನ್ನು ಗಟ್ಟಿ ಚಟ್ನಿಯೊಂದಿಗೆ ಬೆರೆಸಿ ತಿನ್ನುವುದು ರುಚಿಕರವಾಗಿರುತ್ತದೆ. ಮಾಂಸಹಾರಿ ಖ್ಯಾದ್ಯಗಳು ರುಚಿ ರುಚಿ ಅಗಿರುತ್ತವೆ. ಜಯಪ್ರಕಾಶ್ ಶೆಟ್ಟರ ಮೂವರು ಹೆಣ್ಣು ಮಕ್ಕಳಲ್ಲಿ ಮೊದಲನೆಯವಳು ಪ್ರಪಿತಾ, ಬಿಕಾಂ ಪದವಿ ಪಡೆದ ಪ್ರಪಿತಾ ಬ್ಯಾಂಕಿಂಗ್ ಕಡೆಗೆ ಒಲವು. ಎರಡನೇಯವಳು ಪೂಜಾ. ಪೈನಲ್ ಇವರ್ ಬಿ.ಕಾಂ ಓದಿರುವ ಪೂಜಾ ಅಪ್ಪನೊಡನೆ ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡಿದ್ದಾಳೆ. ಮೂರನೇಯವಳು ಪ್ರಿಯ ಏಳನೇ ತರಗತಿ ಓದುತ್ತಿದ್ದು ವೈದ್ಯಳಾಗುವ ಆಸೆ ಇದೆ. ಹಲವಾರು ಕನಸು ಹೊತ್ತು ಬದುಕು ಸಾಗಿಸುತ್ತಿರುವ ಜಯಪ್ರಕಾಶ್ ಶೆಟ್ಟಿ ಅವರ ಕುಟುಂಬದ ಕನಸು ನನಸಾಗಲಿ ಎಂಬುದು ಅವಿನ್ ಟಿವಿ ಆಶಯ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.