AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸರಳವಾಗಿ ನಡೆದ ಹೇಮಾವತಿ ನದಿ ಮೂಲ ಜಾತ್ರೋತ್ಸವ .#avintvcom

1 min read
Featured Video Play Icon

ಸರಳವಾಗಿ ನಡೆದ ಹೇಮಾವತಿ ನದಿಮೂಲ ಜಾತ್ರೋತ್ಸವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿಯ ಹೇಮಾವತಿ ನದಿ ಮೂಲದ ಶ್ರೀಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವ ಕರೋನಾ ಹಿನ್ನಲೆಯಲ್ಲಿ ಸರಳವಾಗಿ ನಡೆಯಿತು. ಸರ್ಕಾರದ ಆದೇಶದಂತೆ ಕರೋನಾ ನಿರ್ಬಂದನೆಗಳ ಹಿನ್ನಲೆ ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುತ್ತಿರುವ ಜಾತ್ರೋತ್ಸವ ಸರಳವಾಗಿ ಜರುಗಿತು. ಎರಡು ದಿನಗಳ ನಡೆದ ಜಾತ್ರೋತ್ಸವದಲ್ಲಿ ಮೊದಲ ದಿನ ಸಾಮಾಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಎರಡನೇ ದಿನ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಅಡ್ಡಪಲ್ಲಕ್ಕಿ ಉತ್ಸವ ಹೊರಟು ಆನತಿ ದೂರದ ಅರಳಿಮರದವರೆಗೆ ಸಾಗಿ ದೇವಸ್ಥಾನದವರೆಗೆ ಉತ್ಸವ ನಡೆಯಿತು. ಜಾತ್ರೋತ್ಸವದ ಪ್ರಯುಕ್ತ ಹೋಮಾಧಿಗಳು ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಿದವು. ಜಾವಳಿ, ನಿಡುವಾಳೆ, ಬಾಳೂರು, ಕೂವೆ, ವಾಟೆಖಾನ್ ಸುತ್ತಮುತ್ತಲ್ಲಾ ಭಕ್ತಾಧಿಗಳು ಆಗಮಿಸಿ ದೇವರಿಗೆ ಹಣ್ಣುಕಾಯಿ ಅರ್ಪಿಸಿ ದೇವರ ದರ್ಶನ ಪಡೆದರು. ಕರೊನಾ ನಿರ್ಬಂಧದ ಹಿನ್ನಲೆಯಲ್ಲಿ ಅನ್ನದಾನ ವ್ಯವಸ್ಥೆ ಕಲ್ಪಿಸಿರಲಿಲ್ಲ. ಜಾತ್ರೆಗೆ ಪ್ರತಿವರ್ಷದಂತೆ ಸಾಲುಸಾಲು ಅಂಗಡಿ ಮುಂಗಟ್ಟುಗಳಿರದೆ ಬೆರಳಣಿಕೆಯ ಅಂಗಡಿಗಳು ಕಂಡು ಬಂದವು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಪ್ರವೀಣ್ ಗುರ್ಜರ್, ಉಪಾಧ್ಯಕ್ಷ ಯಶವಂತ್ ರಾವ್ ಗುರ್ಜರ್, ಕಾರ್ಯದರ್ಶಿ ಜಗದೀಶ್, ಸದಸ್ಯರಾದ ಚನ್ನಕೇಶವಗೌಡ, ಪ್ರದೀಪ್, ಗಣಪತಿ ಆಚಾರ್, ಸುರೇಶ್, ಶಶಿಧರ್, ಪರೀಕ್ಷಿತ್, ಸತೀಶ್, ಅರ್ಚಕರಾದ ಚರಣ್‍ಕಾರಂತ್, ಸ್ಥಳಿಯರಾದ ಆದರ್ಶ ಬಾಳೂರು, ಲಕ್ಷ್ಮಣಗೌಡ, ಶ್ರೀನಾಥ್, ಬಾಲಕೃಷ್ಣ, ಜಯರಾಜ್, ಜಾವಳಿ ಸುತ್ತಮುತ್ತಲ್ಲಾ ಗ್ರಾಮಸ್ಥರು ಹಾಗೂ ಪೋಲಿಸ್ ಸಿಬ್ಬಂದಿಗಳು ಹಾಜರಿದ್ದರು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author