AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಶ್ರಮಿಸಲು ಸದಾ ಸಿದ್ದ” #avintvcom

Featured Video Play Icon

“ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಶ್ರಮಿಸಲು ಸದಾ ಸಿದ್ದ”

 

ವಿಶ್ವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ, ನಮ್ಮ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ. ಅಶ್ವತ್ಥ ನಾರಾಯಣ ಅವರ ಉಪಸ್ಥಿತಿಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಉದ್ಘಾಟಿಸಿ. ಬಳಿಕ ಖ್ಯಾತ ಸಾಹಿತಿಗಳಾದ ನಾಡೋಜ ಡಾ. ಸಿದ್ದಲಿಂಗಯ್ಯ ,ಪದ್ಮಶ್ರೀ ಪುರಸ್ಕೃತ ಶ್ರೀ ಕೆ.ವೈ ವೆಂಕಟೇಶ್, ಸಾಧನೆಗೈದ 7 ಹಿರಿಯ ನಾಗರಿಕರು, ವಿಕಲಚೇತನರ ಏಳಿಗೆಗೆ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳು, ವಿಶೇಷ ಶಿಕ್ಷಕರು, ಸೇರಿದಂತೆ ಒಟ್ಟು 30 ಜನ ಸಾಧಕರನ್ನು ಸನ್ಮಾನಿಸಿ, 12.75 ಲಕ್ಷ ಮೌಲ್ಯದ ಪ್ರಶಸ್ತಿ ಪ್ರಧಾನ ಮಾಡಿದರು.

“ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು” ಎಂದು ಡಿವಿಜಿಯವರು ಹಿರಿಯರ ಹಾಗೂ ಕಿರಿಯರ ಬಾಂಧವ್ಯದ ಕುರಿತು ಅದ್ಭುತವಾಗಿ ವರ್ಣಿಸಿದ್ದಾರೆ. ಅದರಂತೆ ನಾವು ಹಿರಿಯರನ್ನು ಗೌರವಿಸಿ ಅವರ ಮಾರ್ಗದರ್ಶನದಂತೆ ನಡೆಯೋಣ. ಹಿರಿ ವಯಸ್ಸಿನಲ್ಲೂ ಸಾಧನೆ ಮಾಡಿದ ಇಂತಹ ಸಾಧಕರನ್ನು ಗೌರವಿಸುವುದು ನಮ್ಮ ಕರ್ತವ್ಯ. ಅದರಂತೆ ವಿಕಲಚೇತನರು ಕೂಡ ಸಾಧನೆ ಮಾಡಿದ್ದು, ವಿಕಲಾಂಗತೆ ಸಾಧನೆಗೆ ಅಡ್ಡಿಯಲ್ಲ ಎಂದು ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ವಿಕಲಚೇತನರಿಗೆ ಸದಾ ಆತ್ಮ ವಿಶ್ವಾಸ ತುಂಬುತ್ತಾ ಅವರ ಏಳಿಗೆಗೆ ಶ್ರಮಿಸಲು ನಾವು ಸದಾ ಸಿದ್ಧ ಎಂದು ಹೇಳಿದರು.

ಈ ಸಮಾರಂಭದಲ್ಲಿ ಸಚಿವರಾದ ಶ್ರೀ ಆರ್.ಅಶೋಕ್ ಜಿ, ಶ್ರೀ ಎಸ್.ಟಿ ಸೋಮಶೇಖರ್ ಜಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಡಾ.ಉದಯ್ ಬಿ. ಗರುಡಾಚಾರ್, ವಿಧಾನಪರಿಷತ್ ಸದಸ್ಯರಾದ ಶ್ರೀ ರಮೇಶ್ ಗೌಡ, ಇಲಾಖೆಯ ನಿರ್ದೇಶಕರು, ಅಧಿಕಾರಿಗಳು ಉಪಸ್ಥಿತರಿದ್ದರು.

“अपंग आणि ज्येष्ठ नागरिकांच्या सक्षमीकरणासाठी श्रम करण्यास सदैव तत्पर”

जागतिक अपंग व ज्येष्ठ नागरिक दिनाचा भाग म्हणून बेंगळूरु मध्ये आमच्या विभागाकडून आयोजित केलेल्या कार्यक्रम माननीय उपमुख्यमंत्री डॉ अश्वत नारायण यांच्या उपस्थितीत राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी उद्घाटन करुन.नंतर प्रसिद्ध लेखक नाडोज डॉ. सिद्दलिंगय्या,पद्मश्री पुरस्कार श्री के.वै.वेंकटेश, साधना केलेल्या 7 ज्येष्ठ नागरिक,अपंगांच्या विकासासाठी श्रम घेणाऱ्या स्वयंसेवा संस्था, विशेष शिक्षक यांच्या समवेत साधकांचा सत्कार करून,12.75 लाखाचे मानधन देऊन पुरस्कार दिले.

नवीन फुल जुने मुळ्या सोबत असल्यावर झाड सुंदर दिसत असे  डीव्हीजी यांनी वरीष्ठ आणि लहान बांधव्याच्या बद्दल खूप छान वर्णन केले आहेत.त्याच्याप्रमाणे आम्ही वरिष्ठांचे आदर करुन,त्यांच्या मार्गदर्शनाप्रमाणे चालुया.अशा वयात साधना केलेल्या साधकांचा आदर करणे हे आमचे कर्तव्य आहे.तसेच अपंग लोकांनी ही साधना केले असून,अपंगत्व हा साधनेसाठी अडथळा नसून, संपूर्ण समाजासाठी एक आदर्श आहे.अपंगांना आत्मविश्वास देऊन त्यांच्या विकासासाठी श्रम करण्यासाठी आम्ही सदा सिद्द आहेत असे सांगीतले.

यावेळी मंत्री मंत्री श्री आर.अशोक जी, श्री एस.टी. सोमशेखर जी, कार्यक्रमाच्या अध्यक्षस्थानी असलेले आमदार उदय बी.गरुडाचार,विधानपरिषद सदस्य श्री रमेश गौड, विभागाचे संचालक व अधिकारी उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author