ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ .#avintvcom
1 min read
ಬಹುಜನ ಸಮಾಜ ಪಕ್ಷ ಮೂಡಿಗೆರೆ ಘಟಕದಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಾಗೂ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ದಿನಾಂಕ 15-02-2021ನೇ ಸೋಮವಾರ ಬೆಳಗ್ಗೆ11ಗಂಟೆಗೆ ಮೂಡಿಗೆರೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆಸಲಾಯಿತು..ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ -ದೇಶದ ಭದ್ರತೆ ಇರುವುದು ಗ್ರಾಮ ಪಂಚಾಯಿತಿಯಿಂದ ಆಗಾಗಿ ಅಂತಹ ಕೆಲಸ ಮಾಡಿ ಬಿ ಎಸ್ ಪಿ ಯ ಸದಸ್ಯರು ಒಳ್ಳೆಯ ಮಾಧರಿಯಾಗಬೇಕು ದೇಶವನ್ನು ದಿವಾಳಿತನಕ್ಕೇ ನೂಕುತ್ತಿರುವ ಸರ್ಕಾರಕ್ಕೆ ತಕ್ಕ ಉತ್ತರ ಕೊಡುವಲ್ಲಿ ಬಿ ಎಸ್ ಪಿ ಯ ಪಾತ್ರ ಬಹು ಮುಖ್ಯ ಆಗಾಗಿ ಕಾರ್ಯಕರ್ತರು ಕಾರ್ಯೋನ್ಮುಕರಾಗ ಬೇಕು ಅಧಿಕಾರವನ್ನು ಯಾವುದೇ ಕಾರಣಕ್ಕೂ ದುರುಪಯೋಗ ಪಡಿಸಿಕೊಳ್ಳದೆ ತಮ್ಮ ಆಸೆಗೆ ತಮ್ಮ ತನವನ್ನು ಬಲಿಕೊಡಬೇಡಿ ಪಕ್ಷದ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಅಧಿಕಾರ ನೀಡಬೇಕು ಎಂದು ನೂತನ ಸದಸ್ಯರಿಗೆ ಕಿವಿ ಮಾತು ಹೇಳಿದರು ಜಿಲ್ಲಾ ಸಂಯೋಜಕರು ಯು ಬಿ ಮಂಜಯ್ಯ ಮಾತನಾಡಿ- ಸೋತವರು ನಿರಾಶ ಮನೋಭಾವದಿಂದ ಹೊರ ಬರಬೇಕು ಅಲ್ಲದೆ ಸಕ್ರಿಯರಾಗಿ ಸಮಾಜದಲ್ಲಿ ತೊಡಗಿಸಿಕೊಳ್ಳಬೇಕು ಗೆದ್ದವರು ಪಂಚಾಯಿತಿಯಲ್ಲಿ ಬರುವ ಎಲ್ಲ ಸೌಲಭ್ಯವನ್ನು ಎಲ್ಲ ಜಾತಿಯ ಬಡವರಿಗೆ ಕೊಡಿಸುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಿ ಎಸ್ ಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಎಲ್ ಬಿ ರಮೇಶ್ ಮಾತನಾಡಿ- ಬಹುಜನ ಸಮಾಜ ಪಕ್ಷದ ಅಭ್ಯರ್ಥಿಗಳು ಶಿಸ್ತಿನ ಸಿಪಾಯಿಗಳಂತೆ ವರ್ತಿಸಬೇಕು ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ನೋಡಿಕೊಳ್ಳಬೇಕು ಜೊತೆಗೆ ಗ್ರಾಮದ ಅಭಿರುದ್ದೀಯೆ ಮೂಲ ಮಂತ್ರ ಆಗಬೇಕು ಎಂದರು ಕಾರ್ಯಕ್ರಮದ ಕುರಿತು ಬಿ ಎಂ ಶಂಕರ್, ಹಾಂದಿ ಬಾಬಣ್ಣ, ಪಿ ಕೆ ಮಂಜುನಾಥ್ ಮಾತನಾಡಿದರು ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಜಾಕೀರ್ ಅಲಿಖಾನ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಕ್ಕಿ ಮಂಜುನಾಥ್,ಜಿಲ್ಲಾ ಬಿ ವಿ ಎಫ್ ನ ಸಂಯೋಜಕ ಬಿ ರಾಮು ತಾಲ್ಲೂಕು ಸಂಯೋಜಕರು ವಸಂತ್,ಹೊರಟ್ಟಿ ಶ್ರೀಕಾಂತ್,ಪ್ರಧಾನ ಕಾರ್ಯದರ್ಶಿ ಮಹೇಶ್, ಬ್ಲಾಕ್ ಅಧ್ಯಕ್ಷರು ಎಂ ಡಿ ಶಂಕರ್,ಬಕ್ಕಿ ರವಿ,ಅಣ್ಣಪ್ಪ,ನಾಗರಾಜ್,ನಾಗೇಶ್,ರವಿ,ಬೆಟ್ಟಗೆರೆ ಗ್ರಾ ಪಂ,ಅಧ್ಯಕ್ಷರು ಸುಶೀಲ ದೊಡ್ಡಯ್ಯ, ಗೋಣಿಬೀಡು ಗ್ರಾ.ಪಂ,ಜುಬೆಧಾ ಇದ್ದರು ಕಾರ್ಯಕ್ರಮದಲ್ಲಿ ಎಲ್ಲ ನೂತನ ಪಂಚಾಯಿತಿ ಗ್ರಾ.ಪಂ.ಪಧಾಧಿಕಾರಿಗಳು ಹಾಗೂ ಬಿ ಎಸ್ ಪಿ ಯಿಂದ ಸ್ಪರ್ದಿಸಿ ಸೋತ ಅಭ್ಯರ್ಥಿಗಳಿಗೂ ಸನ್ಮಾನಿಸಲಾಯಿತು ಜೊತೆಗೆ ಮೂಡಿಗೆರೆ ಪತ್ರಕರ್ತ ಅಬ್ಬಾಸ್ ಕಿರುಗುಂದ ಇವರನ್ನು ಗೌರವಿಸಲಾಯಿತು…ಇದೇ ಸಂದರ್ಭದಲ್ಲಿ ಮೂಡಿಗೆರೆ ಹಾಗು ಜನ್ನಾಪುರ ಆಟೋ ಸಂಘದ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯ್ತು…ಕಾರ್ಯಕ್ರಮದ ನಿರೂಪಣೆಯನ್ನು ಮಹೇಶ್ ಹಾಗೂ ಸ್ವಾಗತ ಶ್ರೀಕಾಂತ್ ವಂದನಾರ್ಪಣೆಯನ್ನು ಬಕ್ಕಿ ಮಂಜುನಾಥ್ ನೆರವೇರಿಸಿದರು…. ವರದಿ ಮಗ್ಗಲಮಕ್ಕಿ ಗಣೇಶ್ ಬ್ಯುರೋ ನ್ಯೂಸ್