day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಕಠಿಣ ಪರೀಕ್ಷೆ ಮತ್ತು ನಿರಂತರ ಪ್ರಯತ್ನ ಯಶಸ್ಸಿನ ಗುಟ್ಟು – ಲೆಕ್ಕಪರಿಶೋಧಕ ಶ್ರೀಶೈಲ ಹಳಿಂಗಳಿ.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಕಠಿಣ ಪರೀಕ್ಷೆ ಮತ್ತು ನಿರಂತರ ಪ್ರಯತ್ನ ಯಶಸ್ಸಿನ ಗುಟ್ಟು – ಲೆಕ್ಕಪರಿಶೋಧಕ ಶ್ರೀಶೈಲ ಹಳಿಂಗಳಿ.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಕಠಿಣ ಪರೀಕ್ಷೆ ಮತ್ತು ನಿರಂತರ ಪ್ರಯತ್ನ ಯಶಸ್ಸಿನ‌ ಗುಟ್ಟು – ಲೆಕ್ಕಪರಿಶೋಧಕ ಶ್ರೀಶೈಲ ಹಳಿಂಗಳಿ.

ಅಥಣಿ – ನಮ್ಮ ಅಥಣಿ ಭಾಗದ ವಿಧ್ಯಾರ್ಥಿಗಳಿಗೆ ಲೆಕ್ಕಪರಿಶೋಧಕರಾಗಲು ಉತ್ತಮ ಅವಕಾಶಗಳಿದ್ದು ಆ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ನಿರಂತರವಾದ ಪ್ರಯತ್ನಮಾಡಿದರೆ ಲೆಕ್ಕಪರಿಶೋಧಕ ಸ್ಥಾನವನ್ನು ಅಲಂಕರಿಸಬಹುದು ಎಂದು ನೂತನ ಲೆಕ್ಕಪರಿಶೋಧಕ ಶ್ರೀಶೈಲ ಹಳಿಂಗಳಿ ಅವರು ಹೇಳಿದರು.

ಅವರು ಸ್ಥಳೀಯ ಶ್ರೀ ಕೆ ಎ ಲೋಕಾಪೂರ ಪದವಿ ಮಹಾವಿದ್ಯಾಲಯದಲ್ಲಿ 2012-13 ನೇ ಸಾಲಿನ ಬಿ.ಕಾಮ್ ಅಂತೀಮ ವರ್ಷದ ವಿದ್ಯಾರ್ಥಿಗಳ ಸಂಘದ ವತಿಯಿಂದ ನೂತನವಾಗಿ ಲೆಕ್ಕಪರಿಶೋಧಕರಾಗಿ ಆಯ್ಕೆಯಾದ ಶ್ರೀಶೈಲ ಹಳಿಂಗಳಿ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.

ಮುಂದುವರೆದು ಮಾತನಾಡುತ್ತಾ ನಾನು ಮೂಲತಃ ಅಥಣಿ ತಾಲೂಕಿನ ಸತ್ತಿ ಎಂಬ ಗ್ರಾಮದವನಾಗಿದ್ದು  ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೆಲವ ಕನಸು ಕಾಣುವುದು ಮಾತ್ರ ಮಾಡುತ್ತಾರೆ ಆದರೆ ಆ ಕನಸು ನನಸು ಮಾಡಲು ಕಠಿಣ ಶ್ರಮವಹಿಸಿ ಆಸಕ್ತಿಯಿಂದ ಕಲಿಕೆ ಮಾಡಬೇಕು. ನಮ್ಮ ಜಿಲ್ಲೆಯಾದ ಬೆಳಗಾವಿಯಲ್ಲಿ ಲೆಕ್ಕಪರಿಶೋಧಕರಾಗಲು ಉತ್ತಮ ಅವಕಾಶಗಳಿದ್ದು ಅವುಗಳನ್ನು ಉತ್ತಮವಾಗಿ ಬಳಸಿಕೊಂಡು ಯಶಸ್ಸು ಸಾಧಿಸಿ ಎಂದರು.

ನಂತರ ಮಾತನಾಡಿದ ಪ್ರಭಾರಿ ಪ್ರಾಚಾರ್ಯ ರಾಮಚಂದ್ರ ನಾಯಿಕ ಮಾತನಾಡುತ್ತಾ ಈ ನೂತನ ಲೆಕ್ಕಪರಿಶೋಧಕರ ಅನುಭವದ ಮಾತುಗಳನ್ನು ಎಲ್ಲ ವಿದ್ಯಾರ್ಥಿಗಳು ಕೇಳಿಸಿಕೊಂಡು ಅವರು ಕೂಡ ಲೆಕ್ಕಪರಿಶೋಧಕರಾಗಿ ನಮ್ಮ ದೇಶದ ಆರ್ಥಿಕ ವ್ಯವಸ್ಥೆಗೆ ತಮ್ಮದೇಯಾದ ಕೊಡುಗೆ ಕೊಡುವಂತವರಾಗಿ ಎಂದು ಕರೆಕೊಟ್ಟರು.

ಅನಂತರದಲ್ಲಿ ಉಪಪ್ರಾಚಾರ್ಯ ಗಿರೀಶ ಕುಲಕರ್ಣಿ, ಶಿಕ್ಷಕ ಸಂತೋಷ ಬಡಕಂಬಿ‌ ಮಾತನಾಡಿದರು.

ನಂತರ ನೂತನವಾಗಿ ಲೆಕ್ಕಪರಿಶೋಧಕರಾಗಿ ಆಯ್ಕೆಯಾದ ಶ್ರೀಶೈಲ ಹಳಿಂಗಳಿ ಹಾಗೂ ಅವರ ಪಾಲಕರನ್ನು ಸನ್ಮಾನಿಸಲಾಯಿತು.

ಈ ವೇಳೆ ವಿನಾಯಕ ದೇಶಪಾಂಡೆ, ವಿಶಾಲ ದೇಶಪಾಂಡೆ, ಅರ್ಚನಾ ಜೋಷಿ, ಗೀತಾ ಕುಲಕರ್ಣಿ, ಭಾಗ್ಯಶ್ರೀ ಗುಂಡಾ, ಪ್ರವೀಣ ನಾಯಿಕ, ಚಿರಂಜೀವಿ ಖೋತ, ನಾಗರಾಜ ತೆವರಟ್ಟಿ, ನೇತಾಜಿ‌ ಮಾಲುಸರೆ, ವಿಶ್ವೇಶ ಅಥಣೀಕರ, ಸುಪ್ರೀತ ಚೌಗಲಾ, ಯಶೋಧಾ ಕರೋಲಿ, ಶಾರೂಜಖಾನ ಸಾಂಗಲೀಕರ, ಗಂಗಪ್ಪಾ ಹಳಿಂಗಳಿ, ಬೌರವ್ವಾ ಹಳಿಂಗಳಿ, ಸಿದ್ದಪ್ಪಾ ಹಳಿಂಗಳಿ, ಲಕ್ಷ್ಮಿ ಹಳಿಂಗಳಿ, ಸೋಮನಾಥ ತೇಲಿ, ಪರಪ್ಪಾ ಅವಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪೊಟೊ‌ ಶೀರ್ಷಿಕೆ – ನೂತನವಾಗಿ ಲೆಕ್ಕಪರಿಶೋಧಕರಾಗಿ ಆಯ್ಕೆಯಾದ ಶ್ರೀಶೈಲ ಹಳಿಂಗಳಿ ಅವರನ್ನು ಸನ್ಮಾನಿಸಿದ ಕ್ಷಣ(12 ಅಥಣಿ- 01).

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author